ಬ್ರಹತ್ ಆಲದ ಮರ ಮುರಿವೊಂದು ಮುರಿದು ಬಿದ್ದು, ಗರ್ಭಿಣಿ ಸ್ಥಳದಲ್ಲೇ ಮೃತಪಟ್ಟು, ನಾಲ್ಕು ಜನರು ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಪಂ ವ್ಯಾಪ್ತಿಯ ಡೋಮಗೆರೆ ಬಳಿ ನಡೆದಿದೆ.
ಸಾವಿತ್ರಿ ಬಾಬು ಖರಾತ್ (28) ಐದು ತಿಂಗಳ ಗರ್ಭಿಣಿ ಸ್ಥಳದಲ್ಲಿಯೇ ಮೃತಪಟ್ಟ ಮಹಿಳೆ. ಸ್ವಾತಿ ಬಾಬು ಖರಾತ್, ಹಾಗೂ ಅಂಗನವಾಡಿ ಮಕ್ಕಳಾದ ಘಾಟು ಲಕ್ಕು ಕೋಕರೆ, ಶ್ರಾವಣಿ ಬಾಬು ಖರಾತ್, ಶಾಂಭವಿ ಬಾಬು ಖರಾತ್ ಗಾಯಗೊಂಡವರು.
ಇವರೆಲ್ಲ ಅಂಗನವಾಡಿಯಿಂದ ಮನೆಗೆ ತೆರಳುತ್ತಿರುವ ವೇಳೆ ಏಕಾಏಕಿ ಆಲದ ಮರವೊಂದು ಮುರಿದು ಬಿದ್ದಿದೆ. ಇದರಡಿ ಸಿಲುಕಿ ಗರ್ಭಿಣಿ ಮಹಿಳೆ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಜತೆಯಲ್ಲಿದ್ದ ಇನ್ನೂ ಮೂವರು ಅಪಾಯದಿಂದ ಪಾರಾಗಿದ್ದಾರೆ.
ಗಾಯಾಳುಗಳಿಗೆ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಸಾಗಿಸಲಾಗಿದೆ.







