6
  • Latest

ಎಲೆ – ಅಡಿಕೆ ಹಾಕುವವರೇ ಹುಷಾರು: ಕವಳದ ವಿರುದ್ಧ ಕಠಿಣ ಕಾರ್ಯಾಚರಣೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಎಲೆ – ಅಡಿಕೆ ಹಾಕುವವರೇ ಹುಷಾರು: ಕವಳದ ವಿರುದ್ಧ ಕಠಿಣ ಕಾರ್ಯಾಚರಣೆ!

AchyutKumar by AchyutKumar
in ರಾಜ್ಯ

ಶಿರಸಿ: ಕಂಡ ಕಂಡಲ್ಲಿ ಕವಳ (ಎಲೆ – ಅಡಿಕೆ) ಉಗುಳುವವರ ಮೇಲೆ ಪೊಲೀಸರು `ಕಠಿಣ ಕ್ರಮ’ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ಎಲೆ ಅಡಿಕೆ ಹಾಕಿ ಅವರಿವರ ಮೇಲೆ ಉಗಿದರೆ ರಾಜಿಯೇ ಇಲ್ಲ. ಸಾರ್ವಜನಿಕ ಸ್ಥಳದಲ್ಲಿ ಕವಳ ಉಗಿದರೂ ಇನ್ಮುಂದೆ ನ್ಯಾಯಾಲಯ ಅಲೆದಾಟ ತಪ್ಪಿದ್ದಲ್ಲ!

ADVERTISEMENT

ಶನಿವಾರ ರಾತ್ರಿ ಒಂದು ತಾಸು ನಗರ ಸಂಚಾರ ನಡೆಸಿದ ಪೊಲೀಸರಿಗೆ 61 ಜನ ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. ಪೊಲೀಸರಿಗೆ ಸ್ಥಳದಲ್ಲಿಯೇ ದಂಡ ವಿಧಿಸುವ ಅಧಿಕಾರ ಇಲ್ಲದ ಕಾರಣ ಎಲ್ಲರ ಹೆಸರನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು. ಕವಳದ ಜೊತೆ ಗುಟಕಾ ಸೇವಿಸಿ ಉಗಿದವರ ವಿರುದ್ಧ ಸಹ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದರು. ಈ ವೇಳೆ ವಿವಿಧ ಗೂಡಂಗಡಿಗಳಿಗೆ ಭೇಟಿ ನೀಡಿದ ಪಿಸೈ ನಾಗಪ್ಪ ಅವರು ಅಂಗಡಿ ಮಾಲಕರಿಗೂ ಅರಿವು ಮೂಡಿಸಿದರು.

ಈ ಹಿನ್ನಲೆ ಸ್ವಯಂ ಪ್ರೇರಣೆಯಿಂದ ಕವಳ ತೂಪುವವರ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು ಸಿಪಿ ಬಜಾರ, ಬಿಡ್ಕಿ ಬೈಲ್, ಐದು ರಸ್ತೆ, ನಟರಾಜ ರಸ್ತೆ ಇನ್ನಿತರ ಕಡೆ ಸಂಚಾರ ನಡೆಸಿದರು. ಆಗ ಅಲ್ಲಲ್ಲಿ ಕವಳ ಉಗಿಯುತ್ತಿದ್ದವರನ್ನು ಕರೆದು ಬುದ್ದಿ ಹೇಳಿದರು. ಕಂಡ ಕಂಡಲ್ಲಿ ಕವಳ ಉಗಿಯುವುದರಿಂದ ಆಗುವ ಸಮಸ್ಯೆ ಹಾಗೂ ರೋಗ ಹರಡುವಿಕೆಯ ಬಗ್ಗೆ ಮೊದಲ ಹಂತದಲ್ಲಿ ಈ ಕಾರ್ಯಾಚರಣೆ ನಡೆಸಿದ ಪೊಲೀಸರು, ಇನ್ನಷ್ಟು ಪ್ರಕರಣ ದಾಖಲಿಸುವ ಸಾಧ್ಯತೆ ಹೆಚ್ಚಿದೆ.

Advertisement. Scroll to continue reading.

ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಾಹನಗಳ ಮೇಲೆ ಸಂಚರಿಸುವಾಗ ಅನೇಕರು ಕವಳ ಉಗಿಯುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವೈದ್ಯ ಡಾ ರವಿಕಿರಣ ಪಟವರ್ಧನ್ ಈ ಬಗ್ಗೆ ಸಾರಿಗೆ ಇಲಾಖೆಯವರ ಗಮನಕ್ಕೆ ತಂದಿದ್ದು, ಅವರು ಪೊಲೀಸರಿಗೆ ದೂರುವಂತೆ ತಿಳಿಸಿದ್ದರು. ಕವಳ ಉಗುಳುವವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಹ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದವು. ಇದನ್ನು ಗಮನಿಸಿದ ಪೊಲೀಸ್ ಅಧೀಕ್ಷಕ ಎಂ ನಾರಾಯಣ್ ತುರ್ತು ಕ್ರಮಕ್ಕೆ ಸೂಚಿಸಿದ್ದರು.

Advertisement. Scroll to continue reading.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ ಜಯಕುಮಾರ, ಎಂ ಜಗದೀಶ್, ಹಾಗೂ ಡಿವೈಎಸ್ಪಿ ಗಣೇಶ ಕೆಎಲ್ ಸಹ ಈ ವಿಷಯವವನ್ನು ಗಂಭೀರವಾಗಿ ಪರಿಗಣಿಸಿದ್ದರು. ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದಕ್ಕಾಗಿ ಸಿಪಿಐ ಶಶಿಕಾಂತ ವರ್ಮಾ ಪಿಸೈ ನಾಗಪ್ಪ ಕುಂಬಾರ ಅವರ ಜೊತೆ ಚರ್ಚಿಸಿದ್ದು, ಎಸೈ ಗೀತಾ ಗರಗ, ಹೊನ್ನಪ್ಪ ಅಗೇರ, ಸಂತೋಷ ಚಿತ್ರಗಿ, ಅರುಣ ಲಮಾಣಿ, ಮಂಜು ಕಾಶಿಕೋವಿ, ದೀಪಾ ಹರಿಜನ, ಭೀಮಪ್ಪ ಇತರರು ಅಲ್ಲಲ್ಲಿ ದಾಳಿ ನಡೆಸಿ ಕವಳದ ವಿರುದ್ಧ ಜಾಗೃತಿ ಕಾರ್ಯಾಚರಣೆ ನಡೆಸಿದರು.

Previous Post

ಬರ ಅಟ್ಟಲು ಗಿಡ ನೆಟ್ಟ ಶಾಲಾ ಮಂಡಳಿ

Next Post

ವ್ಯಾಪಕ ಮಳೆ: ನೆರೆಯಿಂದ ಒಳ್ಳೆಯದಾಗಿದ್ದು ಇವರಿಗೆ ಮಾತ್ರ!

Next Post

ವ್ಯಾಪಕ ಮಳೆ: ನೆರೆಯಿಂದ ಒಳ್ಳೆಯದಾಗಿದ್ದು ಇವರಿಗೆ ಮಾತ್ರ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ