ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಬಾಳೆ ತೋಟ ನಿರ್ಮಾಣ ಕಾರ್ಯ ಮುಂದುವರಿದಿದೆ!
ನಿನ್ನೆ ಸಂಜೆ ವೇಳೆಗೆ ಚವತ್ತಿ ಬಳಿ ಸ್ಥಳೀಯರು ಯಾರೋ ರಸ್ತೆಯ ಹೊಂಡಗಳಲ್ಲಿ ಬಾಳೆ ಗಿಡ ನೆಟ್ಟಿದ್ದರು. ಶನಿವಾರ ಬೆಳಿಗ್ಗೆ ಶಿರಸಿ ರಸ್ತೆಯ ಸವಣಗೇರಿ ಬಳಿ ಬೆಳ್ಸೂರು ಕ್ರಾಸ್ ನಲ್ಲಿ ರಸ್ತೆಯ ಹೊಂಡದಲ್ಲಿ ಬಾಳೆ ಗಿಡ ಪ್ರತ್ಯಕ್ಷವಾಗಿದೆ.
ಇದೇ ಸ್ಥಳದಲ್ಲಿ ಕಳೆದ ವರ್ಷವೂ ಬಾಳೆಗಿಡ ನೆಟ್ಟು ರಸ್ತೆಯ ಅವ್ಯವಸ್ಥೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗಲೂ ರಸ್ತೆಯ ದುಃಸ್ಥಿತಿ ಹಾಗೇ ಇದ್ದು, ಈ ಬಾರಿಯೂ ಅದೇ ಹಾದಿ ಹಿಡಿದಿದ್ದಾರೆ.
ತಾಲೂಕಿನಲ್ಲಿ ಇದೇ ಸಂಪ್ರದಾಯ ಮುಂದುವರಿದರೆ ಬಹುತೇಕ ಎಲ್ಲಾ ರಸ್ತೆಗಳಲ್ಲೂ ಬಾಳೆ ತೋಟ ಸಿದ್ಧವಾದರೆ ಅಚ್ಚರಿಯಿಲ್ಲ.







