6
  • Latest
ಯಶಸ್ವಿಯಾಗಿ ನಡೆದ ಪ್ರಸಂಗ ಪಂಚಕ-3

ಯಶಸ್ವಿಯಾಗಿ ನಡೆದ ಪ್ರಸಂಗ ಪಂಚಕ-3

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಯಶಸ್ವಿಯಾಗಿ ನಡೆದ ಪ್ರಸಂಗ ಪಂಚಕ-3

ಶ್ರೀ ನ್ಯೂಸ್ by ಶ್ರೀ ನ್ಯೂಸ್
September 21, 2025
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ ತಾಲೂಕಿನ ಮಾಗೋಡ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದಿಂದ ಪ್ರಸಂಗ ಪಂಚಕ-3 ಕಾರ್ಯಕ್ರಮ ಶನಿವಾರ ಯಶಸ್ವಿಯಾಗಿ ನಡೆಯಿತು. ಸಂಜೆ 6 ರಿಂದ ಮಾರನೇ ದಿನ ಬೆಳಗ್ಗೆ 6 ರವರೆಗೆ ನಿರಂತರವಾಗಿ 12 ತಾಸುಗಳ ಕಾಲ 5 ತಾಳಮದ್ದಲೆಗಳು ಪ್ರಸ್ತುತಗೊಂಡವು.

ಹಿರಿಯ ವೈದಿಕರಾದ ನಾರಾಯಣ ಭಟ್ಟ ಮೊಟ್ಟೆಗದ್ದೆ, ರಾಮಕೃಷ್ಣ ಭಟ್ಟ ಮಾಗೋಡ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು.
ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ, ಭೀಷ್ಮ ಪ್ರತಿಜ್ಞೆ, ರತ್ನಾವತಿ ಕಲ್ಯಾಣ, ರಾಮಾಂಜನೇಯ, ದ್ರೌಪದಿ ಪ್ರತಾಪ, ಗದಾಯುದ್ಧ ಎಂಬ 5 ಪೌರಾಣಿಕ ಆಖ್ಯಾನಗಳು ಪ್ರಸ್ತುತಗೊಂಡವು.

ADVERTISEMENT
ADVERTISEMENT

ಪ್ರತಿ ಪ್ರಸಂಗಕ್ಕೂ 2 ತಾಸು 20 ನಿಮಿಷಗಳ ಕಾಲಾವಕಾಶ ನಿಗದಿಪಡಿಸಲಾಗಿತ್ತು. ನಿರ್ದಿಷ್ಟ ಸಮಯದಲ್ಲಿ ಹಿಮ್ಮೇಳ-ಮುಮ್ಮೇಳದ ಕಲಾವಿದರು ಅಚ್ಚುಕಟ್ಟಾಗಿ ಪ್ರಸಂಗ ಪ್ರಸ್ತುತಪಡಿಸಿದರು. 45 ಕ್ಕೂ ಹೆಚ್ಚು ಸ್ಥಳೀಯ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗುಂದದ ಶಾರ್ವರಿ ತಾಳಮದ್ದಲೆ ಕೂಟ ಹಾಗೂ ಜೂಜಿನಬೈಲಿನ ವಿಶ್ವವಂದ್ಯಂ ಮಹಿಳಾ ಕಲಾ ಬಳಗದ ಮಹಿಳಾ ಕಲಾವಿದರೂ ಭಾಗವಹಿಸಿದ್ದು ವಿಶೇಷವಾಗಿತ್ತು.

Advertisement. Scroll to continue reading.
Advertisement. Scroll to continue reading.

ಸಮಯ ಪಾಲನೆ, ಶಿಸ್ತು, ಆತ್ಮೀಯ ಆತಿಥ್ಯಕ್ಕೆ ಪ್ರಸಂಗ ಪಂಚಕ ಹೆಸರಾಗಿದ್ದು, ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಈ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾಸಕ್ತರು ಸಂಘಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೀರಮಾರುತಿ ತಾಳಮದ್ದಲೆ ಕೂಟವು ಕಳೆದ ಮೂರು ವರ್ಷಗಳಿಂದ ಪ್ರಸಂಗ ಪಂಚಕ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ. ಪ್ರಸಂಗದ ಆಯ್ಕೆ, ಕಲಾವಿದರಿಗೆ ಪಾತ್ರ ಹಂಚಿಕೆಯನ್ನು ಅಚ್ಚುಕಟ್ಟಾಗಿ ಮಾಡುವುದು, ಹಿಮ್ಮೇಳ, ಮುಮ್ಮೇಳದ ಪ್ರತಿ ಕಲಾವಿದರು ಸಮಯ ಪಾಲನೆಯ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸುವುದು. ಕಲಾವಿದರು ಯಾವುದೇ ಅಪೇಕ್ಷೆ ಇಲ್ಲದೇ, ಸೇವಾ ಮನೋಭಾವನೆಯಿಂದಲೇ ಈ ಕಲಾರಾಧನೆಯಲ್ಲಿ ಭಾಗವಹಿಸುವುದು. ಕಲಾವಿದರಿಗೆ ಮಾತ್ರವಲ್ಲದೇ ಬಂದ ಪ್ರೇಕ್ಷಕರಿಗೂ ನಿರಂತರ ಊಟ, ತಿಂಡಿ, ಪಾನೀಯದ ವ್ಯವಸ್ಥೆ.. ಹೀಗೆ ಹಲವು ಅನುಸರಣೀಯ ಸಂಗತಿಗಳ ಮೂಲಕ ಪ್ರಸಂಗ ಪಂಚಕ ಕಾರ್ಯಕ್ರಮ ಇನ್ನೊಂದು ಯಶಸ್ವೀ ಹೆಜ್ಜೆ ಇರಿಸಿತು. ಕೂಟದ ಸದಸ್ಯರ ಜತೆಗೆ ಗ್ರಾಮಸ್ಥರೂ ತಮ್ಮದೇ ಕಾರ್ಯಕ್ರಮವೆಂಬಂತೆ ನೀಡಿದ ಸಹಕಾರ, ಪ್ರೋತ್ಸಾಹವೂ ಮಾದರಿಯಾಗಿತ್ತು.

ShareSendTweetShare
ADVERTISEMENT
Previous Post

ಸಂತೆಗೆ ಬಂದವನಿಗೆ ಸಾವು ತಂದ ಬಸ್

Next Post

ಕುರ್ಚಿಗಾಗಿ ಸಿದ್ದರಾಮಯ್ಯ ಟೈಂ ಪಾಸ್ ನಾಟಕ: ರಾಮು ನಾಯ್ಕ ವ್ಯಂಗ್ಯ

Next Post
ಕುರ್ಚಿಗಾಗಿ ಸಿದ್ದರಾಮಯ್ಯ ಟೈಂ ಪಾಸ್ ನಾಟಕ: ರಾಮು ನಾಯ್ಕ ವ್ಯಂಗ್ಯ

ಕುರ್ಚಿಗಾಗಿ ಸಿದ್ದರಾಮಯ್ಯ ಟೈಂ ಪಾಸ್ ನಾಟಕ: ರಾಮು ನಾಯ್ಕ ವ್ಯಂಗ್ಯ

ಪ್ರೌಢಶಾಲಾ ವಿದ್ಯಾರ್ಥಿಗಳ‌ ಜಿಲ್ಲಾಮಟ್ಟದ ಕ್ರೀಡಾಕೂಟ: ವಿಜೇತರಿಗೆ ಬಹುಮಾನ ವಿತರಣೆ

ಪ್ರೌಢಶಾಲಾ ವಿದ್ಯಾರ್ಥಿಗಳ‌ ಜಿಲ್ಲಾಮಟ್ಟದ ಕ್ರೀಡಾಕೂಟ: ವಿಜೇತರಿಗೆ ಬಹುಮಾನ ವಿತರಣೆ

ಸಿಲಿಂಡರ್ ಸ್ಫೋಟ: ಯುವತಿ ಸಾವು

ಸಿಲಿಂಡರ್ ಸ್ಫೋಟ: ಯುವತಿ ಸಾವು

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.