ಕೆರವಡಿ ಹಾಗೂ ದೇವಳಮಕ್ಕಿಯ ಯುವ ಜನ ಗದ್ದೆಗೆ ಇಳಿದು ಪರಸ್ಪರ ಕೆಸರು ಎರೆಚಿಕೊಂಡರು. ಅವರು ಯಾವುದೋ ದ್ವೇಷಕ್ಕಾಗಿ ಕೆಸರಾಟ ನಡೆಸಿದ್ದಲ್ಲ, ಪರಸ್ಪರ ಪ್ರೀತಿ-ವಿಶ್ವಾಸಕ್ಕಾಗಿ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಿ ಉತ್ಸಾಹದಿಂದ ಭಾಗವಹಿಸಿದ್ದರು.
ಕಳೆದ ಮೂರು ವರ್ಷಗಳಿಂದ ಕಾರವಾರದ ದೇವಳಮಕ್ಕಿಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಯುತ್ತಿದೆ. ಗ್ರಾಮೀಣ ಕ್ರೀಡೆ ಉಳಿಸಿ ಬೆಳಸುವ ಉದ್ದೇಶದಿಂದ ನಡೆಯುವ ಈ ಕ್ರೀಡೆಯಲ್ಲಿ ನೂರಾರು ಜನ ಭಾಗವಹಿಸುತ್ತಾರೆ. ಓಟ, ಲಿಂಬು ಚಮಚ, ನಡಿಗೆ, ವಾಲಿಬಾಲ್, ಹಗ್ಗಜಗ್ಗಾಟ ಮೊದಲಾದ ಸ್ಫರ್ಧೆಗಳು ಇಲ್ಲಿ ನಡೆದವು. ಮಕ್ಕಳು, ವಯಸ್ಕರು ಸೇರಿ ಎಲ್ಲರೂ ಕೆಸರುಗದ್ದೆಯಲ್ಲಿ ಬಿದ್ದು ಹೊರಳಾಡಿ ಸಡಗರ ವ್ಯಕ್ತಪಡಿಸಿದರು.
ಕೆಸರುಗದ್ದೆ ಕ್ರೀಡಾಕೂಟದ ವಿಡಿಯೋ ಇಲ್ಲಿ ನೋಡಿ..





Discussion about this post