6
  • Latest
Free for me too.. Free for you too If the PDO decides the commercial store in the government building is also free!

ನನಗೂ ಪ್ರೀ.. ನಿನಗೂ ಪ್ರೀ: PDO ಮನಸ್ಸು ಮಾಡಿದರೆ ಸರ್ಕಾರಿ ಕಟ್ಟಡದಲ್ಲಿನ ವಾಣಿಜ್ಯ ಮಳಿಗೆಯೂ ಪ್ರೀ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ನನಗೂ ಪ್ರೀ.. ನಿನಗೂ ಪ್ರೀ: PDO ಮನಸ್ಸು ಮಾಡಿದರೆ ಸರ್ಕಾರಿ ಕಟ್ಟಡದಲ್ಲಿನ ವಾಣಿಜ್ಯ ಮಳಿಗೆಯೂ ಪ್ರೀ!

AchyutKumar by AchyutKumar
in ರಾಜ್ಯ
Free for me too.. Free for you too If the PDO decides the commercial store in the government building is also free!

ಸರ್ಕಾರಿ ಹಣ ವೆಚ್ಚ ಮಾಡಿ ನಿರ್ಮಿಸಲಾದ ಕಟ್ಟಡಗಳನ್ನು ಅಂಕೋಲಾದ ಅವರ್ಸಾ ಗ್ರಾಮ ಪಂಚಾಯತವೂ ಕೆಲವರಿಗೆ ಬಾಡಿಗೆಗೆ ನೀಡಿದೆ. ಆದರೆ, ಬಾಡಿಗೆದಾರರಿಂದ ಬಾಡಿಗೆ ಹಣ ಸ್ವೀಕರಿಸಲು ಗ್ರಾಮ ಪಂಚಾಯತಗೆ ಪುರಸೋತಾಗಿಲ್ಲ!

ADVERTISEMENT

ಪಂಚ ಗ್ಯಾರಂಟಿ ಯೋಜನೆಯಿಂದಾಗಿ ಮೊದಲೇ ರಾಜ್ಯ ಸರ್ಕಾರ ದಿಕ್ಕೆಟ್ಟಿದೆ. ಯಾವುದನ್ನೂ ಉಚಿತವಾಗಿ ಕೊಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ. ಅದಾಗಿಯೂ ಅವರ್ಸಾ ಗ್ರಾಮ ಪಂಚಾಯತ ಅಧಿಕಾರಿಗಳು ಲಕ್ಷಾಂತರ ರೂ ಬಾಡಿಗೆಯನ್ನು ವಸೂಲಿ ಮಾಡದೇ ಹಾಗೇ ಬಿಟ್ಟಿದ್ದಾರೆ. ಗ್ರಾ ಪಂ ಅಭಿವೃದ್ಧಿ ಅಧಿಕಾರಿಗಳ ಅಸಡ್ಡೆಯಿಂದ 9 ಲಕ್ಷ ರೂಪಾಯಿಗೂ ಅಧಿಕ ಮೊತ್ತ ಗ್ರಾಮ ಪಂಚಾಯತಗೆ ಬರುವುದು ಬಾಕಿಯಿದೆ. ಗ್ರಾ ಪಂ ಬಾಡಿಗೆ ವಸೂಲಿ ಮಾಡದ ಕಾರಣ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ಕೊರತೆ ಎದುರಾಗಿದ್ದು, ಈ ಬಗ್ಗೆ ಅರಿವಿದ್ದರೂ ಸರ್ಕಾರಿ ಆಸ್ತಿಯ ಬಾಡಿಗೆ ವಸೂಲಿ ಮಾಡಲು ಸಹ ಗ್ರಾ ಪಂ ಅಧಿಕಾರಿಗಳಿಗೆ ಸಮಯ ಸಾಲುತ್ತಿಲ್ಲ.

ಲಭ್ಯವಿರುವ ದಾಖಲಾತಿಗಳ ಪ್ರಕಾರ ಅವರ್ಸಾ ಗ್ರಾ ಪಂ ಅಧೀನದಲ್ಲಿ 23 ವ್ಯಾಪಾರ ಮಳಿಗೆಗಳಿದೆ. ಅದೆಲ್ಲವನ್ನು ಗ್ರಾ ಪಂ ಬಾಡಿಗೆಗೆ ಬಿಟ್ಟಿದೆ. ಟೆಂಡರ್ ಮೂಲಕ ಮಳಿಗೆಗಳನ್ನು ಹರಾಜು ಹಾಕಲಾಗಿದ್ದು, ಟೆಂಡರ್ ಪಡೆದವರಲ್ಲಿ ಏಳು ವ್ಯಾಪಾರಿಗಳು ಮಾತ್ರ ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿಸಿದ್ದಾರೆ. ಉಳಿದ 16 ಮಳಿಗೆ ಪಡೆದವರು ಬಾಡಿಗೆ ಹಣವನ್ನು ನೀಡಿಲ್ಲ. ಗ್ರಾಮ ಪಂಚಾಯತಗೆ ಬರಬೇಕಾದ ಬಾಕಿ ಪಾವತಿಸುವಂತೆ ಗ್ರಾ ಪಂ ಅಧಿಕಾರಿಗಳು ಸೂಚನೆ ನೀಡಿಲ್ಲ.

Advertisement. Scroll to continue reading.

ಇನ್ನೂ `ಗ್ರಾ ಪಂ ಅಭಿವೃದ್ಧಿ ಅಧಿಕಾರಿಯೇ ತಮ್ಮ ಆಪ್ತರಿಗೆ ಮಳಿಗೆ ಹಂಚಿಕೆ ಮಾಡಿದ್ದಾರೆ’ ಎಂಬ ಆರೋಪವಿದೆ. `ಸರ್ಕಾರಿ ಆಸ್ತಿಯನ್ನು ಕೆಲವರು ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂಬ ಬಗ್ಗೆಯೂ ಊರಿನವರು ದೂರಿದ್ದಾರೆ. `ಗ್ರಾ ಪಂ ಸದಸ್ಯರ ಕುಮ್ಮಕ್ಕಿನಿಂದ ಅಪರಾತಪರ ನಡೆದಿದೆ’ ಎಂಬ ವದಂತಿಯೂ ಕೇಳಿ ಬಂದಿದೆ. ಆದರೆ, ಈ ಮಾತುಗಳಿಗೆ ಯಾವುದೇ ಪುರಾವೆ ಸಿಕ್ಕಿಲ್ಲ.

Advertisement. Scroll to continue reading.

ಫೋನ್ ಮಾಡಿದರೆ ಪಿಡಿಓ ನಾಪತ್ತೆ!
ದಾಖಲೆಗಳ ಪ್ರಕಾರ ಸರ್ಕಾರಿ ಆಸ್ತಿ ದುರ್ಬಳಕೆ ನಡೆದಿರುವುದು ಸ್ಪಷ್ಠವಾಗಿದೆ. ಸರ್ಕಾರಕ್ಕೆ ಪಾವತಿಯಾಗಬೇಕಿದ್ದ ಹಣವನ್ನು ವಸೂಲಿ ಮಾಡದೇ ಅಧಿಕಾರಿಗಳು ಲೋಪವೆಸಗಿರುವುದು ಕಾಣಿಸುತ್ತಿದೆ. ಉತ್ತರ ಕನ್ನಡ ಜಿಲ್ಲಾ ಪಂಚಾಯತ ವೆಬ್‌ಸೈಟಿನಲ್ಲಿರುವ ದಾಖಲೆ ಅನ್ವಯ ಅವರ್ಸಾ ಪಿಡಿಓ ಸೀತಾ ಮೇತ್ರಿ ಅವರಿಗೆ ಫೋನ್ ಮಾಡಿದಾಗ ಈ ಬಗ್ಗೆ ಉತ್ತರಿಸಲು ತಡವರಿಸಿದರು. `ಮಳಿಗೆ ಪಡೆದವರ ಡಿಪೋಜಿಟ್ ಇದೆ. ಅದೆಲ್ಲವನ್ನು ಪರಿಶೀಲಿಸಬೇಕು’ ಎಂದರು. ಇನ್ನಷ್ಟು ಪ್ರಶ್ನೆಗಳಿಗೆ `10 ನಿಮಿಷದಲ್ಲಿ ಮತ್ತೆ ಫೋನ್ ಮಾಡುವೆ’ ಎಂದವರು ಮತ್ತೆ ಫೋನ್ ಮಾಡಲಿಲ್ಲ.

Previous Post

ಪುಣ್ಯಕ್ಷೇತ್ರದಲ್ಲಿ ಅಮಲಿನ ಘಾಟು: ಮಾದಕ ವ್ಯಸನದ ತಾಣವಾದ ಗೋಕರ್ಣ!

Next Post

ಉತ್ತರ ಕನ್ನಡ | ಜಿಲ್ಲೆಯಲ್ಲಿದೆ 439 ಗುಡ್ಡ ಕುಸಿತ ಕೇಂದ್ರ: ಮಳೆಗಾಲಕ್ಕೆ ಈಗಲೇ ಸಿದ್ಧರಾಗಿ!

Next Post
Uttara Kannada There are 439 landslide centers in the district Get ready for the rainy season now!

ಉತ್ತರ ಕನ್ನಡ | ಜಿಲ್ಲೆಯಲ್ಲಿದೆ 439 ಗುಡ್ಡ ಕುಸಿತ ಕೇಂದ್ರ: ಮಳೆಗಾಲಕ್ಕೆ ಈಗಲೇ ಸಿದ್ಧರಾಗಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ