6
  • Latest
Swarnavalli The Venerable's journey towards promoting agriculture!

ಸ್ವರ್ಣವಲ್ಲಿ | ಶ್ರೀಗಳ ನಡಿಗೆ ಕೃಷಿಯ ಕಡೆಗೆ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಸ್ವರ್ಣವಲ್ಲಿ | ಶ್ರೀಗಳ ನಡಿಗೆ ಕೃಷಿಯ ಕಡೆಗೆ!

AchyutKumar by AchyutKumar
in ಲೇಖನ
Swarnavalli The Venerable's journey towards promoting agriculture!

ಕೃಷಿ ಜಯಂತಿ ಅಂಗವಾಗಿ ನಡೆದ ಸ್ಪರ್ಧೆ ಚಿತ್ರಣ (ಫೈಲ್ ಫೋಟೋ)

ಎಲ್ಲಾ ಮಠ-ಮಾನ್ಯಗಳು ಆಧ್ಯಾತ್ಮಿಕ ಚಿಂತನೆ ಪ್ರಸರಿಸುವುದು ಸಾಮಾನ್ಯ. ಆದರೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸೋಂದಾದಲ್ಲಿರುವ ಸ್ವರ್ಣವಲ್ಲಿ ಸಂಸ್ಥಾನ ಆಧ್ಯಾತ್ಮಿಕ ಚಿಂತನೆಯ ಜೊತೆ ಕೃಷಿ ಜಾಗೃತಿ ಕಾರ್ಯಾಗಾರವನ್ನು ಸಹ ನಡೆಸುತ್ತಿದೆ.

ADVERTISEMENT

ಅಕ್ಷರಾಭ್ಯಾಸ ಕಲಿಯುವ ಮುನ್ನವೇ ಮಕ್ಕಳಿಗೆ ವಿವಿಧ ಎಲೆ-ಬೀಜಗಳನ್ನು ಗುರುತಿಸುವ ಸ್ಪರ್ಧೆಯನ್ನು ಸ್ವರ್ಣವಲ್ಲಿ ಮಠ ಆಯೋಜಿಸುತ್ತದೆ. ಪುರುಷರಿಗೆ ತೆಂಗಿನ ಕಾಯಿ ಸುಲಿಯುವ ಸ್ಪರ್ಧೆ, ಮಹಿಳೆಯರಿಗೆ ಅಡಿಕೆ ಸಲಿಯುವ ಸ್ಪರ್ಧೆ ಸೇರಿ ಬಗೆ ಬಗೆಯ ಕೃಷಿ ಸ್ಪರ್ಧೆಗಳು ಇಲ್ಲಿ ನಡೆಯುತ್ತವೆ. ಕಳೆದ 18 ವರ್ಷಗಳಿಂದ ಸ್ವರ್ಣವಲ್ಲಿ ಮಠವೂ ಕೃಷಿ ಉತ್ತೇಜನಕ್ಕಾಗಿ ನಾನಾ ಬಗೆಯ ಪ್ರಯತ್ನ ನಡೆಸುತ್ತಿದ್ದು, `ಕೃಷಿ ಹಾಗೂ ಆಧ್ಯಾತ್ಮ’ದ ಸಮತೋಲನ ಕಾಪಾಡಿಕೊಳ್ಳುವ ಪ್ರಯತ್ನ ಈ ವರ್ಷವೂ ಮುಂದುವರೆದಿದೆ.

ಅAಗನವಾಡಿಗೆ ಹೋಗುವ ಮಕ್ಕಳನ್ನು ಮಠಕ್ಕೆ ಕರೆಯಿಸಿ ಅವರಿಗೆ ವಿವಿಧ ಎಲೆ, ಬೀಜಗಳನ್ನು ಪರಿಚಯಿಸಲಾಗುತ್ತದೆ. ಅದಾದ ನಂತರ ತರಕಾರಿಗಳನ್ನು ಗುರುತಿಸುವ ಸ್ಪರ್ಧೆ ಆಯೋಜಿಸಿ ಬಹುಮಾನ ನೀಡಲಾಗುತ್ತದೆ. ನೂರಾರು ಚಿಣ್ಣರು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗಿಯಾಗುತ್ತಿದ್ದು, ಅವರ ಪಾಲಕರು ಸಹ ಇದನ್ನು ಸಂಭ್ರಮಿಸುತ್ತಿದ್ದಾರೆ.

Advertisement. Scroll to continue reading.

ಒಂದರಿAದ ನಾಲ್ಕನೇ ತರಗತಿಯ ಮಕ್ಕಳಿಗೆ ಕಾಳು, ಬೀಜಗಳನ್ನು ಗುರುತಿಸುವ ಸ್ಪರ್ಧೆ, 5ರಿಂದ 7ನೇ ತರಗತಿಯ ಮಕ್ಕಳಿಗೆ ವಿವಿಧ ಸಸ್ಯಗಳ ಎಲೆಗಳನ್ನು ಗುರುತಿಸುವ ಸ್ಪರ್ಧೆ ನಡೆಯುತ್ತದೆ. ಆ ಮೂಲಕ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಕೃಷಿ ಬಗ್ಗೆ ಆಸಕ್ತಿಮೂಡಿಸುವ ಪ್ರಯತ್ನ ಸೋಂದಾ ಶ್ರೀಗಳಿಂದ ನಡೆಯುತ್ತಿದೆ.

Advertisement. Scroll to continue reading.

ಪ್ರೌಢಶಾಲಾ ಮಕ್ಕಳಿಗಾಗಿ ಮಠವೂ ಕೃಷಿ ರಸಪ್ರಶ್ನೆ ಸ್ಪರ್ಧೆ ಹಾಗೂ ಕೃಷ್ಣ ವಿಜ್ಞಾನ ಮಾದರಿ ಸ್ಪರ್ಧೆ ಆಯೋಜಿಸುತ್ತದೆ. `ಥಟ್ ಅಂತ ಹೇಳಿ’ ಮಾದರಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ಇಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪರಿಸರ, ಪ್ರಾಣಿ, ಪಕ್ಷಿ, ಜಲಮೂಲ, ಹವಾಮಾನ, ಅರಣ್ಯ, ಆಹಾರಗಳ ಕುರಿತು ಪ್ರಶ್ನೆಗಳಿರುತ್ತವೆ, ಸಾಕಷ್ಟು ಮಕ್ಕಳು ಚುಟುಕು ಹಾಗೂ ಚುರುಕಾಗಿ ಇಲ್ಲಿ ಭಾಗವಹಿಸುತ್ತಾರೆ.

ಕೃಷಿ ಜಯಂತಿ ಅಂಗವಾಗಿ ಮಠದ ವಿವಿಧ ಅಂಗಸAಸ್ಥೆಗಳಿAದ ರೈತರು, ರೈತ ಕುಟುಂಬದವರಿಗಾಗಿ ಸ್ಪರ್ಧೆ, ವಿವಿಧ ಕಾರ್ಯಕ್ರಮಗಳನ್ನು ಮಠ ಆಯೋಜಿಸುತ್ತದೆ. ಕೃಷಿ ಕ್ಷೇತ್ರದ ಸಾಧಕರಿಗೆ ವಿವಿಧ ಪ್ರಶಸ್ತಿ-ಸನ್ಮಾನಗಳನ್ನು ನೀಡಲಾಗುತ್ತದೆ. ಸಾಧಕ ಕೃಷಿಕರನ್ನು ಗುರುತಿಸಿ ಅವರನ್ನು ಉತ್ತೇಜಿಸುವಲ್ಲಿ ಸ್ವರ್ಣವಲ್ಲಿ ಮಠ ಮುಂಚೂಣಿಯಲ್ಲಿದೆ.

ಅoದ ಹಾಗೇ, ಮೇ 10 ಹಾಗೂ 11ರಂದು ಮಠದಲ್ಲಿ ಈ ಎಲ್ಲಾ ಬಗೆಯ ವಿಶೇಷತೆಗಳನ್ನು ಒಳಗೊಂಡ ಕೃಷಿ ಜಯಂತಿ ಕಾರ್ಯಕ್ರಮವೂ ನಡೆಯಲಿದೆ.

Previous Post

ಹೊಗೆ.. ಹೊಗೆ.. ಹೊಗೆ: ಹೊತ್ತಿ ಉರಿದ ಹೊಟೇಲು!

Next Post

ಕಾಡಿನಲ್ಲಿ ಕಾನೂನುಬಾಹಿರ ಆಟ: ಸಿಕ್ಕಿಬಿದ್ದವರ ಬಳಿ ಸಿಕ್ಕಿತು 25 ಸಾವಿರ!

Next Post
ಕಾಲಿಗೆ ಸುತ್ತಿದ ಬಲೆ: ಪಾತಿದೋಣಿಯಲ್ಲಿದ್ದ ಮೀನುಗಾರ ಸಾವು!

ಕಾಡಿನಲ್ಲಿ ಕಾನೂನುಬಾಹಿರ ಆಟ: ಸಿಕ್ಕಿಬಿದ್ದವರ ಬಳಿ ಸಿಕ್ಕಿತು 25 ಸಾವಿರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ