6
  • Latest
Beautiful decoration for a beautiful house 100% of the people who gave shelter to the poor!

ಅಂದದ ಮನೆಗೆ ಚಂದದ ಅಲಂಕಾರ: ಆಶ್ರಯ ನೀಡಿದ ಆಸರೆಗೆ 100ರ ಸಡಗರ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಅಂದದ ಮನೆಗೆ ಚಂದದ ಅಲಂಕಾರ: ಆಶ್ರಯ ನೀಡಿದ ಆಸರೆಗೆ 100ರ ಸಡಗರ!

AchyutKumar by AchyutKumar
in ಲೇಖನ
Beautiful decoration for a beautiful house 100% of the people who gave shelter to the poor!

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿರುವ ಈ ಮನೆಗೆ ಇದೀಗ 100 ವರ್ಷ. 7ನೇ ತಲೆಮಾರಿನವರು ಸದ್ಯ ಈ ಮನೆಯಲ್ಲಿ ವಾಸವಾಗಿದ್ದಾರೆ!

ADVERTISEMENT

ಸಿದ್ದಾಪುರದ ಹೆಗ್ಗೋಡಮನೆ ಎಂಬಲ್ಲಿ ಈ ಮನೆ ಇದೆ. 1925ರಲ್ಲಿ ನಿರ್ಮಿಸಿದ ಈ ಮನೆ ಒಂದು ಶತಮಾನ ಕಂಡಿದೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಸಹ ಈ ಮನೆಗೆ ಭೇಟಿ ನೀಡಿ ಮನೆಯ ಅಂದ ಗುಣಗಾನ ಮಾಡಿದ್ದು, ಇದೀಗ ಇತಿಹಾಸ!

ದಾಖಲೆಗಳ ಪ್ರಕಾರ ಹೆಗ್ಗೋಡಮನೆ ಕುಟುಂಬಕ್ಕೆ 300 ವರ್ಷಗಳ ಇತಿಹಾಸವಿದೆ. ಸದ್ಯ ಈ ಮನೆಯಲ್ಲಿ ಹಿರಿಯ ವಕೀಲ ಎಂ ಎಸ್ ಗೌಡರ್ ಅವರು ವಾಸವಾಗಿದ್ದಾರೆ. ಅವರ ಕುಟುಂಬದವರೇ ಈ ಮನೆ ನಿರ್ಮಿಸಿದ್ದಾರೆ. 100 ವರ್ಷ ಕಳೆದರೂ ಆ ಮನೆ ಮೊದಲಿನಷ್ಟೇ ಗಟ್ಟಿಮುಟ್ಟಾಗಿದೆ!

Advertisement. Scroll to continue reading.

ಮುಂಬೈ ಪ್ರಾಂತದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಚನ್ನಬಸಪ್ಪ ಗೌಡ ಎಂಬಾತರು ಈ ಮನೆ ಕಟ್ಟಿಸಿದರು. ಅದಕ್ಕೆ ಅಕ್ಕರೆಯಿಂದ ಆಸರೆ ಎಂದು ಹೆಸರಿಟ್ಟರು. ಎರಡು ಉಪ್ಪರಗೆಗಳಿರುವ ಈ ಮನೆಯಲ್ಲಿ ಆ ಕಾಲದಲ್ಲಿಯೇ ಬೊಂಬೈ ತಜ್ಞರ ನೆರವಿನಿಂದ ಬೋರ್‌ವೆಲ್ ತೆಗೆಸಲಾಗಿದೆ. ಅಲ್ಲಿಂದ ಈಗಲೂ ನೀರು ಬರುತ್ತದೆ. ರಾವ್ ಬಹದ್ದೂರ್ ಮೆಡಲ್ ಪಡೆದಿದ್ದ ಚನ್ನಬಸಪ್ಪ ಗೌಡ ಅವರು ಈ ಮನೆಯಲ್ಲಿ ವಾಸವಾಗಿದ್ದು, ನಂತರ ಅವರು ಕುಟುಂಬದ ಮುಖ್ಯಸ್ಥರಾದ ಎರಡನೇ ತಲೆಮಾರಿನ ಪುಟ್ಟಣ್ಣಯ್ಯ ಗೌಡರ್ ಅವರಿಗೆ ಮನೆ ಹಸ್ತಾಂತರಿಸಿದರು.

Advertisement. Scroll to continue reading.

ಪುಟ್ಟಣ್ಣಯ್ಯ ಗೌಡರ್ ಅವರು ಕಾರವಾರದ ಇಂಡಸ್ಟ್ರಿಯಲ್ ಬ್ಯಾಂಕಿನ ನಿರ್ದೇಶಕರಾಗಿದ್ದರು. ಸಾಮಾಜಿಕ ಚಟುವಟಿಕೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಪ್ರೇರಣೆಯಿಂದ ಮುಂದಿನ ತಲೆಮಾರಿನವರು ಸಹ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಕುಟುಂಬವೂ ಸ್ವಾತಂತ್ರ‍್ಯ ಹೋರಾಟದಲ್ಲಿ ಹೋರಾಟಗಾರರಿಗೆ ಆಶ್ರಯ ನೀಡಿದ ಬಗ್ಗೆ ಹಿರಿಯ ಮುತ್ಸದ್ಧಿ ಸಾಗರದ ಬಿ ಎನ್ ರಾಜಗೋಪಾಲ ಅವರು ವಿವರಿಸಿದ್ದಾರೆ.

ಈ ಮನೆಗೆ ಎರಡು ಉಪ್ಪರಿಗೆಯಿದೆ. ಮನೆಯ ಉಪ್ಪರಿಗೆಯಲ್ಲಿ ಸದಾ ಕಾಲ 50ಕ್ಕೂ ಹೆಚ್ಚು ಹೋರಾಟಗಾರರು ಆಶ್ರಯ ಪಡೆದು ಕರಪತ್ರಗಳನ್ನು ಸಿದ್ಧಪಡಿಸುತ್ತಿದ್ದರು ಎಂದು ರಾಜಗೋಪಾಲ ಅವರು ಹೇಳಿದ್ದರು. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಎಸ್ ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಸೇರಿದಂತೆ ಪ್ರಮುಖ ನಾಯಕರು ಈ ಮನೆಗೆ ಭೇಟಿ ನೀಡಿದ್ದು ಇಲ್ಲಿನ ವಿಶೇಷ.

ಇನ್ನೂ ಪುಟ್ಟಣ್ಣಯ್ಯ ಗೌಡರು ಕುರುಡುಕುಣಿ ಎನ್ನುವಲ್ಲಿ ಭೂಮಿ ಹೊಂದಿದ್ದರು. ಅಲ್ಲಿ 15 ಎಕರೆ ಕ್ಷೇತ್ರವನ್ನು 10 ಪರಿಶಿಷ್ಟ ಕುಟುಂಬಗಳಿಗೆ ದಾನ ಮಾಡಿದರು. ನೂರು ವಸಂತ ಪೂರೈಸಿದ ನೆನಪಿಗಾಗಿ ಮೇ 23 ಹಾಗೂ 24ರಂದು ಈ ಮನೆಯಲ್ಲಿ ಸಡಗರದ ಆಚರಣೆ ನಡೆಯುತ್ತಿದೆ. ಶಿವಮೊಗ್ಗದ ಮುರುಘರಾಜೇಂದ್ರ ಮಹಾಸಂಸ್ಥಾನದ ಆನಂದಪುರ ಮತ್ತು
ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಜಿ ಸಹ ಆಗಮಿಸಲಿದ್ದಾರೆ. ಕೆಳದಿ ರಾಜಗುರು ಮಹಾಮತ್ತಿನ ಭುವನಗಿರಿ ದುರ್ಗ
ಸಂಸ್ಥಾನ ಮಠದ ಪಟ್ಟಾಧ್ಯಕ್ಷರಾದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಜಿ, ಸೊರಬ ಜಡೆ ಸಂಸ್ಥಾನಮಠದ ಮಹಾಂತ ಸ್ವಾಮಿಜಿ, ಕಾನಳ್ಳಿಮಠದ ಪರಮೇಶ್ವರಯ್ಯ ಅವರು ಆಶೀರ್ವಾದ ನೀಡಲಿದ್ದಾರೆ.

Previous Post

ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ನಿಂದ ಯುಗ ಪ್ರವರ್ತಕ ಅವಳಿ ಯೋಜನೆಗಳ ಅನಾವರಣ: ಗಣ್ಯರ ಸಮ್ಮುಖದಲ್ಲಿ,ಪತ್ರಿಕಾ ಸಮಾವೇಶದಲ್ಲಿ ಘೋಷಣೆ

Next Post

ಅಂದರ್ ಬಾಹರ್ ಆಡುವುದು ಅಪರಾಧವೇ ಅಲ್ಲ!

Next Post
Playing Andar Bahar is not a crime!

ಅಂದರ್ ಬಾಹರ್ ಆಡುವುದು ಅಪರಾಧವೇ ಅಲ್ಲ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ