ಯಲ್ಲಾಪುರ: 87 ವರ್ಷಗಳ ಕಾಲ ಆರೋಗ್ಯವಾಗಿ ಬದುಕಿದ್ದ ಮಾಗೋಡಿನ ಕೇಶವ ಗೋಪಾಲಕೃಷ್ಣ ಭಾಗ್ವತರು ಪಕ್ಕದಮನೆಯವರ ತೋಟಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾಗೋಡಿನ ಹೊಳೆಮಡುವಿನಲ್ಲಿ ವಾಸವಾಗಿದ್ದ ಕೇಶವ ಭಾಗ್ವತರು ಸದಾ ಲವಲವಿಕೆಯಿಂದ ಇರುತ್ತಿದ್ದರು. ಆದರೆ, ಕೆಲ ದಿನಗಳ ಹಿಂದೆ ತೀರಾ ಮಂಕಾಗಿದ್ದ ಅವರು ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಹೆಚ್ಚಿಗೆ ಮಾತೂ ಆಡುತ್ತಿರಲಿಲ್ಲ. ಯಾವ ವಿಷಯವನ್ನು ಸಹ ಕುಟುಂಬದವರಲ್ಲಿ ಹಂಚಿಕೊಳ್ಳುತ್ತಿರಲಿಲ್ಲ.
ಮಾನಸಿಕವಾಗಿ ಕುಗ್ಗಿದ್ದ ಅವರು ಜುಲೈ 17ರಂದು ಬೆಳಗ್ಗೆ ದೇವರಗುಡ್ಡದ ಹುಂಕಿಮನೆ ಗೋಪಾಲ ಭಟ್ಟರ ತೋಟಕ್ಕೆ ತೆರಳಿದ್ದು, ಅಲ್ಲಿಯೇ ಇದ್ದ ಮರವೊಂದಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾರೆ. ಮಧ್ಯಾಹ್ನ 12 ಗಂಟೆ ವೇಳೆಗೆ ಅವರ ಪುತ್ರ ಗಣಪತಿ ಭಾಗ್ವತ್ ತೋಟಕ್ಕೆ ಹೋದಾಗ ಅವರು ಸಾವನಪ್ಪಿರುವುದು ಗೊತ್ತಾಗಿದೆ. ಈ ಬಗ್ಗೆ ಗಣಪತಿ ಭಾಗ್ವತ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಳಿವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾದ ಕೇಶವ ಭಾಗ್ವತರ ಸಾವಿನ ಕಾರಣ ರಹಸ್ಯವಾಗಿಯೇ ಉಳಿದಿದೆ.





Discussion about this post