ಅಕ್ರಮವಾಗಿ ಬುಲೆರೊ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಪೊಲೀಸರು ಯಲ್ಲಾಪುರ ಪಟ್ಟಣದ ಮಲಬಾರ್ ಹೋಟೆಲ್ ಬಳಿ ಸೋಮವಾರ ರಕ್ಷಿಸಿದ್ದಾರೆ. ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.
ಭಟ್ಕಳದ ಮಹಮ್ಮದ್ ಸಿದ್ದಿಕ್ ಅಬ್ದುಲ್ ಅಮೀರ್ ಮಜಾರ ಬಂಧಿತ. ಈತನೊಂದಿಗಿದ್ದ ರಬ್ಬಾನಿ ಬಾಬಾಸಾಬ ಕಚವಿ ಹಾಗೂ ಅಲ್ತಾಫ ಎಂಬವರು ಓಡಿ ಹೋಗಿದ್ದಾರೆ.
ಇವರು ಬುಲೆರೊ ವಾಹನದಲ್ಲಿ ಒಂದು ಆಕಳು, ಎರಡು ಹೋರಿ ಹಾಗೂ ಮೂರು ಸಣ್ಣ ದನಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು ಕಲಘಟಗಿ ಕಡೆಯಿಂದ ಅಂಕೋಲಾ ಕಡೆಗೆ ಸಾಗಿಸುತ್ತಿದ್ದರು. ಪಟ್ಟಣದ ಮಲಬಾರ್ ಹೋಟೆಲ್ ಬಳಿ ಪೊಲೀಸರು ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಸಾಗಿಸುತ್ತಿದ್ದ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ನಾಪತಗತೆಯಾಗಿದ್ದಾರೆ. ಬುಲೆರೊ ವಾಹನವನ್ನು ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







