ಎಲ್ಲಾ ರೋಗಬಾಧೆಗಳು ನಿವಾರಣೆ ಹಾಗೂ ರಾಷ್ಟ್ರಕ್ಷೇಮದ ಸಂಕಲ್ಪದೊಂದಿಗೆ ಯಲ್ಲಾಪುರ ತಾಲೂಕಿನ ಭಟ್ರಕೇರಿಯ ಭಾರದ್ವಾಜಾಶ್ರಮದಲ್ಲಿ ಧನ್ವಂತರಿ ಜಯಂತಿ- ಧನ್ವಂತರಿ ಉತ್ಸವ ನೆರವೇರಿತು.
30 ವೈದಿಕರಿಂದ ಧನ್ವಂತರಿ ಹವನ ಹಾಗೂ 25 ಮಾತೆಯರಿಂದ ಸಂಪೂರ್ಣ ಭಗವದ್ಗೀತಾ ಪಾರಾಯಣಗಳು ನಡೆದವು. ಇದೇ ಸಂದರ್ಭದಲ್ಲಿ ಭೂಮಿಪೂಜೆ, ವೃಕ್ಷಪೂಜೆಯೊಂದಿಗೆ ನಕ್ಷತ್ರ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು.
ಧನ್ವಂತರಿ ಜಯಂತಿಯ ಮಹತ್ವವನ್ನು, ಆಚರಣೆಯ ವಿಧಾನವನ್ನು ವಿದ್ವಾನ್ ಮಹೇಶ ಭಟ್ಟ ಇಡಗುಂದಿ ತಿಳಿಸಿದರು. ಅವರು ರಚಿಸಿದ ಧನ್ವಂತರಿ ಅಷ್ಟಕವನ್ನಹ ಲೋಕಾರ್ಪಣೆಗೊಳಿಸಲಾಯಿತು.
ನಿವೃತ್ತ ಪಾಚಾರ್ಯರಾದ ಡಾ.ಕೋಮಲಾ ಭಟ್ಟ ಶಿರಸಿ ಇವರು ನಕ್ಷತ್ರ ವೃಕ್ಷಾರೋಪಣಕ್ಕೆ ಚಾಲನೆ ನೀಡಿ, ವೃಕ್ಷಾರೋಪಣದ ಮಹತ್ವ ತಿಳಿಸಿದರು.
ಭಾರಾದ್ವಾಜಾಶ್ರಮದ ಮುಖ್ಯಸ್ಥ ವಿದ್ವಾನ್ ಮಂಜುನಾಥ ಭಟ್ಟ ಅವರ ನೇತೃತ್ವದಲ್ಲಿ ನಡೆದ ಈ ಉತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.







