6
  • Latest
Gram Panchayat Administration Paper applications don't cost a penny here!

ಗ್ರಾ ಪಂ ಆಡಳಿತ: ಕಾಗದ ಅರ್ಜಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಗ್ರಾ ಪಂ ಆಡಳಿತ: ಕಾಗದ ಅರ್ಜಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ!

AchyutKumar by AchyutKumar
May 17, 2025
in ರಾಜ್ಯ
Gram Panchayat Administration Paper applications don't cost a penny here!
advt advt advt
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಡಿಜಿಟಲ್ ವ್ಯವಸ್ಥೆ ಜಾರಿಗೆ ತರಲು ಜಿಲ್ಲಾ ಪಂಚಾಯತ ಆಸಕ್ತಿವಹಿಸಿದೆ. ಡಿಜಿಟಲ್ ವ್ಯವಸ್ಥೆ ಜಾರಿಯಾದ ನಂತರ ಗ್ರಾಮ ಪಂಚಾಯತದಲ್ಲಿನ ಕಾಗದ ಪತ್ರಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇರುವುದಿಲ್ಲ!

ಗ್ರಾಮ ಪಂಚಾಯತಗೆ ಸಲ್ಲಿಕೆಯಾಗುವ ಎಲ್ಲಾ ಕಾಗದಪತ್ರಗಳನ್ನು ಸ್ಕಾನ್ ಮಾಡಿ ದಾಖಲೀಕರಣ ಮಾಡಿಕೊಳ್ಳುವುದು ಇ-ಆಫೀಸ್ ವಿಧಾನದ ಮೊದಲ ಕೆಲಸ. ಕಂಪ್ಯುಟರ್ ಹಾಗೂ ಆನ್‌ಲೈನ್ ಮೂಲಕವೇ ಕಚೇರಿ ಕಡತ ವಿಲೇವಾರಿ ನಡೆಸುವುದು ಮುಂದಿನ ಕೆಲಸ. ಇ-ವಿಧಾನದಿಂದ ಕಚೇರಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬಹುದು ಎಂಬುದು ಸರ್ಕಾರದ ನಂಬಿಕೆ.

ADVERTISEMENT
ADVERTISEMENT

ಸಾರ್ವಜನಿಕರು ನೀಡುವ ಅರ್ಜಿಗಳಿಗೆ ಆನ್‌ಲೈನ್ ಮೂಲಕ ಒಂದು ಸಂಖ್ಯೆ ನೀಡಲಾಗುತ್ತದೆ. ಆ ಸಂಖ್ಯೆ ಆಧಾರದಲ್ಲಿ ಜನ ಕಡತಗಳ ಪರಿಶೀಲನೆ, ಕೆಲಸ ಯಾವ ಹಂತದಲ್ಲಿದೆ? ಎಂಬ ಬಗ್ಗೆ ಮಾಹಿತಿ ಪಡೆಯಲು ಇದು ಅನುಕೂಲವಾಗಲಿದೆ. ಗ್ರಾಮ ಪಂಚಾಯತದ ಕರ ವಸೂಲಿಗೆ ಆನ್‌ಲೈನ್ ವ್ಯವಸ್ಥೆ ಜಾರಿಯಲ್ಲಿದ್ದು, ಭವಿಷ್ಯದಲ್ಲಿ ಅದೇ ಮಾದರಿಯಲ್ಲಿ ಇತರೆ ಕೆಲಸಗಳು ನಡೆಯುವ ಸಾಧ್ಯತೆಗಳಿವೆ. ಜನನ-ಮರಣ ನೋಂದಣಿ, ನಿರಪೇಕ್ಷಣಾ ಪತ್ರ ಸೇರಿ ಎಲ್ಲಾ ಕಾಗದ ಪತ್ರಗಳು ಆನ್‌ಲೈನ್ ಆಗುವುದರಿಂದ ಜನರ ಅಲೆದಾಟ ಕಡಿಮೆಯಾಗುವ ಲಕ್ಷಣಗಳಿವೆ.

Advertisement. Scroll to continue reading.
Advertisement. Scroll to continue reading.

ಕಂದಾಯ ಇಲಾಖೆಯ ಬಹುತೇಕ ಕಡೆ ಈಗಾಗಲೇ ಇ-ಆಫೀಸ್ ವ್ಯವಸ್ಥೆ ಜಾರಿಯಲ್ಲಿದೆ. ಅದೇ ಮಾದರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ 125 ಗ್ರಾಮ ಪಂಚಾಯತಗಳು ಇ- ಆಫೀಸ್ ವ್ಯವಸ್ಥೆ ಅಳವಡಿಸಿಕೊಂಡು ಅರ್ಜಿ ವಿಲೇವಾರಿ ಶುರು ಮಾಡಿವೆ. ಕರ್ನಾಟಕ ಸರ್ಕಾರ ಆಡಳಿತ ಸುಧಾರಣೆಗಾಗಿ 2021ರಲ್ಲಿಯೇ ಇ-ಆಫೀಸ್ ವಿಧಾನಕ್ಕೆ ಒತ್ತು ನೀಡಿದ್ದು, ಹಂತ ಹಂತವಾಗಿ ಆ ವ್ಯವಸ್ಥೆ ರಾಜ್ಯದ ಎಲ್ಲಡೆ ಜಾರಿಯಾಗುತ್ತಿದೆ.

ಕೆಳ ಹಂತದ ಕಚೇರಿಗಳಲ್ಲಿ ಹಂತ ಹಂತವಾಗಿ ಕಡತ ಪರಿಶೀಲನೆ ನಡೆಸುವುದು ಹಾಗೂ ಅವುಗಳನ್ನು ಆನ್‌ಲೈನ್ ವ್ಯವಸ್ಥೆಗೆ ತರುವ ಕೆಲಸ ನಡೆಯುತ್ತಿದೆ. ವಿವಿಧ ಇಲಾಖೆಯವರು ಪ್ರತ್ಯೇಕ ವೆಬ್‌ಪೋರ್ಟಲ್ ತೆರೆದಿದ್ದು, ತಹಶೀಲ್ದಾರ್ ಕಚೇರಿ ಹಾಗೂ ನಾಡ ಕಚೇರಿಯ ಕಡತಗಳು ಆನ್‌ಲೈನ್ ಆಗಿದೆ. ಅದರ ಮುಂದುವರೆದ ಭಾಗವಾಗಿ ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಮೇ 26ರಿಂದ ಸಂಪೂರ್ಣ ಇ-ಆಫೀಸ್ ವ್ಯವಸ್ಥೆ ಜಾರಿ ಮಾಡುವಂತೆ ಸರ್ಕಾರ ಸೂಚನೆ ಹೊರಡಿಸಿದೆ. ಸದ್ಯ ಉತ್ತರ ಕನ್ನಡ ಜಿಲ್ಲೆಯ 229 ಗ್ರಾಪಂಗಳ ಪೈಕಿ 125 ಗ್ರಾಪಂಗಳಲ್ಲಿ ಈ ಆಫೀಸ್ ವ್ಯವಸ್ಥೆ ಜಾರಿಗೆ ಬಂದಿದೆ. 19 ಕಡತಗಳನ್ನು ಈಗಾಗಲೇ ಇ-ಆಫೀಸ್ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ.

ShareSendTweetShare
ADVERTISEMENT
Previous Post

ಬೇಡರ ವೇಷ ನೋಡಲು ಬಂದವರ ಮೇಲೆ ದಾಳಿ: ಹೋಳಿ ಹೊಡೆದಾಟದ ಆರೋಪಿಗೆ ಶಿಕ್ಷೆ!

Next Post

ಕೀಟನಾಶಕ ಸೇವಿಸಿದ ಕೂಲಿ ಕಾರ್ಮಿಕ: ಆತ ಇನ್ನಿಲ್ಲ!

Next Post
ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ಕೀಟನಾಶಕ ಸೇವಿಸಿದ ಕೂಲಿ ಕಾರ್ಮಿಕ: ಆತ ಇನ್ನಿಲ್ಲ!

A Tahsildar's office without a bailiff!

ದಂಡಾಧಿಕಾರಿಯೇ ಇಲ್ಲದ ತಹಶೀಲ್ದಾರ್ ಕಚೇರಿ!

Sanatani on the outside, tiger on the inside Who is the lawyer playing a double role!

ಹೊರಗಡೆ ಸನಾತನಿ.. ಒಳಗಡೆ ವ್ಯಾಘ್ರ: ದ್ವಿಪಾತ್ರ ಅಭಿನಯದ ನ್ಯಾಯವಾದಿ ಯಾರು?!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.