ಯಲ್ಲಾಪುರ ತಾಲೂಕಿನ ಹೊಸಳ್ಳಿ ಹಾಗೂ ರವೀಂದ್ರನಗರದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಲ್ಲಿ ಪೊಲೀಸರು ಕಾಣುತ್ತಿದ್ದಂತೆ 8 ಜನ ಓಡಿ ಹೋಗಿದ್ದಾರೆ.
ಕಿರವತ್ತಿ ಸಮೀಪದ ಹೊಸಳ್ಳಿ ಜನತಾ ಕಾಲೋನಿ ರಸ್ತೆಯ ಪಕ್ಕ ವಿನೋದ ಚೌಹಾಣ, ಶಿವಾಜಿ ಕಾಂಬಳೆ, ಯಲ್ಲಪ್ಪ ಕಾಂಬಳೆ, ಮೌಲಾಲಿ ಮಹಮ್ಮದ್ ಸಾಬ ಸೈಯ್ಯದ್, ಶಿವರಾಜ ಕಿಲಾರಿ, ಬೀರು ಪಟಕಾರೆ ಜೂಜಾಟ ಆಡುತ್ತಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿದ್ದು, ಇವರಿಂದ 3360 ರೂ ನಗದು ಹಾಗೂ ಜೂಜಾಟದ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಆರೋಪಿಗಳಾದ ಶಿವರಾಜ ಮತ್ತು ಬೀರು ಓಡಿ ಹೋಗಿದ್ದಾರೆ.
ಯಲ್ಲಾಪುರ ಪಟ್ಟಣದ ರವೀಂದ್ರನಗರದ ಚೌಡೇಶ್ವರಿ ದೇವಸ್ಥಾನದ ಬಳಿ, ಸಂತೋಷ ಬೋವಿವಡ್ಡರ್, ಗಿರೀಶ ಬೋವಿವಡ್ಡರ್, ಲಕ್ಷ್ಮಣ ಮರಾಠಿ, ಗುರುರಾಜ ಬೋವಿವಡ್ಡರ್, ಪರಶುರಾಮ ಬೋವಿವಡ್ಡರ್, ಶಿವಪ್ಪ ಬೋವಿವಡ್ಡರ್, ಸಿದ್ದು ಗೌಳಿ, ಸಾಗರ ನಾಯ್ಕ, ಮುಟಿಗೆಪ್ಪ ಬೋವಿವಡ್ಡರ್ ಜೂಜಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಇವರಿಂದ 3220 ರೂ ಹಾಗೂ ಜೂಜಾಟದ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ. ಇವರಲ್ಲಿ ಗುರುರಾಜ, ಪರಶುರಾಮ, ಶಿವಪ್ಪ, ಸಿದ್ದು, ಸಾಗರ, ಮುಟಿಗೆಪ್ಪ ಓಡಿ ಹೋಗಿದ್ದಾರೆ.
ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.







