ಹೊನ್ನಾವರ: ಗೇರುಸೊಪ್ಪಾ ಅಣೆಕಟ್ಟಿನಿಂದ ಹೊರಬಿದ್ದ ನೀರು ವಿವಿಧ ಗ್ರಾಮಗಳಿಗೆ ಪ್ರವೇಶಿಸಿದೆ. ಹೀಗಾಗಿ ತಗ್ಗು ಪ್ರದೇಶದ ಜನ ಕಾಳಜಿ ಕೇಂದ್ರಗಳ ಕಡೆ ಮುಖ ಮಾಡಿದ್ದಾರೆ.
ಉಪ್ಪೂಣಿ ಗ್ರಾಮದ ಗಾಬಿತಕೇರಿ, ಸರಳಗಿ, ಕುದ್ರಗಿ, ಮಾಗೋಡ ಸಂಶಿ ಭಾಗದಲ್ಲಿ ನೀರು ತುಂಬುತ್ತಿದೆ. ಈ ಗ್ರಾಮದ ಅಡಿಕೆ ತೋಟಗಳು ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಖರ್ವಾ ಮಾವಿನಕುರ್ವಾ ಹಡಿನಬಾಳ, ಜಲವಳ್ಳಿ, ಮಾಗೋಡ ಕೆಳಗಿನ ಇಡಗುಂಜಿ ಸೇರಿದಂತೆ ನದಿಯುದ್ದಕ್ಕೂ ಇರುವ ತಗ್ಗು ಪ್ರದೇಶ ನಿವಾಸಿಗಳು ಆತಂಕದಲ್ಲಿದ್ದಾರೆ. ಕೆಲವರನ್ನು ದೋಣಿ ಮೂಲಕ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ





Discussion about this post