ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬಂದಿದ್ದು ವಿಮಾ ಕಂತು ಪಾವತಿಸಲು ಜು 31 ಕೊನೆ ದಿನ.
ಜಿಲ್ಲೆಯಲ್ಲಿ ಅಡಿಕೆ, ಮಾವು, ಶುಂಠಿ ಮತ್ತು ಕರಿಮೆಣಸು ಬೆಳೆಗಳಿಗೆ ಬೆಳೆ ವಿಮಾ ಸೌಲಭ್ಯವಿದೆ. ವಿಮಾ ಚಂದಾದಾರರಾಗಲು ರೈತರು ಎಫ್ಐಡಿ ಹೊಂದಿರುವುದು ಕಡ್ಡಾಯ. ನಿಗದಿತ ಅರ್ಜಿ ನಮೂನೆ, ಬ್ಯಾಂಕ್ ಪಾಸ್ ಪುಸ್ತಕದ ಯಥಾ ಪ್ರತಿ, ಬೆಳೆ ನಮೂದಿರುವ ಪಹಣಿ ಪತ್ರಿಕೆ, ಸ್ವಯಂ ದೃಢೀಕರಣ, ನಾಮಿನಿ ವಿವರ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂಬoಧಿತ ಬ್ಯಾಂಕ್’ಗೆ ತೆರಳಿ ವಿಮಾ ಕಂತು ಪಾವತಿಸಬಹುದು.
ಪ್ರತಿ ಎಕರೆಗೆ ಅಡಿಕೆಗೆ ವಿಮಾ ಮೊತ್ತ 51,200 ರೂ ಆಗಿದ್ದು, ರೈತರು ಪಾವತಿಸಬೇಕಾದ ವಿಮಾ ಮೊತ್ತ 2,590ರೂ. ಕರಿಮೆಣಸು ವಿಮಾ ಮೊತ್ತ 18,800 ರೂ ಆಗಿದ್ದು, ರೈತರು ಪಾವತಿಸಬೇಕಾದ ವಿಮಾ ಮೊತ್ತ 951ರೂ. ಶುಂಠಿ ವಿಮಾ ಮೊತ್ತ 52,000 ರೂ ಆಗಿದ್ದು, ಪಾವತಿಸಬೇಕಾದ ವಿಮಾ ಮೊತ್ತ 2,630ರೂ, ಮಾವು ವಿಮಾ ಮೊತ್ತ 32,000 ರೂ ಆಗಿದ್ದು, ಪಾವತಿಸಬೇಕಾದ ಮೊತ್ತ 1,618 ರೂಪಾಯಿಗಳಾಗಿದೆ. ಮಾಹಿತಿಗೆ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಿ.





Discussion about this post