ಹೊನ್ನಾವರ: ಮೀನುಗಾರಿಕೆ ನಡೆಸಲು ಹೊನ್ನಾವರಕ್ಕೆ ಆಗಮಿಸಿದ್ದ ಜಾರ್ಖಂಡ್’ದ ಕುಂಭಕರ್ಣ ಕಣ್ಮರೆಯಾಗಿದ್ದು, ಆತನ ತಮ್ಮನ ಮಗ ದೇವಕರಣ ಹುಡುಕಾಡುತ್ತಿದ್ದಾನೆ.
ಹೊನ್ನಾವರದ ಕಾಸರಗೋಡಿನಲ್ಲಿ ಈ ಇಬ್ಬರು ಜೊತೆಯಲ್ಲಿ ವಾಸವಾಗಿದ್ದರು. ಒಟ್ಟಿಗೆ ಮೀನು ಹಿಡಿಯುವ ಕೆಲಸಕ್ಕೆ ಹೋಗುತ್ತಿದ್ದರು. ಅಗಸ್ಟ್ 3ರ ರಾತ್ರಿ 9ಗಂಟೆಗೆ ಮನೆಯಿಂದ ಹೊರಹೋದ ಕುಂಭಕರ್ಣ ಮರುದಿನ ಬೆಳಗಾದರೂ ಮರಳಲಿಲ್ಲ. ಇಡೀ ದಿನ ಹುಡುಕಿದರೂ ಆತ ಕಾಣದ ಕಾರಣ ಕುಂಭಕರ್ಣನನ್ನು ಹುಡುಕಿಕೊಡುವಂತೆ ದೇವಕಣ ಪೊಲೀಸರ ಮೊರೆ ಹೋಗಿದ್ದಾನೆ.





Discussion about this post