ಕುಮಟಾ: ಹಿಂದಿನ ಸರ್ಕಾರ ಸ್ಥಗಿತಗೊಳಿಸಿದ ಅಂತ್ಯ ಸಂಸ್ಕಾರ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ.
ಈ ಬಗ್ಗೆ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಸಂಘಟನೆ ಸದಸ್ಯರು ಮನವಿ ಸಲ್ಲಿಸಿದರು. `59 ವರ್ಷದ ಒಳಗಿನ ವ್ಯಕ್ತಿ ಸಾವನಪ್ಪಿದರೆ ಸರ್ಕಾರ 20000 ರೂ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ನೀಡುತ್ತದೆ. ಅದೇ 60 ವರ್ಷದ ವ್ಯಕ್ತಿ ಸಾವನಪ್ಪಿದರೆ ಈ ಹಣ ಸಿಗುವದಿಲ್ಲ. ಹೀಗಾಗಿ ಹಿಂದಿನ ಅಂತ್ಯ ಸಂಸ್ಕಾರ ಯೋಜನೆ ಪುನರ್ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಮನವಿ ಸಲ್ಲಿಕೆಯಲ್ಲಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್, ಸಾಮಾಜಿಕ ಕಾರ್ಯಕರ್ತ್ ಸುಧಾಕರ್ ನಾಯ್ಕ, ಪ್ರಕಾಶ್ ಪಟಗಾರ, ರಾಮ ಕಾರ್ವಿ ಇದ್ದರು.






Discussion about this post