ಊಟ ಮಾಡುವಾಗ ಯಮನಾದರೂ ಕಾಯುತ್ತಾನೆ ಎಂಬ ಮಾತಿದೆ. ಆದರೆ ಕಾರವಾರ ಬಿಣಗಾದ ಈ ಚಾಲಕ ಊಟ ಮಾಡುವಾಗಲೇ ಪ್ರಾಣ ಬಿಟ್ಟಿದ್ದಾನೆ.
ಬಿಣಗಾದ ಮಾಳಸಾವಾಡದ ಅಮಿತ್ ಆನಂದು ಮಾಳಸೆಕರ್ (38) ಮೃತ ವ್ಯಕ್ತಿ. ಈತ ಮಧ್ಯಾಹ್ನ ಊಟ ಮಾಡುವಾಗ ಅನ್ನದ ಅಗುಳು ಗಂಟಲಲ್ಲಿ ಸಿಲುಕಿ ಕುಸಿದು ಬಿದ್ದಿದ್ದಾನೆ.
ಮನೆಯವರು ಉಪಚರಿಸಿ, ನಂತರ ಆಸ್ಪತ್ರೆಗೆ ಸಾಗಿಸಿದಾಗ, ಮೊದಲೇ ಮೃತಪಟ್ಟ ಬಗ್ಗೆ ವೈದ್ಯರು ಧೃಢಪಡಿಸಿದ್ದಾರೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






