6
  • Latest
Yellapur Relatives are the support for more than a thousand victims!

ಯಲ್ಲಾಪುರ: ಸಾವಿರಕ್ಕೂ ಅಧಿಕ ಸಂತ್ರಸ್ತರಿಗೆ ಸಂಬoಧಿಕರೇ ಆಸರೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಯಲ್ಲಾಪುರ: ಸಾವಿರಕ್ಕೂ ಅಧಿಕ ಸಂತ್ರಸ್ತರಿಗೆ ಸಂಬoಧಿಕರೇ ಆಸರೆ!

AchyutKumar by AchyutKumar
in ಸ್ಥಳೀಯ
Yellapur Relatives are the support for more than a thousand victims!

ಭೂ ಕುಸಿತ ಹಾಗೂ ಮನೆ ಕುಸಿತದ ಆತಂಕದ ಹಿನ್ನಲೆ ಯಲ್ಲಾಪುರ ತಾಲೂಕಿನ ಸಾವಿರಕ್ಕೂ ಅಧಿಕ ಜನರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗುವoತೆ ತಾಲೂಕು ಆಡಳಿತ ನೋಟಿಸ್ ನೀಡಿದೆ. ಮಳೆ ಜೋರಾದ ಅವಧಿಯಲ್ಲಿ ಅವರೆಲ್ಲರೂ ಸಂಬoಧಿಕರ ಮನೆಯಲ್ಲಿ ಆಶ್ರಯಪಡೆಯಲು ಸಿದ್ಧತೆ ನಡೆಸಿದ್ದಾರೆ.

ಯಲ್ಲಾಪುರ ತಾಲೂಕಿನ 18 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒಟ್ಟು ಶಿಥಿಲಗೊಂಡ 152 ಮಣ್ಣಿನ ಮನೆಗಳಿವೆ. ಆ ಮನೆಗಳೆಲ್ಲವೂ ಮಳೆಗಾಲದ ಅವಧಿಯಲ್ಲಿ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿದೆ. ಕೆಲವಡೆ ಹಳೆಯ ಮನೆಗಳನ್ನು ಈಚೆಗೆ ನವೀಕರಿಸಲಾಗಿದ್ದು, ಕೆಲ ಮನೆಗಳು ಶಿಥಿಲಗೊಂಡಿದ್ದರೂ ಹೊರಗಡೆಯಿಂದ ಅದು ಗೊತ್ತಾಗುತ್ತಿಲ್ಲ. ಹೀಗಾಗಿ ಅಪಾಯದ ಅಂಚಿನಲ್ಲಿರುವ ಅಂಥ ಮನೆಗಳ ಲೆಕ್ಕ ಇಲ್ಲಿಲ್ಲ.

ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ, ಯಲ್ಲಾಪುರ ತಾಲೂಕಿನ 115 ಮನೆಗಳ ಮೇಲೆ ಭೂ ಕುಸಿತದ ಸಾಧ್ಯತೆಗಳಿವೆ. ಆ ಮನೆಗಳು ಘಟ್ಟಿಮುಟ್ಟಾಗಿದದರೂ ಅವು ಅಪಾಯದ ಪ್ರದೇಶದಲ್ಲಿರುವ ಕಾರಣ ಮಳೆಗಾಲದ ಆತಂಕ ಎದುರಾಗಿದೆ. 152 ಮಣ್ಣಿನ ಮನೆ ಹಾಗೂ 115 ಭೂ ಕುಸಿತ ಪ್ರದೇಶದಲ್ಲಿರುವ ಮನೆ ಸೇರಿ ಒಟ್ಟು 267 ಮನೆಗಳಿಗೆ ಕಂದಾಯ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಗುಡ್ಡ ಕುಸಿತ ಪ್ರದೇಶಗಳು ಎಷ್ಟು?
ತಜ್ಞರ ಅಧ್ಯಯನದ ಪ್ರಕಾರ ಆನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 2 ಕಡೆ ಗುಡ್ಡ ಕುಸಿತದ ಸಾಧ್ಯತೆಯಿದೆ. ದೆಹಳ್ಳಿಯಲ್ಲಿ 3, ಕಣ್ಣಿಗೇರಿ ಹಾಗೂ ಇಡಗುಂದಿಯಲ್ಲಿ 8, ವಜ್ರಳ್ಳಿಯಲ್ಲಿ 16 ಅರಬೈಲ್ ವ್ಯಾಪ್ತಿಯಲ್ಲಿ 14 ಕಡೆ ಗುಡ್ಡ ಕುಸಿತದ ಆತಂಕ ಎದುರಾಗಿದೆ. ಕಳಚೆ ಒಂದೇ ಊರಿನಲ್ಲಿ 61 ಕಡೆ ಗುಡ್ಡ ಕುಸಿತ ಸಾಧ್ಯತೆಯ ಬಗ್ಗೆ ಅಂದಾಜಿಸಲಾಗಿದೆ. ಇದರೊಂದಿಗೆ ಮಾವಿನಮನೆ ಗ್ರಾಮ ಪಂಚಾಯತದಲ್ಲಿ 2 ಹಾಗೂ ನಂದೂಳ್ಳಿ ಭಾಗದಲ್ಲಿ ಒಂದು ಕಡೆ ಗುಡ್ಡ ಕುಸಿತದ ಅಪಾಯವಿದೆ.

ಕಾಳಜಿ ಕೇಂದ್ರಕ್ಕೂ ಆತಂಕ
ಮಳೆ ಜೋರಾದರೆ ಸರ್ಕಾರಿ ಶಾಲೆಗಳನ್ನು ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತದೆ. ಆದರೆ, ಸಾಕಷ್ಟು ಮಣ್ಣಿನ ಗೋಡೆಯ ಶಾಲೆಗಳಿವೆ. ಜೊತೆಗೆ ಗುಡ್ಡದ ತಪ್ಪಲಿನಲ್ಲಿರುವ ಶಾಲೆಗಳೇ ಅಧಿಕ ಪ್ರಮಾಣದಲ್ಲಿರುವುದರಿಂದ ಆ ಶಾಲೆಗಳು ಆತಂಕ ಎದುರಿಸುತ್ತಿವೆ. ಜೊತೆಗೆ ಮಳೆಗಾಲದ ಅವಧಿಯಲ್ಲಿ ಶಾಲೆಗಳಲ್ಲಿ ಶುಚಿತ್ವ ಕೊರತೆ, ಗಾಳಿ-ಬೆಳಕಿನ ಸಮಸ್ಯೆ, ವಿದ್ಯುತ್ ದೀಪ ಬೆಳಗದಿರುವಿಕೆಯೊಂದಿಗೆ ವಿಪರೀತ ಸೊಳ್ಳೆಕಾಟವೂ ಸಂತ್ರಸ್ತರಿಗೆ ತಲೆನೋವು ತರುತ್ತದೆ. ಹೀಗಾಗಿ ಸರ್ಕಾರ ನಿರ್ಮಿಸಿದ ಕಾಳಜಿ ಕೇಂದ್ರದ ಬದಲು ಅನೇಕರು ಸಂಬoಧಿಕರ ಮನೆಯಲ್ಲಿ ಆಶ್ರಯಪಡೆಯುತ್ತಾರೆ.

ಭೂ ಕುಸಿತ ಪ್ರದೇಶ ಎಂದು ಗುರುತಿಸಲಾದ ಆನಗೋಡು ವ್ಯಾಪ್ತಿಯ 2 ಮನೆ, ದೆಹಳ್ಳಿ ವ್ಯಾಪ್ತಿಯ 3 ಮನೆ, ಕಣ್ಣಿಗೇರಿ ಹಾಗೂ ಇಡಗುಂದಿಯಲ್ಲಿ 8 ಮನೆಗಳಿಗೆ ಸ್ಥಳಾಂತರವಾಗುವoತೆ ಕಂದಾಯ ಇಲಾಖೆ ಸೂಚನೆ ನೀಡಿದೆ. ವಜ್ರಳ್ಳಿಯ 16, ಅರಬೈಲಿನ 14, ಕಳಚೆಯ 61 ಮನೆಯವರಿಗೆ ನೋಟಿಸ್ ತಲುಪಿದೆ. ಮಾವಿನಮನೆ ವ್ಯಾಪ್ತಿಯ 2 ಹಾಗೂ ನಂದೂಳ್ಳಿಯ 1 ಮನೆಯವರಿಗೆ ಅಧಿಕಾರಿಗಳು ಸ್ಥಳಾಂತರದ ನೋಟಿಸ್ ಜಾರಿ ಮಾಡಿದ್ದಾರೆ. `ಮಳೆ ಬಂದ ನಂತರ ನೋಡೋಣ’ ಎಂದು ನೋಟಿಸ್‌ಪಡೆದವರು ಸದ್ಯ ಸುಮ್ಮನಿದ್ದಾರೆ.

ShareSendTweetShare
Previous Post

ಕಳ್ಳನ ಹಿಡಿದು ಕಾಸು ಗೆದ್ದ ಶಿರಸಿ ಪೊಲೀಸ್!

Next Post

ಆಶ್ರಯಮನೆ: ದುಡ್ಡಿಲ್ಲದೇ ಹಕ್ಕುಪಡೆದವರಿಗೆ ಹೊರದಬ್ಬುವ ಆತಂಕ!

Next Post
Shelter Fear of eviction for those who have claimed without money!

ಆಶ್ರಯಮನೆ: ದುಡ್ಡಿಲ್ಲದೇ ಹಕ್ಕುಪಡೆದವರಿಗೆ ಹೊರದಬ್ಬುವ ಆತಂಕ!

Cow slaughter in the courtyard: A sinner killed a cow worth millions for meat!

ಮನೆ ಅಂಗಳದಲ್ಲಿ ಗೋಹತ್ಯೆ: ಮಾಂಸಕ್ಕಾಗಿ ಪುಣ್ಯಕೋಟಿ ಕೊಂದ ಪಾಪಿ!

Untimely death of contractor Condolences from association members

ಗುತ್ತಿಗೆದಾರರ ಅಕಾಲಿಕ ಮರಣ: ಸಂಘದ ಸದಸ್ಯರ ಸಂತಾಪ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.