6
  • Latest
ಹೊಟ್ಟೆ ಹಸಿವು: ಹಲ್ಲಿಲ್ಲದ ಹಾವು ಚಾಕು ನುಂಗಿತು!

ಹೊಟ್ಟೆ ಹಸಿವು: ಹಲ್ಲಿಲ್ಲದ ಹಾವು ಚಾಕು ನುಂಗಿತು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹೊಟ್ಟೆ ಹಸಿವು: ಹಲ್ಲಿಲ್ಲದ ಹಾವು ಚಾಕು ನುಂಗಿತು!

AchyutKumar by AchyutKumar
in ಸ್ಥಳೀಯ
ಹೊಟ್ಟೆ ಹಸಿವು: ಹಲ್ಲಿಲ್ಲದ ಹಾವು ಚಾಕು ನುಂಗಿತು!

`ಇಲಿ, ಕೋಳಿ, ಮೊಟ್ಟೆ, ಕಪ್ಪೆ ತಿಂದು ಬದುಕಬೇಕಿದ್ದ ನಾಗರ ಹಾವು ಅದ್ಯಾವುದು ಸಿಗದ ಕಾರಣ ತರಾತುರಿಯಲ್ಲಿ ಅಡುಗೆ ಮನೆಯಲ್ಲಿದ್ದ ಚಾಕು ನುಂಗಿದೆ. ಹೊಟ್ಟೆಗೆ ಹೋದ ಚಾಕುವನ್ನು ಅರಗಿಸಿಕೊಳ್ಳಲಿಕ್ಕಾಗದೇ ಸಾವು-ಬದುಕಿನ ಹೋರಾಟ ನಡೆಸಿದ್ದ ಆ ಹಾವನ್ನು ಉರಗ ತಜ್ಞರು ರಕ್ಷಿಸಿದ್ದಾರೆ.

ADVERTISEMENT

ಸೋಮವಾರ ಇಲಿಯೊಂದನ್ನು ಬೆನ್ನಟ್ಟಿ ಬಂದ ನಾಗರ ಹಾವು ಕುಮಟಾ ಹೆಗಡೆಯಲ್ಲಿರುವ ಗೋವಿಂದ ನಾಯ್ಕ ಅವರ ಅಡುಗೆ ಮನೆಗೆ ನುಗ್ಗಿದೆ. ಅಕ್ಕಿ ಚೀಲದ ಹಿಂದೆ ಇಲಿ ತಪ್ಪಿಸಿಕೊಂಡಿದ್ದು, ಹಸಿವಿನಲ್ಲಿದ್ದ ಹಾವು ಅಡುಗೆ ಮನೆ ಗೋಡೆಯಿಂದ ನೆಲಕ್ಕೆ ಬಿದ್ದಿದ್ದ ಚಾಕುವನ್ನು ಕಬಳಿಸಿದೆ. ಅಡುಗೆ ಮನೆಯಲ್ಲಿ ವಿಶ್ರಾಂತ ಸ್ಥಿತಿಯಲ್ಲಿದ್ದ ಹಾವನ್ನು ನೋಡಿದ ಗೋವಿಂದ ನಾಯ್ಕರ ಕುಟುಂಬ ಬೆಚ್ಚಿ ಬಿದ್ದು, ಬೊಬ್ಬೆ ಹೊಡೆದರೂ ಹಾವು ಕದಲಲಿಲ್ಲ.

ಹಾವು ಮನೆಗೆ ಬಂದಿರುವ ಬಗ್ಗೆ ಉರಗ ತಜ್ಞ ಪವನ್ ನಾಯ್ಕ ಅವರಿಗೆ ಅಲ್ಲಿನವರು ವಿಷಯ ಮುಟ್ಟಿಸಿದ್ದಾರೆ. ಹಾವನ್ನು ಪರಿಶೀಲಿಸಿದ ಪವನ್ ನಾಯ್ಕ ಅವರಿಗೆ ಹೊಟ್ಟೆಯೊಳಗೆ ವಸ್ತುವಿರುವುದು ಗೊತ್ತಾಗಿದೆ. ಅಷ್ಟರೊಳಗೆ ಮನೆಯಲ್ಲಿದ್ದ ಚಾಕು ಕಣ್ಮರೆಯಾದ ವಿಷಯವೂ ಗೊತ್ತಾಗಿದ್ದು, ಪವನ್ ನಾಯ್ಕ ಅವರು ಪಶು ತಜ್ಞರಿಗೆ ಫೋನ್ ಮಾಡಿದರು. ಪಶು ತಜ್ಞ ಅದೈತ ಭಟ್ ಅಲ್ಲಿಗೆ ಆಗಮಿಸಿದ ನಂತರ ಅವರಿಬ್ಬರೂ ಸೇರಿ ಹಾವಿನ ಹೊಟ್ಟೆಯಲ್ಲಿದ್ದ ಚಾಕು ಹೊರತೆಗೆದರು.

Advertisement. Scroll to continue reading.

1 ಅಡಿ 2 ಇಂಜು ಉದ್ದದ ಚಾಕು ಹೊಟ್ಟೆಯಿಂದ ಹೊರ ಬಂದ ತರುವಾಯ ಹಾವು ಅಲ್ಲಿಂದ ಕದಲಿತು. `ಚಾಕು ಹೊಟ್ಟೆಯಲ್ಲಿಯೇ ಇದ್ದರೆ ಹಾವು ಸಾಯುವ ಸಾಧ್ಯತೆ ಇತ್ತು. ಹೀಗಾಗಿ ಅರ್ದ ತಾಸು ಗುದ್ದಾಡಿ ಚಾಕು ಹೊರ ತೆಗೆಯಲಾಗಿದೆ’ ಎಂದು ತಜ್ಞರು ವಿವರಿಸಿದರು. ಆ ಹಾವನ್ನು ಸದ್ಯ ಕಾಡಿಗೆ ಬಿಡಲಾಗಿದೆ.

Advertisement. Scroll to continue reading.
Previous Post

ಜಲ ಜೀವನ: ಸಂಸದರಿಗೆ ಅವಮಾನ.. ವಿರೋಧಿ ಬಣದಿಂದ ಸನ್ಮಾನ!

Next Post

ಮುಂಡಗೋಡು ಜನರ ನಿದ್ದೆಗೆಡಿಸಿದ ನಿಶಾಚರಿ!

Next Post
The nocturnal activity that disturbed the sleep of the people of Mundagodu!

ಮುಂಡಗೋಡು ಜನರ ನಿದ್ದೆಗೆಡಿಸಿದ ನಿಶಾಚರಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ