ಶಿರಸಿ: ಅಗಸ್ಟ 17ರ ಶನಿವಾರ ಬೆಳಗ್ಗೆ 10 ಗಂಟೆಗೆ ಶಿರಸಿಯ ಅಂಬೇಡ್ಕರ ಭವನದಲ್ಲಿ ಕುಂಬ್ರಿ ಮರಾಠಿ ಸಮುದಾಯದವರ ಸಭೆ ನಡೆಯಲಿದೆ. `ಮೀಸಲಾತಿಗೆ ಎರಡು ದಶಕ’ ವಿಷಯ ಕುರಿತಾಗಿ ವಿಶ್ಲಷಣೆ ನಡೆಸಲು ಈ ಕಾರ್ಯಕ್ರಮ ಸಂಘಟಿಸಲಾಗಿದೆ.
ಈ ಕಾರ್ಯಕ್ರಮದ ಪೂರ್ವಬಾವಿಯಾಗಿ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಮ್ಮ ಕಚೇರಿಯಲ್ಲಿ ಅಗಸ್ಟ 10ರಂದು ಕಾರ್ಯಕಾರಿ ಸಮಿತಿ ಸಭೆ ನಡೆಸಿದರು. `ಸಾಂಘಿತ ಮತ್ತು ಕಾನೂನಾತ್ಮಕ ಹೋರಾಟದ ಹಿನ್ನಲೆಯಲ್ಲಿ ಕುಂಬ್ರಿ ಮರಾಠಿ ಸಮಾಜಕ್ಕೆ ಅತಿ ಹಿಂದುಳಿದ ಪಟ್ಟಿಗೆ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮತ್ತು ಸಮಾಜ ಕಲ್ಯಾಣ ಸಚಿವ ಕಾಗೊಡ್ ತಿಮ್ಮಪ್ಪ ಮುತುವರ್ಜಿವಹಿಸಿದ್ದರು. ಈ ಹಿನ್ನಲೆ ಸಚಿವ ಸಂಪುಟದ ತಿರ್ಮಾನದಂತೆ ಜನವರಿ 2001ರ ಮೀಸಲಾತಿ ಪಟ್ಟಿಯಲ್ಲಿ ಈ ಸಮುದಾಯ ಸೇರ್ಪಡೆಯಾಗಿದ್ದು, ರಾಜ್ಯಪತ್ರದಲ್ಲಿ ಪ್ರಕಟಗೊಂಡಿತು’ ಎಂದು ಸಭೆಯಲ್ಲಿ ರವೀಂದ್ರ ನಾಯ್ಕ ವಿವರಿಸಿದರು.
ಪೂರ್ವಭಾವಿ ಸಭೆಯಲ್ಲಿ ಸಮಾಜದ ಹಿರಿಯ ದುರೀಣರಾದ ದೇವರಾಜ ಮರಾಠಿ ಬಂಡಲ್ , ಕಿರಣ ಮರಾಠಿ ದೇವನಳ್ಳಿ, ನಾಗರಾಜ ಮರಾಠಿ ಕೊಡಿಗದ್ದೆ, ರಮೇಶ ಮರಾಠಿ ಮೊಗದ್ದೆ, ಕೇಶವ ಮರಾಠಿ, ಶ್ರೀಕಾಂತ ಮರಾಠಿ, ಕೃಷ್ಣ ಮರಾಠಿ, ತಿಮ್ಮ ಮರಾಠಿ ಅನುಗುಣಿ, ಗಣೇಶ ಮರಾಠಿ, ಭೀಮಸೀ ವಾಲ್ಮೀಕಿ, ಬಾಬು ಮರಾಠಿ ಬಂಡಲ್ ಇತರರು ಇದ್ದರು.
Discussion about this post