ಯಲ್ಲಾಪುರ ತಾಲೂಕಿನ ಕಿರವತ್ತಿ ಬೊಮಡಿಕೊಪ್ಪದಲ್ಲಿ ಮಹಿಳೆಯ ಶೀಲ ಶಂಕಿಸಿ ಗಂಡನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ.
ಜನ್ನಿ ಬಾಬು ಖಾತ್ರೋಟ (23) ಮೃತ ಮಹಿಳೆ.
ಈಕೆ ಕಳೆದ ಅಕ್ಟೋಬರ್ 3 ರಂದು ಮಕ್ಕಳೊಂದಿಗೆ ಮನೆಯಲ್ಲಿರುವಾಗ ಗಂಡ ಬಾಬು ಎಕ್ಕು ಖಾತ್ರೋಟ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಶೀಲ ಶಂಕಿಸಿ ನಿನ್ನ ಕೊಲೆ ಮಾಡುತ್ತೇನೆಂದು ಹೇಳಿ ಬೈಕ್ ಗೆ ಹಾಕಲು ತಂದಿರುವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.
ಇದರಿಂದ ಗಾಯಗೊಂಡ ಆಕೆ ಬೊಬ್ಬೆ ಹಾಕುತ್ತ ತಾಯಿ ಮನೆಗೆ ಹೋಗಿದ್ದು, ಗಾಯಗೊಂಡಿದ್ದ ಆಕೆಯನ್ನು ತಾಯಿ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ದಿದ್ದರು.
ಅಲ್ಲಿ ಗುಣಮುಖಳಾಗಿ ಮನೆಗೆ ಕರೆತಂದಿದ್ದು, ಮನೆಯಲ್ಲಿ ಆಕರ ಮೃತಪಟ್ಟಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







