ಯಲ್ಲಾಪುರ ತಾಲೂಕಿನ ಕವಡಿಕೆರೆಯ ಕೌಡಮ್ಮಾ ದೇವಸ್ಥಾನದಲ್ಲಿ ಗಂಗಾಷ್ಟಮಿ ಉತ್ಸವ ಇಂದಿನಿಂದ 7 ದಿನಗಳ ಕಾಲ ನಡೆಯಲಿದೆ.
ಪಾಲಕಿ ಉತ್ಸವ, ಅಷ್ಟಾವಧಾನ ಸೇವೆಯಿಂದ ಆರಂಭಗೊಂಡು, ತಾಳಮದ್ದಲೆ, ಗಂಗಾಪೂಜೆ, ತೀರ್ಥ ಸ್ನಾನ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳು ಉತ್ಸವದ ಅಂಗವಾಗಿ ನಡೆಯಲಿದೆ. ದೇವರಿಗೆ ಹಣ್ಣುಕಾಯಿ ಸಮರ್ಪಣೆ, ಕುಂಕುಮಾರ್ಚನೆ, ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಕೆಗೆ ಅವಕಾಶವಿದೆ.
ಉತ್ಸವದ ಸಂದರ್ಭದಲ್ಲಿ ಸ್ಥಳೀಯ ಯುವ ಕಲಾವಿದ ನಾಗರಾಜ ಭಟ್ಟ ಕವಡಿಕೆರೆ ಅವರು ಕೌಡಮ್ಮ ದೇವಿಯ ರಂಗೋಲಿಯನ್ನು ರಚಿಸಿದ್ದು, ಆಕರ್ಷಕವಾಗಿ ಮೂಡಿ ಬಂದಿದೆ.







