ಅಡಕೆಗೆ ವ್ಯಾಪಿಸಿರುವ ಎಲೆಚುಕ್ಕೆ ರೋಗ ನಿವಾರಣೆಗೆ ಸಂಕಲ್ಪಿಸಿ ಧನ್ವಂತರಿ ಜಯಂತಿಯ ದಿನದಂದು ಧನ್ವಂತರಿ ಉತ್ಸವ ಯಲ್ಲಾಪುರ ತಾಲೂಕಿನ ಭಟ್ರಕೇರಿಯ ಭಾರದ್ವಾಜಾಶ್ರಮದಲ್ಲಿ ಅ.18 ರಂದು ನಡೆಯಲಿದೆ.
ಬೆಳಗ್ಗೆ 7 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಧನ್ವಂತರಿ ಹವನ, ಧನ್ವಂತರಿ ವ್ರತಪೂಜೆ, ಸಂಪೂರ್ಣ ಗೀತಾಪಾರಾಯಣಗಳು ನಡೆಯಲಿವೆ.
ಎಲೆಚುಕ್ಕಿ ರೋಗ ನಿವಾರಣೆಯ ಸಂಕಲ್ಪದೊಂದಿಗೆ ಅಕ್ಟೋಬರ್ 7 ರಿಂದ ಈಗಾಗಲೇ ಅನೇಕ ವೈದಿಕರು, ಗೃಹಸ್ಥರು, ಧನ್ವಂತರಿ ಜಪ ನಡೆಸುತ್ತಿದ್ದಾರೆ. ಅದರ ಹವನ ಅ.18 ರಂದು ನಡೆಯಲಿದೆ ಎಂದು ಭಾರದ್ವಾಜಾಶ್ರಮದ ಮುಖ್ಯಸ್ಥ ವಿದ್ವಾನ್ ಮಂಜುನಾಥ ಭಟ್ಟ ಭಟ್ರಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







