ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪ ಪರಿಸ್ಥಿತಿ ಅವಲೋಕನಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪಕ್ಷದ ಮುಖಂಡರು, ಜನಪ್ರತಿನಿಧಿ ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿದ್ದು `ಸಂತ್ರಸ್ತರ ನೋವಿಗೆ ಸ್ಪಂದಿಸಿ’ ಎಂದು ಕರೆ ನೀಡಿದ್ದಾರೆ.
ಭಾನುವಾರ ನೇರವಾಗಿ ಶಿರೂರು ಗುಡ್ಡ ಪ್ರದೇಶಕ್ಕೆ ತೆರಳಿ ಅಲ್ಲಿನ ಆಗು-ಹೋಗುಗಳನ್ನು ಕಣ್ಣಾರೆ ಕಂಡರು. ಉಳುವರೆ ಗ್ರಾಮಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಿದರು. ಅಲ್ಲಿಯೇ ಇದ್ದ ದಿನಕರ ಶೆಟ್ಟಿ ಹಾಗೂ ರೂಪಾಲಿ ನಾಯ್ಕ ಅವರಿಗೂ `ಜನರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ. ತಮ್ಮ ಕೈಯಾದ ಮಟ್ಟಿಗೆ ಅವರಿಗೆ ನೆರವು ನೀಡಿ’ ಎಂದು ಸೂಚಿಸಿದರು.
ಇದಾದ ನಂತರ ಯಲ್ಲಾಪುರಕ್ಕೆ ಆಗಮಿಸಿ ಅಲ್ಲಿಯೂ ಕಾರ್ಯಕರ್ತರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು. `ಕಷ್ಟದಲ್ಲಿದ್ದವರು ಯಾರೇ ಕಂಡರೂ ಅವರಿಗೆ ನೆರವು ನೀಡಲು ಬಿಜೆಪಿಗರು ಬದ್ಧವಾಗಿರಬೇಕು’ ಎಂದು ಕರೆ ನೀಡಿದರು. ಸ್ಥಳೀಯ ಸಮಸ್ಯೆಗಳ ಬಗ್ಗೆ ಮುಂಡಗೋಡದ ಮಂಜುನಾಥ ಪಾಟೀಲ, ಎಲ್ ಟಿ ಪಾಟೀಲ, ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ಮಂಗೇಶ ದೇಶಪಾಂಡೆ, ಉಮೇಶ ಭಾಗ್ವತ ಇತರರು ಮಾಹಿತಿ ನೀಡಿದರು. `ಇಲ್ಲಿನ ಕಾರ್ಯಕರ್ತರು ಅನುಭವಿಸುತ್ತಿರುವ ನೋವಿಗೆ ಕಾಲವೇ ಉತ್ತರ ಕೊಡುತ್ತದೆ’ ಎಂದು ವಿಜಯೇಂದ್ರ ಹೇಳಿದರು.
ಪ್ರಮುಖರಾದ ಪ್ರಸಾದ ಹೆಗಡೆ, ರವಿ ದೇವಾಡಿಗ, ಗಣಪತಿ ಬೋಳಗುಡ್ಡೆ, ಶ್ಯಾಮಲಿ ಪಾಠಣಕರ್, ಸೋಮು ನಾಯಕ, ಪ್ರದೀಪ ಯಲ್ಲಾಪುರ ಇತರರು ಪಕ್ಷ ಸಂಘಟನೆಯಲ್ಲಿ ತೊಡಗಿರುವುದನ್ನು ಗಮನಿಸಿ ಮೆಚ್ಚುಗೆವ್ಯಕ್ತಪಡಿಸಿದರು.




Discussion about this post