6
  • Latest
The adventure of the Ishwara Malpe team Searching for God in the depths of the river!

ಈಶ್ವರ ಮಲ್ಪೆ ತಂಡದ ಸಾಹಸ: ನದಿ ಆಳದಲ್ಲಿ ದೇವರ ಹುಡುಕಾಟ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಈಶ್ವರ ಮಲ್ಪೆ ತಂಡದ ಸಾಹಸ: ನದಿ ಆಳದಲ್ಲಿ ದೇವರ ಹುಡುಕಾಟ!

AchyutKumar by AchyutKumar
May 14, 2025
in ರಾಜ್ಯ
The adventure of the Ishwara Malpe team Searching for God in the depths of the river!
advt advt advt
ADVERTISEMENT

ಕುಮಟಾ ಮೂರೂರು ಬೊಗ್ರಿಬೈಲ್‌ನ ಅಘನಾಶಿನಿ ನದಿ ಆಳದಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ದೇವರ ಹುಡುಕಾಟ ನಡೆಸುತ್ತಿದ್ದಾರೆ. ಮೂರು ದಿನಗಳಿಂದ ಶೋಧ ನಡೆಸಿದರೂ ದೇವರು ಸಿಕ್ಕಿಲ್ಲ. ಅದಾಗಿಯೂ ಅವರು ಹುಡುಕಾಟ ನಿಲ್ಲಿಸಿಲ್ಲ!

800 ವರ್ಷಗಳ ಐತಿಹ್ಯ ಹೊಂದಿದ ನಂದಿಕೇಶ್ವರ ದೇವಾಲಯದ ಅವಶೇಷಗಳಿಗಾಗಿ ಈಶ್ವರ ಮಲ್ಪೆ ಹುಡುಕಾಟ ನಡೆದಿದೆ. ದೇವಾಲಯ ಆಡಳಿತ ಮಂಡಳಿಯವರು ಅಷ್ಟಮಂಗಲ ಪ್ರಶ್ನೆ ಕೇಳಿದಾಗ ದೇವರ ಮೂರ್ತಿ ಮಣ್ಣಿನಲ್ಲಿ ಹೂತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಆ ಮೂರ್ತಿಗಾಗಿ ಶೋಧ ನಡೆಯುತ್ತಿದೆ.

ADVERTISEMENT
ADVERTISEMENT

`300 ವರ್ಷಗಳ ಹಿಂದೆ ಈ ಭಾಗದ ಉಪ್ಪಿನಪಟ್ಟಣ ಪ್ರಸಿದ್ಧ ಬಂದರು ಆಗಿತ್ತು. ಉಪ್ಪು ಸಾಗಾಣಿಕೆ ಮೂಲಕ ಈ ಬಂದರು ಪ್ರಸಿದ್ಧಿ ಪಡೆದಿತ್ತು. ಈ ದೇವಾಲಯದಲ್ಲಿ ವಾಸವಾಗಿದ್ದ ಬಸವ ಉಪ್ಪು ತಿನ್ನಲು ಬಂದರಿಗೆ ಹೋದಾಗ ಗುಂಡಿನ ಏಟು ತಗುಲಿತು. ಆ ವೇಳೆ ಉಪ್ಪಿನಪಟ್ಟಣದಿಂದ ದೇವಾಲಯದವರೆಗೂ ರಕ್ತ ಕಲೆಗಳು ಮೂಡಿದ್ದವು. ಇದರ ಜೊತೆಗೆ ದೇವಾಲಯದಲ್ಲಿದ್ದ ಶಿಲಾಮಯ ನಂದಿಯ ಕಾಲಿಗೆ ಹಾನಿಯಾಗಿತ್ತು. ಭಿನ್ನಗೊಂಡ ನಂದಿಯ ಮೂರ್ತಿಯನ್ನು ಜನ ಮೂಲಗದ್ದೆಯ ಅಘನಾಶಿನಿ ತಟದಲ್ಲಿ ಬಿಟ್ಟಿದ್ದರು. ಆ ಮೂರ್ತಿಗಾಗಿ ಇದೀಗ ಹುಡುಕಾಟ ನಡೆಯುತ್ತಿದೆ’ ಎಂದು ಅಲ್ಲಿನವರು ವಿವರಿಸಿದರು.

Advertisement. Scroll to continue reading.
Advertisement. Scroll to continue reading.

ಆ ಕಾಲದಿಂದ ಈಗಿನವರೆಗೂ ದೇವಾಲಯದಲ್ಲಿ ಪೂಜೆ-ಪುನಸ್ಕಾರ ನಡೆಯುತ್ತ ಬಂದಿದೆ. ದೇವಾಲಯದ ಅಷ್ಟಬಂಧ ಕಾರ್ಯಕ್ರಮದಲ್ಲಿ ಅಷ್ಠಮಂಗಲ ಪ್ರಶ್ನಾವಳಿ ಹಾಕಿದಾಗ ದೇವಾಲಯದ ಮೂಲ ನಂದಿಯಲ್ಲಿ ಇನ್ನು ಚೈತನ್ಯವಿರುವುದು ಗೊತ್ತಾಗಿದೆ. ಹೀಗಾಗಿ ಆ ನಂದಿಯ ಹುಡುಕಿಕೊಡುವಂತೆ ದೇಗುಲ ಸಮಿತಿಯವರು ಈಶ್ವರ ಮಲ್ಪೆ ಅವರಿಗೆ ಫೋನಾಯಿಸಿದ್ದಾರೆ. ಹೀಗಾಗಿ ಈಶ್ವರ ಮಲ್ಪೆ ಅವರು ನದಿ ಆಳದಲ್ಲಿ ಶೋಧ ನಡೆಸಿದ್ದಾರೆ.

ಸದ್ಯ ಈಶ್ವರ ಮಲ್ಪೆ ಅವರು ಇನ್ನೊಂದು ಕಾರ್ಯಾಚರಣೆಗಾಗಿ ಭದ್ರಾವತಿಗೆ ತೆರಳಿದ್ದಾರೆ. ಮೇ 22ರ ನಂತರ ಮತ್ತೆ ಕುಮಟಾಗೆ ಬಂದು ಮೂರ್ತಿ ಶೋಧ ನಡೆಸಲಿದ್ದಾರೆ. `300 ವರ್ಷಗಳ ಹಿಂದೆ ನೀರಿಗೆ ಬಿಟ್ಟ ಮೂರ್ತಿ ಈಗ ಎಲ್ಲಿದೆ ಎಂದು ಹುಡುಕುವುದು ಕಷ್ಟ. ಅದಾಗಿಯೂ ನದಿ ಆಳದ ಮಣ್ಣಿನಲ್ಲಿ ಶೋಧ ಕಾರ್ಯ ನಡೆದಿದೆ’ ಎಂದು ಈಶ್ವರ ಮಲ್ಪೆ ಅವರು ಪ್ರತಿಕ್ರಿಯಿಸಿದ್ದಾರೆ.

ShareSendTweetShare
ADVERTISEMENT
Previous Post

ಅರಣ್ಯ ಹಕ್ಕು: ಕಾಗೋಡು ತಿಮ್ಮಪ್ಪರಿಂದ ಮುಖ್ಯಮಂತ್ರಿಗೆ ಪತ್ರ

Next Post

ಒಂದು ಸಾವು.. ಹಲವು ಅನುಮಾನ!

Next Post
One death.. many doubts!

ಒಂದು ಸಾವು.. ಹಲವು ಅನುಮಾನ!

Uttara Kannada The common man's act that tired the minister in charge!

ಉತ್ತರ ಕನ್ನಡ: ಉಸ್ತುವಾರಿ ಸಚಿವರನ್ನು ಸುಸ್ತು ಮಾಡಿದ ಜನಸಾಮಾನ್ಯರ ಕಾಯ್ದೆ!

Guaranteed life: Eye-catching government advertisement!

ಗ್ಯಾರಂಟಿ ಬದುಕು: ಕಣ್ಮನ ಸೆಳೆದ ಸರ್ಕಾರಿ ಜಾಹೀರಾತು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.