6
  • Latest
ತರಕಾರಿ ಬೆಳೆದು ಯಶಸ್ವಿಯಾದ ಯಕ್ಷ ಕಲಾವಿದ

ತರಕಾರಿ ಬೆಳೆದು ಯಶಸ್ವಿಯಾದ ಯಕ್ಷ ಕಲಾವಿದ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ತರಕಾರಿ ಬೆಳೆದು ಯಶಸ್ವಿಯಾದ ಯಕ್ಷ ಕಲಾವಿದ

AchyutKumar by AchyutKumar
in ಲೇಖನ
ತರಕಾರಿ ಬೆಳೆದು ಯಶಸ್ವಿಯಾದ ಯಕ್ಷ ಕಲಾವಿದ

ಕಾರವಾರದ ನಾರಗೇರಿಯಲ್ಲಿರುವ ಯಕ್ಷಗಾನ ಕಲಾವಿದ ಮಾಣೇಶ್ವರ ಗಣಪು ಗೌಡರು ತುಂಡು ಭೂಮಿಯಲ್ಲಿಯೇ ವರ್ಷವಿಡಿ ಭರಪೂರ ಬೆಳೆ ತೆಗೆಯುತ್ತಿದ್ದಾರೆ.
ಗೌಡರ ಮನೆಯಂಗಳದಲ್ಲಿ ಬಗೆ ಬಗೆಯ ತರಕಾರಿ ಗಮನ ಸೆಳೆಯುತ್ತದೆ. ಇದೇ ತರಕಾರಿ ಬೆಳೆ ಗೌಡರ ಬದುಕನ್ನು ಹಸನಾಗಿಸಿದೆ. 20ಗುಂಟೆ ಕೃಷಿಭೂಮಿಯಲ್ಲಿ ಹಲವಾರು ಬಗೆಯ ತರಕಾರಿಗಳನ್ನು ಅವರು ಬೆಳೆದಿದ್ದು, ಎಕರೆಗಟ್ಟಲೆ ಭೂಮಿ ಇದ್ದರೂ ಬಂಜರು ಬಿಡುವ ಕೃಷಿಕರಿಗೆ ಮಾಣೇಶ್ವರ ಗಣಪು ಗೌಡ ಕೃಷಿ ಯೋಗಿಯಂತೆ ಕಾಣುತ್ತಾರೆ. ಇದೇ ಕೃಷಿಭೂಮಿಯನ್ನು ರಂಗಭೂಮಿಯನ್ನಾಗಿಸಿ ಯುವಕರಿಗೆ ಯಕ್ಷಗಾನ ತರಬೇತಿ ನೀಡುವದು ಅವರ ವಿಶೇಷತೆ. ಇನ್ನು ಮಳೆಗಾಲದ ಆರಂಭದಲ್ಲಿ ಹೀರೇಕಾಯಿ, ಬೆಂಡೆಕಾಯಿ, ಪಡವಲಕಾಯಿ, ಸೌತೆಕಾಯಿ, ಮೂಲಂಗಿ ಮೊದಲಾದ ಬೆಳೆ ತೆಗೆಯುತ್ತಾರೆ. ಹೀಗೆ ಬೆಳೆದ ತರಕಾರಿಗಳನ್ನು ನಗರಕ್ಕೆ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಇವರು ಬೆಳೆದ ತರಕಾರಿಗಳಿಗೆ ಬಹು ಬೇಡಿಕೆ ಇರುವದರಿಂದ ಮಾರುಕಟ್ಟೆಗೆ ಬರುವ ಮುನ್ನ ದಾರಿಯಲ್ಲಿಯೇ ವ್ಯಾಪಾರ ನಡೆದ ಉದಾಹರಣೆಗಳಿವೆ.
ಜನವರಿ ತಿಂಗಳಿನಲ್ಲಿ ತೆರಳಿದರೆ ಬದನೆಕಾಯಿ, ಹಸಿ ಮೆಣಸು, ಕೆಂಪು ಹರಿವೆ ಸೊಪ್ಪು, ಹಸಿರು ಹರಿವೆ ಸೊಪ್ಪು, ಹಗಲಕಾಯಿಯಂತಹ ಪಸಲು ಕಾಣಸಿಗುತ್ತದೆ. ಇವುಗಳಿಗೆ ಕೂಡ ಬಾರೀ ಬೇಡಿಕೆ ಇರುವದರಿಂದ ಕೃಷಿ ಕಾಯಕಿಯ ಜೀವನ ನಡೆಯುತ್ತಿದೆ. ಈವರೆಗೆ ಗೌಡರು ರಾಸಾಯನಿಕ ಬಳಸಿ ಕೃಷಿ ಮಾಡಿಲ್ಲ. ದನದ ಸಗಣಿ ಹಾಗೂ ತರಗೆಲೆಗಳ ಗೊಬ್ಬರವನ್ನು ಸಸಿಗಳಿಗೆ ಉಣಿಸುತ್ತಾರೆ. ರಾಸಾಯನಿಕ ಕೀಟನಾಶಕಗಳನ್ನು ಬಳಸದಿರುವದೇ ತಮ್ಮ ಯಶಸ್ಸಿನ ಗುಟ್ಟು ಎಂದು ಅವರು ಸತ್ಯ ಬಿಚ್ಚಿಡುತ್ತಾರೆ. ಕಳೆದ 35 ವರ್ಷಗಳಿಂದ ಇದೇ ಕಸುಬನ್ನಾಗಿಸಿಕೊಂಡಿರುವ ಗೌಡರಿಗೆ ಎಂದಿಗೂ ಆತಂಕ ಎದುರಾಗಿಲ್ಲ. ಕೃಷಿ ಆದಾಯದಿಂದಲೇ ಮನೆ ನಿರ್ಮಿಸಿಕೊಂಡಿದ್ದಾರೆ. ಸಂಸಾರ ನಿಭಾಯಿಸುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ ಕೃಷಿ ತೋಟ ಕಣ್ಣಾಡಿಸದಿದ್ದರೆ ಅವರಿಗೆ ನೆಮ್ಮದಿಯಿಲ್ಲ. ಎಲ್ಲಾ ಕೆಲಸಗಳನ್ನು ಒಬ್ಬರೇ ನಿಭಾಯಿಸುವ ಗೌಡರು ಆಳುಗಳನ್ನು ಇಟ್ಟುಕೊಂಡಿಲ್ಲ.

ADVERTISEMENT
Advertisement. Scroll to continue reading.
Advertisement. Scroll to continue reading.
Previous Post

ಸಿಗಂದೂರು ಚೌಡೇಶ್ವರಿ ಅಮ್ಮನ ಮಹಿಮೆ ಅಪಾರ..

Next Post

ರೆಡ್ ಅಲರ್ಟ: ಡಿಪ್ಲೋಮಾ ಕಾಲೇಜಿಗೂ ‘ಮಳೆ ರಜೆ’

Next Post

ರೆಡ್ ಅಲರ್ಟ: ಡಿಪ್ಲೋಮಾ ಕಾಲೇಜಿಗೂ 'ಮಳೆ ರಜೆ'

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ