ಯಲ್ಲಾಪುರ: ಕುಂದೂರಿನ ರಾಮಚಂದ್ರ ನಾರಾಯಣ ಜೋಶಿ ಅವರ ಮನೆ ಎದುರಿಗಿದ್ದ ಸೇತುವೆಯ ಅಡಿ ಭಾಗದ ಮಣ್ಣು ನೀರು ಪಾಲಾಗಿದೆ.
ಇದರಿಂದ ಸೇತುವೆ ಸಹ ಕುಸಿಯುವ ಆತಂಕ ಎದುರಾಗಿದೆ. ಸೇತುವೆಯ ಒಂದು ಭಾಗದ ಪಿಚ್ಚಿಂಗ್ ಸಹ ನೆಲಕಚ್ಚಿದೆ. ಈ ಪುಟ್ಟ ಸೇತುವೆ ಮದ್ಲುಗಾರ್, ನಂದಗಾರ್, ಕುಂದೂರು ಗ್ರಾಮದ ಸಂಪರ್ಕ ಸೇತು ಆಗಿತ್ತು. ಸೇತುವೆ ಕುಸಿಯುವ ಆತಂಕದ ಹಿನ್ನಲೆ ಆ ಭಾಗದ ಜನ ಕಂಗಾಲಾಗಿದ್ದಾರೆ.
ಈ ಬಗ್ಗೆ ಈಗಲೇ ಕಾಳಜಿವಹಿಸದೇ ಇದ್ದಲ್ಲಿ ಪೂರ್ತಿ ಸೇತುವೆ ಕೊಚ್ಚಿಹೋಗುವ ಸಾಧ್ಯತೆಗಳಿವೆ ಎಂದು ಹಾಸಣಗಿ ಗ್ರಾಮ ಪಂಚಾಯಿತಿ ಸದಸ್ಯ ಎಂ ಕೆ ಭಟ್ ಎಚ್ಚರಿಸಿದ್ದಾರೆ.
ಸೇತುವೆ ಅಪಾಯದ ಬಗ್ಗೆ ವಿಕಾಸ ನಾಯ್ಕ ಅವರು ನೀಡಿದ ಪ್ರತ್ಯಕ್ಷ ವರದಿಯ ವಿಡಿಯೋ ಇಲ್ಲಿ ನೋಡಿ..





Discussion about this post