ಯಲ್ಲಾಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಆಶ್ರಯದಲ್ಲಿ ಪದಾಧಿಕಾರಿಗಳ ತರಬೇತಿ ಕಾರ್ಯಗಾರ ನಡೆಯಿತು.
ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಎಂ ಅವರು
ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖ ಅಂಗವಾದ ಒಕ್ಕೂಟಗಳು, ಒಕ್ಕೂಟದ ಅಧ್ಯಕ್ಷರು ಉಪಾಧ್ಯಕ್ಷರು. ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ. ಎಂಬ 5 ಸ್ಥಾನಗಳಿರುವ ಬಗ್ಗೆ, ಅವರವರ ಜವಾಬ್ದಾರಿ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು. ಬ್ಯಾಂಕಿಂಗ್ ವ್ಯವಸ್ಥೆ, ಆರ್ಥಿಕ ಸಹಕಾರ ಮೂಲದ ವಿವರಣೆಯ ಜೊತೆಗೆ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಕ್ಷೇತ್ರ ಯೋಜನಾಧಿಕಾರಿ ಸಂತೋಷ್ ಎ ಎಸ್ ಮಾತನಾಡಿ, ಡಾ.ವೀರೇಂದ್ರ ಹೆಗ್ಗಡೆ ಅವರು ಬೆಳ್ತಗಂಡಿಯಲ್ಲಿ 43 ವರ್ಷಗಳ ಹಿಂದೆ ಪ್ರಾರಂಭಿಸಿದ ಯೋಜನೆ, ಪ್ರಸ್ತುತ ಕರ್ನಾಟಕ ರಾಜ್ಯದ ಅತ್ಯಂತ ಕಾರ್ಯನಿರ್ವಹಿಸುತ್ತಿದೆ. ಯಲ್ಲಾಪುರ ತಾಲೂಕಿನಲ್ಲಿ 2006 ರಲ್ಲಿ ಯೋಜನೆ ಪ್ರಗತಿ- ಬಂಧು ಸ್ವ ಸಹಾಯ ಸಂಘದ ರಚನೆ ಮೂಲಕ ಚಾಲನೆ ನೀಡಲಾಯಿತು, ಇದೀಗ ಯಶಸ್ವಿಯಾಗಿ 19 ವರ್ಷ ಪೂರ್ಣಗೊಂಡಿದೆ ಎಂದರು.
ತರಬೇತಿದಾರರಾಗಿ ಭರತ್ಯಾ ಗೌಡ, ಯಲ್ಲಪ್ಪ ಹೊಸಮನಿ ಭಾಗವಹಿಸಿದ್ದರು. ಅನಿತಾ ಗೌಡ ಸ್ವಾಗತಿಸಿದರು. ರಾಜೀವಿ ನಿರ್ವಹಿಸಿದರು.







