6
  • Latest
A Tahsildar's office without a bailiff!

ದಂಡಾಧಿಕಾರಿಯೇ ಇಲ್ಲದ ತಹಶೀಲ್ದಾರ್ ಕಚೇರಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ದಂಡಾಧಿಕಾರಿಯೇ ಇಲ್ಲದ ತಹಶೀಲ್ದಾರ್ ಕಚೇರಿ!

AchyutKumar by AchyutKumar
in ರಾಜ್ಯ
A Tahsildar's office without a bailiff!

ಶಿರಸಿಯಲ್ಲಿ ಕಳೆದ ಒಂದುವರೆ ತಿಂಗಳಿನಿoದ ಖಾಯಂ ತಹಶೀಲ್ದಾರ್ ಇಲ್ಲ. ಹೀಗಾಗಿ ತಾಲೂಕಾ ದಂಡಾಧಿಕಾರಿಯಾಗಿ ತಹಶೀಲ್ದಾರ್ ಮಾಡಬೇಕಾದ ಕೆಲಸಗಳೆಲ್ಲವೂ ಬಾಕಿ ಉಳಿದಿದೆ.

ಈ ಹಿಂದೆ ಶ್ರೀಧರ ಮುಂದಲಮನಿ ಅವರು ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ವರ್ಗಾವಣೆ ನಂತರ ದಾಂಡೇಲಿ ತಹಶೀಲ್ದಾರ್ ಅವರಿಗೆ ಪ್ರಭಾರ ಅಧಿಕಾರ ನೀಡಲಾಯಿತು. ಅದೂ ಮುಗಿದ ಮೇಲೆ ಮುಂಡಗೋಡು ತಹಶೀಲ್ದಾರರಿಗೆ ಹೆಚ್ಚುವರಿ ಹೊಣೆವಹಿಸಲಾಯಿತು. ಅದಾಗಿ ಬಹುದಿನ ಕಳೆದರೂ ಶಿರಸಿಗೆ ಖಾಯಂ ತಹಶೀಲ್ದಾರ್ ನೇಮಕಾತಿಗೆ ಸರ್ಕಾರ ಆಸಕ್ತಿವಹಿಸಿಲ್ಲ.

ಈಗಾಗಲೇ ಒಂದು ತಾಲೂಕು ದಂಡಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ತಹಶೀಲ್ದಾರರಿಗೆ ಇನ್ನೊಂದು ತಾಲೂಕಿನ ಜವಾಬ್ದಾರಿಯನ್ನು ಪ್ರಭಾರಿಯಾಗಿ ನೀಡಿರುವುದರಿಂದ ಕೆಲಸದ ಒತ್ತಡ ಹೆಚ್ಚಾಗಿದೆ. ಜೊತೆಗೆ ಸಾರ್ವಜನಿಕ ಕೆಲಸ ಸಹ ಸಕಾಲದಲ್ಲಿ ಆಗುತ್ತಿಲ್ಲ. ಭೂ ಕಂದಾಯ, ಕೃಷಿ-ಕೃಷಿ ಮಾರುಕಟ್ಟೆ, ನೀರಾವರಿ, ಭೂ ವ್ಯಾಜ್ಯ, ಪಿಂಚಣಿ ಸೇರಿ 14 ಪ್ರಮುಖ ಜವಾಬ್ದಾರಿಗಳು ತಹಶೀಲ್ದಾರರ ಮೇಲಿವೆ. ಸ್ಥಳೀಯ ಆಡಳಿತದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದು ತಹಶೀಲ್ದಾರರ ಮುಖ್ಯ ಕೆಲಸವಾಗಿದೆ. ಹೀಗಿರುವಾಗ ಶಿರಸಿ ಕಚೇರಿಗೆ ತಹಶೀಲ್ದಾರ್ ಇಲ್ಲದಿರುವ ಕಾರಣ ಜನ ಸಾಮಾನ್ಯರ ಅರ್ಜಿಗಳು ಹಾಗೇ ಉಳಿದಿದೆ. ನಿತ್ಯದ ಕಚೇರಿ ಕೆಲಸಗಳು ಸಾಕಷ್ಟು ಪ್ರಮಾಣದಲ್ಲಿ ಬಾಕಿಯಾಗಿವೆ.

ಜಾಗ ಅತಿಕ್ರಮಣ, ನೌಕರರ ಮೇಲಿನ ದೂರು ಸೇರಿ ಹಲವು ವಿವಾದಗಳನ್ನು ಬಗೆಹರಿಸಲು ಸರ್ಕಾರ ತಹಶೀಲ್ದಾರರಿಗೆ ಅಧಿಕಾರ ನೀಡಿದೆ. ಚುನಾವಣೆ ವೇಳೆ ಸಹಾಯಕ ಚುನಾವಣಾ ಅಧಿಕಾರಿಯಾಗಿಯೂ ತಹಶೀಲ್ದಾರ್ ಕೆಲಸ ಮಾಡುತ್ತಾರೆ. ಗ್ರಾಮ ಆಡಳಿತಾಧಿಕಾರಿಗಳಿಂದ ಹಿಡಿದು ತಾಲೂಕಾ ಮಟ್ಟದ ಪ್ರತಿಯೊಬ್ಬ ಸರ್ಕಾರಿ ಸಿಬ್ಬಂದಿ ಮೇಲೆ ನಿಯಂತ್ರಣ ಸಾಧಿಸುವುದು ತಹಶೀಲ್ದಾರ್ ಅವರ ಹೊಣೆ. ಆದರೆ, ಶಿರಸಿ ಮಟ್ಟಿಗೆ ಈ ಯಾವ ಕೆಲಸವೂ ಸರಿಯಾಗಿ ಆಗುತ್ತಿಲ್ಲ.

ಸದ್ಯ ಮಳೆಗಾಲ ಸಮೀಪಿಸುತ್ತಿದ್ದು, ಶಿರಸಿಯಲ್ಲಿ ತಹಶೀಲ್ದಾರ್ ಸೂಚನೆ ಮೇರೆಗೆ ಆಗಬೇಕಾದ ಕೆಲಸಗಳು ಸಾಕಷ್ಟಿವೆ. ಗ್ರಾಮೀಣ ಪ್ರದೇಶದ ಜನ ನಿತ್ಯ ಸಮಸ್ಯೆ ಹೇಳಿಕೊಂಡು ನಗರಕ್ಕೆ ಬರುತ್ತಿದ್ದಾರೆ. ಆದರೆ, ಅವರ ಸಮಸ್ಯೆಗಳನ್ನು ಪರಿಹರಿಸುವ ಭರವಸೆಗಳು ಸಿಗುತ್ತಿಲ್ಲ. ಈ ಎಲ್ಲಾ ವಿಷಯ ಅರಿತ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಇದೀಗ ಖಾಯಂ ತಹಶೀಲ್ದಾರರ ನೇಮಕಕ್ಕಾಗಿ ಪಟ್ಟು ಹಿಡಿದಿದ್ದಾರೆ. ಮೇ 19ರ ಸೋಮವಾರ ಬೆಳಿಗ್ಗೆ 11 ಗಂಟಗೆ ಶಿರಸಿಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಅವರು ಸರ್ಕಾರಕ್ಕೆ ಪತ್ರ ನೀಡಲಿದ್ದು, ಆ ಮೂಲಕ ತಹಶೀಲ್ದಾರ್ ನೇಮಕಕ್ಕೆ ಒತ್ತಾಯಿಸಲಿದ್ದಾರೆ.

ShareSendTweetShare
Previous Post

ಕೀಟನಾಶಕ ಸೇವಿಸಿದ ಕೂಲಿ ಕಾರ್ಮಿಕ: ಆತ ಇನ್ನಿಲ್ಲ!

Next Post

ಹೊರಗಡೆ ಸನಾತನಿ.. ಒಳಗಡೆ ವ್ಯಾಘ್ರ: ದ್ವಿಪಾತ್ರ ಅಭಿನಯದ ನ್ಯಾಯವಾದಿ ಯಾರು?!

Next Post
Sanatani on the outside, tiger on the inside Who is the lawyer playing a double role!

ಹೊರಗಡೆ ಸನಾತನಿ.. ಒಳಗಡೆ ವ್ಯಾಘ್ರ: ದ್ವಿಪಾತ್ರ ಅಭಿನಯದ ನ್ಯಾಯವಾದಿ ಯಾರು?!

Mysterious man on the hill He speaks English.. and also knows Hindi!

ಗುಡ್ಡ ಮೇಲೆ ನಿಗೂಢ ಮಾನವ: ಆತನಿಗೆ ಇಂಗ್ಲಿಷ್ ಬರುತ್ತೆ.. ಹಿಂದಿಯೂ ಗೊತ್ತು!

A flood of problems before the minister Minister's grant for grandfather's house!

ಸಚಿವರ ಮುಂದೆ ಸಮಸ್ಯೆಗಳ ಮಹಾಪೂರ: ಅಜ್ಜನ ಮನೆಗೆ ಮಂತ್ರಿಯ ಅನುದಾನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.