6
  • Latest
Fair scam Pen drive worth Rs 11 lakh goes missing!

ಜಾತ್ರೆ ಅವ್ಯವಹಾರ: 11 ಲಕ್ಷ ರೂ ಅವ್ಯವಹಾರದ ಪೆನ್ ಡ್ರೈವ್ ಕಣ್ಮರೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಜಾತ್ರೆ ಅವ್ಯವಹಾರ: 11 ಲಕ್ಷ ರೂ ಅವ್ಯವಹಾರದ ಪೆನ್ ಡ್ರೈವ್ ಕಣ್ಮರೆ!

AchyutKumar by AchyutKumar
May 16, 2025
in ಸ್ಥಳೀಯ
Fair scam Pen drive worth Rs 11 lakh goes missing!
advt advt advt
ADVERTISEMENT

ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಾತ್ರೆ ಅವಧಿಯಲ್ಲಿ 11 ಲಕ್ಷ ರೂ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಭೀತಾಗಿದ್ದು, ಇದಕ್ಕಿಂತ ಹೆಚ್ಚಿನ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಸದಸ್ಯರು ದೂರಿದ್ದಾರೆ. ಪ್ರಕರಣದ ಪತ್ತೆಗೆ ಮುಖ್ಯ ಸಾಕ್ಷಿಯಾಗಿದ್ದ ಮೂರು ಪೆನ್ ಡ್ರೈವ್ ಇದೀಗ ಕಾಣೆಯಾಗಿದೆ!

ಯಲ್ಲಾಪುರದ ಜಾತ್ರೆ ಅವಧಿಯಲ್ಲಿ ವಿವಿಧ ಪ್ರದೇಶಗಳನ್ನು ಹರಾಜು ಹಾಕಲಾಗಿತ್ತು. ಹರಾಜು ಹಾಕಿದ ಸ್ಥಳದಲ್ಲಿ ವ್ಯಾಪಾರಸ್ಥರು ಅಂಗಡಿ ಹಾಕಿಕೊಂಡು ವ್ಯವಹಾರ ನಡೆಸಿದ್ದರು. ವ್ಯಾಪಾರಿಗಳು ಪಟ್ಟಣ ಪಂಚಾಯತಗೆ ನೀಡಿದ ಹಣದಲ್ಲಿ ಅಪರಾತಪರ ನಡೆದಿದ್ದು, ಅವೆಲ್ಲವೂ ಸರ್ಕಾರಿ ಖಜಾನೆ ಸೇರಿರಲಿಲ್ಲ. ಹರಾಜು ಕೂಗಿದ ಮೊತ್ತ ಹಾಗೂ ಖಜಾನೆಗೆ ಸೇರಿದ ಮೊತ್ತದ ನಡುವೆ ವ್ಯತ್ಯಾಸ ಕಂಡು ಬಂದಿದನ್ನು ಪ ಪಂ ಸದಸ್ಯರೇ ಕಂಡು ಹಿಡಿದಿದ್ದರು. ಹರಾಜು ನಡೆದ ದಿನ 17 ಸಾವಿರ ರೂ ವೆಚ್ಚ ಮಾಡಿ ಪ ಪಂ ವಿಡಿಯೋ ಚಿತ್ರಿಕರಣವನ್ನು ನಡೆಸಿದ್ದು, ಸ್ಟೂಡಿಯೋದವರು ಮೂರು ಪೆನ್ ಡ್ರೈವ್ ಮೂಲಕ ಆ ವಿಡಿಯೋವನ್ನು ಪಟ್ಟಣ ಪಂಚಾಯತಗೆ ಹಸ್ತಾಂತರಿಸಿದ್ದರು. ಆದರೆ, ಇದೀಗ ಆ ಪೆನ್ ಡ್ರೈವ್ ಎಲ್ಲಿ ಹೋಯಿತು? ಎಂದು ಯಾರಿಗೂ ಗೊತ್ತಿಲ್ಲ!

Advertisement. Scroll to continue reading.
ADVERTISEMENT
ADVERTISEMENT

ಶುಕ್ರವಾರ ಯಲ್ಲಾಪುರದಲ್ಲಿ ನಡೆದ ಪ ಪಂ ಸಾಮಾನ್ಯ ಸಭೆಯಲ್ಲಿ ಪೆನ್ ಡ್ರೈವ್ ವಿಷಯವಾಗಿ ಚರ್ಚೆ ನಡೆಯಿತು. `ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಅವರಿಗೆ ಆ ಪೆನ್ ಡ್ರೈವ್ ನೀಡಿದ್ದೇನೆ’ ಎಂದು ಪ ಪಂ ಸಿಬ್ಬಂದಿ ನಾಗರತ್ನ ನಾಯ್ಕ ಹೇಳಿದರು. `ನನಗೆ ಯಾವುದೇ ಪೆನ್ ಡ್ರೈವ್ ನೀಡಿಲ್ಲ’ ಎಂದು ಸೋಮೇಶ್ವರ ನಾಯ್ಕ ಸಮಜಾಯಿಶೀ ನೀಡಿದರು. `ಒಂದು ಪೆನ್ ಡ್ರೈವ್ ಸೋಮೇಶ್ವರ ನಾಯ್ಕ ಅವರಿಗೆ ನೀಡಿದರೆ, ಉಳಿದ ಎರಡು ಪೆನ್ ಡ್ರೈವ್ ಎಲ್ಲಿ?’ ಎಂದು ಉಳಿದ ಸದಸ್ಯರು ಪ್ರಶ್ನಿಸಿದರು. ಅದಕ್ಕೆ ಪ ಪಂ ಸಿಬ್ಬಂದಿ ಉತ್ತರಿಸಲಿಲ್ಲ.

Advertisement. Scroll to continue reading.

`ಪ ಪಂ ಸಿಬ್ಬಂದಿ ಅನಗತ್ಯ ಅಪವಾದ ಹಾಕಿದ್ದಾರೆ’ ಎಂದು ದೂರಿದ ಸೋಮೇಶ್ವರ ನಾಯ್ಕ ಅವರು `ಸರ್ಕಾರಿ ಲೆಕ್ಕಾಚಾರದ ದಾಖಲೆಯನ್ನು ಒಬ್ಬ ಸದಸ್ಯರಿಗೆ ಮಾತ್ರ ಕೊಡಲು ಸಾಧ್ಯವಿಲ್ಲ’ ಎಂದು ವಾದಿಸಿದರು. ಜೊತೆಗೆ `ತಾವು ಪೆನ್ ಡ್ರೈವ್ ಪಡೆದಿಲ್ಲ’ ಎಂದು ಸಭೆಯಲ್ಲಿ ಸಾಭೀತು ಮಾಡಿದರು. `ಜಾಗ ಹರಾಜು ಹಾಕಿದ ವೇಳೆಯಲ್ಲಿನ ವಿಡಿಯೋ ಹಾಜರುಪಡಿಸಿ’ ಎಂದು ಉಳಿದ ಸದಸ್ಯರು ಪ ಪಂ ಅಧಿಕಾರಿಗಳನ್ನು ಆಗ್ರಹಿಸಿದರು.

`ಜಾತ್ರೆಗೆ ಸಂಬoಧಿಸಿದ ಎಲ್ಲಾ ದಾಖಲೆಯನ್ನು ತನ್ನ ಗಮನಕ್ಕೆ ತನ್ನಿ’ ಎಂದು ಪ ಪಂ ಅಧ್ಯಕ್ಷೆ ನರ್ಮದಾ ನಾಯ್ಕ ತಾಕೀತು ಮಾಡಿದರು. ಈ ಹಿಂದಿನ ಸಭೆಗಳಂತೆ ಈ ಸಭೆ ಸಹ ಜಾತ್ರೆ ಲೆಕ್ಕಾಚಾರದ ಗಲಾಟೆ ಹಾಗೂ ಮೀನು ಮಾರುಕಟ್ಟೆ ವಿಷಯದೊಂದಿಗೆ ಮುಕ್ತಾಯವಾಯಿತು. ಹಿಂದಿನ ಸಭೆಯ ಠರಾವುಗಳಲ್ಲಿ ಸದಸ್ಯರ ಮಾತುಗಳನ್ನು ತಿರುಚಿ ಬರೆದ ಬಗ್ಗೆಯೂ ಕೆಲವರು ಆಕ್ಷೇಪಿಸಿದರು.

ShareSendTweetShare
ADVERTISEMENT
Previous Post

ಕೃತಕ ಪ್ರವಾಹದಿಂದ ಕೆಂಗಟ್ಟ ಕಾರವಾರಿಗರು: ಈ ಬಾರಿಯ ಸಿದ್ಧತೆ ಏನು?

Next Post

ಬೇಡರ ವೇಷ ನೋಡಲು ಬಂದವರ ಮೇಲೆ ದಾಳಿ: ಹೋಳಿ ಹೊಡೆದಾಟದ ಆರೋಪಿಗೆ ಶಿಕ್ಷೆ!

Next Post
Attack on those who came to see the hunters' costumes Accused of Holi fight sentenced!

ಬೇಡರ ವೇಷ ನೋಡಲು ಬಂದವರ ಮೇಲೆ ದಾಳಿ: ಹೋಳಿ ಹೊಡೆದಾಟದ ಆರೋಪಿಗೆ ಶಿಕ್ಷೆ!

Gram Panchayat Administration Paper applications don't cost a penny here!

ಗ್ರಾ ಪಂ ಆಡಳಿತ: ಕಾಗದ ಅರ್ಜಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ!

ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ಕೀಟನಾಶಕ ಸೇವಿಸಿದ ಕೂಲಿ ಕಾರ್ಮಿಕ: ಆತ ಇನ್ನಿಲ್ಲ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.