ಪ್ರಯಾಣಿಕನೊಬ್ಬ ಬಸ್ ನಲ್ಲೇ ಮೃತಪಟ್ಟ ಘಟನೆ ಯಲ್ಲಾಪುರದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ವಸಂತ ಬಾಳಪ್ಪ ಬಂಡಿವಡ್ಡರ್ (63) ಮೃತ ವ್ಯಕ್ತಿ. ಈತ ಬಸ್ ನಲ್ಲಿ ಮಂಗಳೂರಿನಿಂದ ಬೈಲಹೊಂಗಲಕ್ಕೆ ಹೋಗುತ್ತಿದ್ದ.
ಕುಡಿಯುವ ಚಟ ಹಾಗೂ ಫಿಟ್ಸ್ ಕಾಯಿಲೆ ಹೊಂದಿದ್ದ ಈತ ಬಸ್ ನಲ್ಲಿಯೇ ಮೃತಪಟ್ಟಿದ್ದು, ಯಲ್ಲಾಪುರಕ್ಕೆ ಬಂದ ಸಂದರ್ಭದಲ್ಲಿ ಮೃತಪಟ್ಟಿರುವುದು ಗೊತ್ತಾಗಿದೆ.
ಈ ಕುರಿತು ಮೃತನ ಪುತ್ರ ಬಾಳಪ್ಪ ಬಂಡಿವಡ್ಡರ್ ದೂರು ನೀಡಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







