ಸೋಮವಾರ ಸಂಜೆಯಿoದ ಮಂಗಳವಾರ ಸಂಜೆಯವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿನ 22 ಮನೆಗಳಿಗೆ ಮಳೆ ಹಾನಿಯಾಗಿದೆ. 4 ಮನೆಗಳು ಸಂಪೂರ್ಣ ನೆಲಸಮವಾಗಿದ್ದು, 18 ಮನೆಗಳ ಬಹುತೇಕ ಭಾಗ ಕಳಚಿ ಬಿದ್ದಿದೆ. ಕಾರವಾರದಲ್ಲಿ ಒಬ್ಬರು ಹಾಗೂ ಅಂಕೋಲಾದಲ್ಲಿ 7 ಜನ ಮಳೆ ಕಾರಣದಿಂದ ಸಾವನಪ್ಪಿದ್ದಾರೆ. ಅಂಕೋಲಾ ಗುಡ್ಡ ಕುಸಿತಕ್ಕೆ ಸಂಬoಧಿಸಿ ಸಾವಿನ ಪ್ರಕರಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ. ಅಂಕೋಲಾದ ಶಿರೂರಿನಲ್ಲಿ ವಿಪತ್ತು ನಿರ್ವಹಣೆಯ ಎರಡು ತಂಡದವರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಜಿಲ್ಲೆಯ ಅನೇಕ ಕಡೆ ರಸ್ತೆಯ ಮೇಲೆ ಗುಡ್ಡ ಕುಸಿತ ಉಂಟಾಗಿದೆ.
ಶಿರೂರು ಗ್ರಾಮದಲ್ಲಿ ಸಂಭವಿಸಿರುವ ಭೂ ಕುಸಿತದಲ್ಲಿ ಎರಡು ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಯಲ್ಲಿ ಉರುಳಿದೆ. ಟ್ಯಾಂಕಿನಿoದ ಗ್ಯಾಸ್ ಸೋರಿಕೆಯ ಮಾಹಿತಿ ಲಭಿಸಿದೆ. ಪರಿಣಿತರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಉತ್ತರ ಕನ್ನಡ ಜಿಲ್ಲಾಡಳಿತ ಈವರೆಗೆ 26 ಕಾಳಜಿ ಕೇಂದ್ರ ತೆರೆದಿದ್ದು, ಅದರಲ್ಲಿ 2368 ನೆರೆ ಸಂತ್ರಸ್ತರಿಗೆ ಆಶ್ರಯ ನೀಡಿದೆ. ಮಂಗಳವಾರ ಸಂಜೆಯ ವೇಳೆಗೆ ಕಾರವಾರ ತಾಲೂಕಿನಲ್ಲಿ 6, ಕುಮಟಾ ತಾಲೂಕಿನಲ್ಲಿ 6 ಮತ್ತು ಹೊನ್ನಾವರ ತಾಲೂಕಿನಲ್ಲಿ 14 ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಇವರೆಲ್ಲರಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾದೆ.





Discussion about this post