ಶಿರೂರು ಗುಡ್ಡ ಕುಸಿತದ ಕಾರಣ ಉಲ್ಲೇಖಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅಗಸ್ಟ 2ರಂದು ಆದೇಶವೊಂದನ್ನು ಹೊರಡಿಸಿದ್ದು, 2015ರ ನಂತರ ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಿದ ಎಲ್ಲಾ ತೋಟ, ರೆಸಾರ್ಟ, ಬಡಾವಣೆಗಳನ್ನು ತೆರವು ಮಾಡುವಂತೆ ಸೂಚಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯನ್ನು ಸೇರಿ ರಾಜ್ಯದ 9 ಜಿಲ್ಲೆಗಳ ಹೆಸರು ಉಲ್ಲೇಖಿಸಿ ಈ ಆದೇಶ ಹೊರಡಿಸಿದ್ದಾರೆ. `ಶಿರೂರು ಹಾಗೂ ಕೇರಳದಲ್ಲಿ ನಡೆದ ಅವಘಡ ಎಚ್ಚರಿಕೆಯ ಗಂಟೆಯಾಗಿದ್ದು, ಸ್ವಾಭಾವಿಕ ಹಾಗೂ ಪ್ರಕೃತಿದತ್ತವಾದ ಪಶ್ಚಿಮಘಟ್ಟದ ಗುಡ್ಡಗಳನ್ನು ಕಡಿದಿರುವುದೇ ಈ ಅವಾಂತರಗಳಿಗೆ ಕಾರಣ. ಅರಣ್ಯಗಳನ್ನು ನಾಶಮಾಡಿ ಮನೆ, ರೆಸಾರ್ಟ, ತೋಟ ಮಾಡುತ್ತಿರುವ ಪರಿಣಾಮ ಬೇರಿನಿಂದ ಗಟ್ಟಿಯಾಗಿ ಹಿಡಿದಿದ್ದ ಮಣ್ಣು ಸಡಿಲಗೊಂಡಿದ್ದು, ಬೃಹತ್ ಮರಗಳ ಕಡಿತಲೆ, ಅವೈಜ್ಞಾನಿಕ ಗುಡ್ಡ ಕತ್ತರಿಸುವಿಕೆಯಿಂದ ದುರಂತ ಮರುಕಳಿಸುತ್ತಿದೆ’ ಎಂದು ತಜ್ಞರು ನೀಡಿರುವ ವರದಿಯನ್ನು ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
2015ರ ನಂತರ ಪಶ್ಚಿಮಘಟ್ಟದಲ್ಲಿ ನಡೆದ ಎಲ್ಲಾ ಅರಣ್ಯ ಒತ್ತುವರಿಯನ್ನು ಇನ್ನೂ 1 ತಿಂಗಳ ಒಳಗಾಗಿ ತೆರವು ಮಾಡಿ, ವರದಿ ಸಲ್ಲಿಸುವಂತೆ ಅವರು ಅರಣ್ಯ ಜೀವಶಾಸ್ತ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.






Discussion about this post