ಯಲ್ಲಾಪುರ ತಾಲೂಕಿನ ಆನಗೋಡ ಗ್ರಾ ಪಂ ವ್ಯಾಪ್ತಿಯ ಬಿಸಗೋಡ ಭಾಗದಲ್ಲಿ ಕಾಡುಹಂದಿಗಳು ತೋಟಕ್ಕೆ ಹಾನಿ ಉಂಟು ಮಾಡಿವೆ.
ಬಿಸಗೋಡ ಸಮೀದ ಚಾವಡಿಯಲ್ಲಿ ವಿಘ್ನೇಶ್ವರ ಗಣಪತಿ ಭಟ್ಟ ಅವರಿಗೆ ಸೇರಿದ ಅಡಕೆ ತೋಟಕ್ಕೆ ಕಾಡುಹಂದಿ ನುಗ್ಗಿ ಅಡಕೆ, ಬಾಳೆ ಸಸಿಗಳನ್ನು ತಿಂದು ನಾಶ ಮಾಡಿವೆ.
ಕಾಡು ಪ್ರಾಣಿಗಳ ಉಪಟಳ ಹೆಚ್ಚಿದ್ದು,ಬೆಳೆ ಸಂರಕ್ಷಣೆ ಸವಾಲಾಗಿದೆ. ಅಡಿಕೆ, ಬಾಳೆ ಸಸಿಗಳ ಹಾನಿಗೆ ಅರಣ್ಯ ಇಲಾಖೆ ತಕ್ಷಣ ಪರಿಹಾರ ನೀಡಬೇಕೆಂದು ವಿಘ್ನೇಶ್ವರ ಭಟ್ಟ ಆಗ್ರಹಿಸಿದ್ದಾರೆ.







