ಯಲ್ಲಾಪುರದ ನೌಕರ ಭವನದಲ್ಲಿ ಸವಿತಾ ಸಮಾಜ ಸಂಘದ ತ್ರೈಮಾಸಿಕ ಸಭೆ ಶನಿವಾರ ನಡೆಯಿತು.
ಸಮಾಜದ ಹಿರಿಯ ಬುಚ್ಚಣ್ಣ ಯಾಮಕೆ ಮಾತನಾಡಿ, ಸಮಾಜದವರೆಲ್ಲ ಸಂಘಟಿತವಾಗಬೇಕು. ನಮ್ಮ ಸಮಾಜದಲ್ಲಿನ ಬಡವರಿಗೆ, ಪ್ರತಿಭಾವಂತರಿಗೆ ನೆರವಾಗುವ ನಿಟ್ಟಿನಲ್ಲಿ ಸಂಘಟನೆ ಬೆಳೆಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನಾಗರಾಜ ಯಾಮಕೆ, ಮಾತನಾಡಿ ಸಮಾಜದ ಒಳಿತಿಗಾಗಿ ಸಂಘ ರಚನೆಯಾಗಿದೆ. ಸಂಘದ ಚಟುವಟಿಕೆಗಳು ನಿರಂತರವಾಗಿ ನಡಯುತ್ತಿವೆ. ಸಂಘದ ನಿಧಿಯನ್ನು ಹೆಚ್ಚು ಮಾಡಬೇಕಿದೆ. ನಿಧಿ ಬೆಳೆದರೆ ಬಡ ಬಂಧುಗಳಿಗೆ ಸಹಾಯ ಮಾಡಲು ಸಾಧ್ಯ. ಸಮುದಾಯದ ಅನೇಕ ಪ್ರತಿಭೆಗಳನ್ನು ಪ್ರೋತ್ಸಾಹಿಸಲು, ಗೌರವಿಸಲೂ ಸಾಧ್ಯ. ಎಲ್ಲರೂ ಕೈಜೋಡಿಸಿದರೆ ಇದು ಅಸಾಧ್ಯವಲ್ಲ ಎಂದರು.
ಖಜಾಂಚಿ ಪವನ ನಾರಾಯಣ ಯಾಮಕೆ ಹಣಕಾಸಿನ ಸ್ಥಿಗತಿ ಬಗ್ಗೆ ಮಾಹಿತಿ ನೀಡಿದರು. ಅಹಿಂದಾ ರಾಜ್ಯ ಸಂಘಟನೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ನಾಗರಾಜ ಯಾಮಕೆ ಅವರನ್ನು ಸಮಾಜದ ವತಿಯಿಂದ ಗೌರವಿಸಿ, ಅಭಿನಂದಿಸಲಾಯಿತು.
ಸಂಘದ ಪ್ರಮುಖರಾದ ಶಂಕರ ನರಸಪ್ಪ ಹುಟ್ಕರ, ನರಸಿಂಹ ಯಾಮಕೆ, ದೇವಪ್ಪ ಯಾಮಕೆ, ಜೈರಾಮ ಯಾಮಕೆ, ಪ್ರಧಾನ ಕಾರ್ಯದರ್ಶಿ ನವೀನ ನಾಗೇಶ ಯಾಮಕೆ, ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಹ್ಲಾದ ಬುಚ್ಚಣ್ಣ ಯಾಮಕೆ ಸ್ವಾಗತಿಸಿ, ನಿರ್ವಹಿಸಿದರು, ರಾಘವೇಂದ್ರ ಶಂಕರ ಹುಟ್ಕರ ವಂದಿಸಿದರು.







