ವರ್ಷದಿಂದ ವರ್ಷಕ್ಕೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಆದರೆ, ಸರ್ಕಾರ ಮಾತ್ರ ಸಂತ್ರಸ್ತರಿಗೆ ನೀಡುವ ಪರಿಹಾರದ ಮೊತ್ತವನ್ನು ಕಡಿಮೆ ಮಾಡಿದೆ.
ಈ ಹಿಂದೆ ಮಳೆಯಿಂದ ಪೂರ್ತಿ ಮನೆಗೆ ಹಾನಿ ಆಗಿದ್ದರೆ ಸರ್ಕಾರ 5 ಲಕ್ಷ ರೂ ಪರಿಹಾರ ವಿತರಿಸುತ್ತಿತ್ತು. ಆದರೆ, ಈ ಮೊತ್ತವನ್ನು ಇದೀಗ ಒಂದುವರೆ ಲಕ್ಷಕ್ಕೆ ಸೀಮಿತಗೊಳಿಸಿದೆ. ಮಳೆಗಾಲದಲ್ಲಿ ಮನೆಯ ಒಳಗಡೆ ನೀರು ನುಗ್ಗಿದರೆ ಹಿಂದೆ 10 ಸಾವಿರ ರೂ ತಾತ್ಕಾಲಿಕ ಪರಿಹಾರ ನೀಡಲಾಗುತ್ತಿತ್ತು. ಆದರೆ, ಇದೀಗ ಆ ಮೊತ್ತವನ್ನು ಸಹ 5 ಸಾವಿರಕ್ಕೆ ಇಳಿಸಲಾಗಿದೆ. ಸರ್ಕಾರ ನೀಡುವ 1.5 ಲಕ್ಷದಲ್ಲಿ ಹೊಸ ಮನೆ ನಿರ್ಮಿಸಿಕೊಳ್ಳಲು ಅಸಾಧ್ಯ. ಈ ಹಣ ಬಾಡಿಗೆ ಮನೆಗೂ ಸಾಲುವುದಿಲ್ಲ ಎಂಬುದು ಸಂತ್ರಸ್ತರ ಗೋಳು.
`ಬಿಜೆಪಿ ಸರ್ಕಾರ ನೀಡುತ್ತಿದ್ದ ಪರಿಹಾರ ಹಣಕ್ಕಿಂತಲೂ ಕಡಿಮೆ ಹಣವನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಪೂರ್ಣ ಪ್ರಮಾಣದಲ್ಲಿ ಮನೆ ಹಾನಿ ಆದವರಿಗೆ 5 ಲಕ್ಷ ರೂ ಆದರೂ ಕೊಡಬೇಕು’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.





Discussion about this post