ದೆಹಲಿ ಅಧೀವೇಶನದಲ್ಲಿ ಭಾಗವಹಿಸಿರುವ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪಶ್ಚಿಮಘಟ್ಟ ಸಂರಕ್ಷಣೆಯ ಬಗ್ಗೆ ಮಾತನಾಡಿದ್ದು, ಈ ವೇಳೆ ಅಂಕೋಲಾದ ಶಿರೂರಿನಲ್ಲಿ ಆಡ ಗುಡ್ಡ ಕುಸಿತದ ಕುರಿತು ಪ್ರಸ್ತಾಪಿಸಿದರು.
ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯ ಅಧ್ಯಯನ ಅಗತ್ಯ ಎಂದು ಅವರು ಪ್ರತಿಪಾದಿಸಿದರು. ಈ ಭಾಗದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳುವಾಗ ವೈಜ್ಞಾನಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ಅವರು ಒತ್ತಾಯಿಸಿದರು. ದುರಂತದಲ್ಲಿ ಸಾವನಪ್ಪಿದವರಿಗೆ ಹಾಗೂ ತೊಂದರೆಗೆ ಒಳಗಾದವರಿಗೆ ವಿಶೇಷ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
`ವೈಜ್ಞಾನಿಕ ವರದಿ ಆಧರಿಸಿ ಅಭಿವೃದ್ಧಿ ಕೆಲಸ ನಡೆಯಬೇಕು. ಎನ್ ಎಚ್ ಐನ’ವರು ಮಾಡುತ್ತಿರುವ ರಸ್ತೆ ಕೆಲಸ ಅವೈಜ್ಞಾನಿಕವಾಗಿರುವುದು ಹಾಗೂ ವಿಪರೀತ ಮಳೆಯಿಂದ ಈ ದುರಂತವಾಗಿದೆ’ ಎಂದು ಅಧಿವೇಶನಕ್ಕೆ ತಿಳಿಸಿದರು. ಇನ್ನೊಂದು ಎನ್ ಡಿ ಆರ್ ಎಫ್ ತಂಡ ಸ್ಥಳಕ್ಕೆ ಅಗತ್ಯ ಎಂದು ಒತ್ತಾಯಿಸಿದರು.
ಸಂಸತ್ ಅಧಿವೇಶನದಲ್ಲಿ ಸಂಸದ ಕಾಗೇರಿ ಮಾತನಾಡಿದ ವಿಡಿಯೋ ಇಲ್ಲಿ ನೋಡಿ..





Discussion about this post