ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಸೈಕಲ್ ಮೂಲಕ ದೇಶ ತಿರುಗುತ್ತಿರುವ ಮದ್ಯಪ್ರದೇಶದ ಪ್ರಶಾಂತ ಶರ್ಮ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದ್ದಾರೆ.
ಮಾರ್ಚ 8ರಂದು ದೆಹಲಿಯಿಂದ ಸೈಕಲ್ ಜಾಥಾ ಶುರು ಮಾಡಿದ ಅವರು ಪ್ರಸ್ತುತ ಕುಮಟಾದಲ್ಲಿ ಸಂಚಾರ ಶುರು ಮಾಡಿದ್ದಾರೆ. ರಾಜಸ್ಥಾನ, ಮದ್ಯ ಪ್ರದೇಶ, ಮಹಾರಾಷ್ಟç, ಗೋವಾ ನಂತರ ಇದೀಗ ಕಾರವಾರ ಅಂಕೋಲಾ ಮುಗಿಸಿ ಕುಮಟಾಗೆ ತೆರಳಿದ್ದಾರೆ.
ಮುಂದೆ ಮುರುಡೇಶ್ವರ, ಮಂಗಳೂರು, ಮೈಸೂರು, ತಮಿಳನಾಡು, ಕೇರಳ ತಲುಪಿ ಬಿಟ್ಟು ಹೋದ ಸ್ಥಳಗಳ ಮೂಲಕ ಮತ್ತೆ ದೆಹಲಿ ತಲುಪುವ ಗುರಿ ಅವರದ್ದಾಗಿದೆ. ಪ್ರತಿ ದಿನ 150 ಕಿಮೀ ಸೈಕಲ್ ತುಳಿಯುವ ಪ್ರಶಾಂತ ಮಿಶ್ರಾ ಅವರ ಪತ್ರಕರ್ತರಾಗಿದ್ದರು. ಶೈಕ್ಷಣಿಕ ಹಿನ್ನಡೆ ಅರಿತ ಅವರು ಜನ ಜಾಗೃತಿಗಾಗಿ ಸೈಕಲ್ ಸಂಕಲ್ಪ ಮಾಡಿದರು. ಮಳೆ ಕಾರಣದಿಂದ ಇದೀಗ ಬಹುದೂರ ಸಾಗಾಟ ಕಷ್ಟ. ಅದಾಗಿಯೂ ಅವರು ಜನ ಜಾಗೃತಿ ಕೆಲಸ ಬಿಟ್ಟಿಲ್ಲ.
ಪತ್ರಕರ್ತ ಪ್ರಶಾಂತ ಮಿಶ್ರಾ ಅವರ ಮಾತು ಇಲ್ಲಿ ಕೇಳಿ…





Discussion about this post