ಯಲ್ಲಾಪುರ: ಬಾಳೆಹದ್ದದ ಶ್ರೀಧರ ರಾಮಾ ಮೋಗೇರ್ (46) ನಿಗೂಢವಾಗಿ ಕಣ್ಮರೆಯಾಗಿದ್ದಾರೆ.
ಚವತ್ತಿ ಬಳಿಯ ಬಾಳೆಹದ್ದದ ಶ್ರೀಧರ ಮೋಗೇರ ಹಾಗೂ ಅವರ ಪತ್ನಿ ಸೌಭಾಗ್ಯ ಅವರಿಗೆ ಕೂಲಿ ಮಾಡಿ ಬದುಕು ಕಂಡಿಕೊoಡಿದ್ದರು. ಜುಲೈ 8ರಂದು ಸಂಜೆಯವರೆಗೂ ಮನೆಯಲ್ಲಿಯೇ ಇದ್ದ ಶ್ರೀಧರ ಮೊಗೆರ್ 6 ಗಂಟೆಯ ನಂತರ ಯಾರಿಗೂ ಕಾಣಿಸಿಕೊಂಡಿಲ್ಲ. ಅಕ್ಕಪಕ್ಕದವರು ಹಾಗೂ ಸಂಬoಧಿಕರ ಮನೆಗೆ ಸೌಭಾಗ್ಯ ಅವರು ಫೋನ್ ಮಾಡಿ ವಿಚಾರಿಸಿದರೂ ಪತಿಯ ಪತ್ತೆಯಾಗಿಲ್ಲ. ಎರಡು ದಿನಗಳ ಕಾಲ ಎಲ್ಲಡೆ ಹುಡುಕಾಟ ನಡೆಸಿದ ಆತನ ಸಂಬoಧಿಕರು ಈವರೆಗೂ ಆತ ಪತ್ತೆಯಾಗದ ಕಾರಣ ಪೊಲೀಸರ ಮೊರೆ ಹೋಗಿದ್ದಾರೆ.




Discussion about this post