6
  • Latest
The name is different.. The town is different Undadi `guoda' caught in Bangalore!

ಹೆಸರು ಬೇರೆ.. ಊರು ಬೇರೆ: ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಉಂಡಾಡಿ`ಗುoಡ’!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಹೆಸರು ಬೇರೆ.. ಊರು ಬೇರೆ: ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಉಂಡಾಡಿ`ಗುoಡ’!

AchyutKumar by AchyutKumar
in ರಾಜ್ಯ
The name is different.. The town is different Undadi `guoda' caught in Bangalore!

ನಾನಾ ಭಾಷೆ, ನಾನಾ ಪ್ರದೇಶಗಳಲ್ಲಿ ನಾನಾ ಹೆಸರುಗಳಿಂದ ಪರಿಚಯಿಸಿಕೊಂಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ನಿತೀನ್ ರಾವ್ ಎಂಬಾತರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.

ಬೆoಗಳೂರು, ಮಂಗಳೂರು, ಧಾರವಾಡ, ಶಿವಮೊಗ್ಗ ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ನಿತಿನ್ ರಾವ್ ಅಪರಾಧ ಕೃತ್ಯ ಎಸಗಿದ್ದು, ಎಲ್ಲಾ ಕಡೆ ಪೊಲೀಸರು ಹುಡುಕಾಡುತ್ತಿದ್ದರು. ಯಾವ ಪೊಲೀಸರಿಗೂ ನಿತಿನ್ ರಾವ್ ಸಿಕ್ಕಿ ಬಿದ್ದಿರಲಿಲ್ಲ. ಮಾದೇಶ, ಗುಂಡ, ಅನಿಲ ಸೇರಿ ಬಗೆ ಬಗೆಯ ಹೆಸರಿನಲ್ಲಿ ನಿತಿನ್ ರಾವ್ ಆಧಾರ್ ಕಾರ್ಡ ಸಹ ಮಾಡಿಸಿಕೊಂಡಿದ್ದರು. ಅದೇ ಆಧಾರದಲ್ಲಿ ಪದೇ ಪದೇ ಪೊಲೀಸರಿಗೆ ಯಾಮಾರಿಸಿ ಪರಾರಿಯಾಗುತ್ತಿದ್ದರು.

2012ರ ಮಾರ್ಚ 14ರಂದು ನ್ಯಾಯಾಲಯದಿಂದ ಜಾಮೀನುಪಡೆದು ಪರಾರಿಯಾಗಿದ್ದ ನಿತಿನ್ ರಾವ್ ಬಗ್ಗೆ ಯಾರಿಗೂ ಸುಳಿವಿರಲಿಲ್ಲ. 13 ವರ್ಷಗಳ ಕಾಲ ರಾಜ್ಯದ ನಾನಾ ಭಾಗದ ಪೊಲೀಸರು ಹುಡುಕಾಟ ನಡೆಸಿದರೂ ನಿತಿನ್ ರಾವ್ ಸಿಕ್ಕಿರಲಿಲ್ಲ. ಮಂಗಳೂರು ಮೂಲದ ನಿತಿನ್ ರಾವ್ ಶಿರಸಿಯಲ್ಲಿ ಸಹ ಅಪರಾಧ ಕೃತ್ಯವೊಂದರಲ್ಲಿ ಭಾಗಿಯಾಗಿದ್ದರು. ಕ್ರೂರ ವರ್ತನೆ, ಶಾಂತಿಭAಗ ಹಾಗೂ ಬೆದರಿಕೆ ಆರೋಪಗಳನ್ನು ಅವರು ಎದುರಿಸುತ್ತಿದ್ದರು. ಹೀಗಾಗಿ ಶಿರಸಿ ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದರು.

ಮೇ 14ರ ನಸುಕಿನಲ್ಲಿ ನಿತೀನ್ ರಾವ್ ಬೆಂಗಳೂರಿನ ವಿಶ್ವೇಶ್ವರ ಲೇಔಟಿನಲ್ಲಿರುವ ಬಗ್ಗೆ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ಮಾಹಿತಿ ಸಿಕ್ಕಿತು. ಪೊಲೀಸ್ ವೃತ್ತನಿರೀಕ್ಷಕ ಶಶಿಕಾಂತ ವರ್ಮಾಮ ಪಿಎಸ್‌ಐ ರಾಜಕುಮಾರ ಉಕ್ಕಲಿ, ರತ್ನಾ ಕುರಿ ನೇತ್ರತ್ವದಲ್ಲಿ ಪೊಲೀಸ್ ಸಿಬ್ಬಂದಿ ಮಹಾಂತೇಶ ಬಾರ್ಕರ್, ರಾಮಯ್ಯ ಪೂಜಾರಿ, ದಾವಲಸಾಬ ಕುಂದಿ, ಹನುಮಂತ ಮಾಕಾಪೂರ, ಅಶೋಕ ಹರಿಕಂತ್ರ ಕಾರ್ಯಾಚರಣೆಗಿಳಿದರು. ಕಾರವಾರದ ಟೆಕ್ನಿಕಲ್ ಸೆಲ್ ವಿಭಾಗದ ಉದಯ ಗುನಗಾ ಸಹ ತಾಂತ್ರಿಕ ಸಹಕಾರ ನೀಡಿದ್ದು, ನಿತಿನ್ ರಾವ್ ಸಿಕ್ಕಿಬಿದ್ದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ, ಜಗದೀಶ ಎಂ, ಶಿರಸಿ ಡಿವೈಎಸ್ಪಿ ಗಣೇಶ ಕೆ ಎಲ್ ಸಹ ಈ ಕಾರ್ಯಾಚರಣೆಯ ಭಾಗವಾಗಿದ್ದರು.

 

ShareSendTweetShare
Previous Post

ಉತ್ತರ ಕನ್ನಡ: ಬಿಸಿಲಿನ ಜೊತೆ ವಿದ್ಯುತ್ ಅವಘಡ ಪ್ರಮಾಣವೂ ಹೆಚ್ಚಳ!

Next Post

ಅರಣ್ಯ ಹಕ್ಕು: ಕಾಗೋಡು ತಿಮ್ಮಪ್ಪರಿಂದ ಮುಖ್ಯಮಂತ್ರಿಗೆ ಪತ್ರ

Next Post
Forest rights Letter from Kagodu Thimmappa to the Chief Minister

ಅರಣ್ಯ ಹಕ್ಕು: ಕಾಗೋಡು ತಿಮ್ಮಪ್ಪರಿಂದ ಮುಖ್ಯಮಂತ್ರಿಗೆ ಪತ್ರ

The adventure of the Ishwara Malpe team Searching for God in the depths of the river!

ಈಶ್ವರ ಮಲ್ಪೆ ತಂಡದ ಸಾಹಸ: ನದಿ ಆಳದಲ್ಲಿ ದೇವರ ಹುಡುಕಾಟ!

One death.. many doubts!

ಒಂದು ಸಾವು.. ಹಲವು ಅನುಮಾನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.