6
  • Latest
ಯಕ್ಷಶ್ರೀ: ಮದ್ದಳೆ ಎಂದರೆ ನಾಗಪಣ್ಣನಿಗೆ ಮಾತೃಪ್ರೇಮ!

ಯಕ್ಷಶ್ರೀ: ಮದ್ದಳೆ ಎಂದರೆ ನಾಗಪಣ್ಣನಿಗೆ ಮಾತೃಪ್ರೇಮ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಯಕ್ಷಶ್ರೀ: ಮದ್ದಳೆ ಎಂದರೆ ನಾಗಪಣ್ಣನಿಗೆ ಮಾತೃಪ್ರೇಮ!

AchyutKumar by AchyutKumar
in ಲೇಖನ

ಕೃಷಿ ಹಾಗೂ ಕಲಾರಾಧನೆಯ ಮೂಲಕ ನಿರಂತರ ಕ್ರಿಯಾಶೀಲತೆ ಹೊಂದಿದವರು ಮದ್ದಳೆವಾದಕ ನಾಗಪ್ಪ ಕೋಮಾರ.

ತಮ್ಮ ಹುಟ್ಟೂರಾದ ಯಲ್ಲಾಪುರ ತಾಲೂಕಿನ ತಾರಗಾರ ಎಂಬಲ್ಲಿ ಗೋವಿಂದಜ್ಜರಿoದ ತಾಳದ ಅರಿವು ಹಾಗೂ ಖ್ಯಾತ ಚಂಡೆವಾದಕ ನಾಯ್ಕನಕೆರೆ ಮಹಾಬಲೇಶ್ವರರಿಂದ ಮದ್ದಳೆವಾದನದ ಪ್ರಾಥಮಿಕ ತರಬೇತಿಯನ್ನು ಅವರು ಪಡೆದರು. ನಂತರ ಕೆರೆಮನೆ ಶಂಭುಹೆಗಡೆ ನಿರ್ದೇಶನದ ಗುಣವಂತೆ ಕೇಂದ್ರವನ್ನು ಸೇರಿ ಅಲ್ಲಿ ಗುರುಗಳಾಗಿದ್ದ ಹೇರಂಜಾಲು ವೆಂಕಟ್ರಮಣ ಗಾಣಿಗರಿಂದ ಹೆಜ್ಜೆಗಾರಿಕೆ ಮತ್ತು ಇಡಗುಂಜಿ ಕೃಷ್ಣ ಯಾಜಿಯವರಿಂದ ಮದ್ದಳೆಗಾರಿಕೆಯ ಕುರಿತು ಹೆಚ್ಚಿನ ತರಬೇತಿ ಹೊಂದಿದರು. ಮದ್ದಳೆ ವಾದನದಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ಕಳವಾಡಿ, ಹಾಲಾಡಿ, ಮಂದಾರ್ತಿ ಮುಂತಾದ ವೃತ್ತಿ ಮೇಳಗಳಲ್ಲಿ ಮರವಂತೆ ನರಸಿಂಹ ದಾಸರು, ಕೆ ಪಿಹೆಗಡೆ, ಅಚವೆ ರವೀಂದ್ರ ಭಟ್, ಹೇರಂಜಾಲು ಬಾಲಕೃಷ್ಣ ಗಾಣಿಗ, ಸುನೀಲ ಭಂಡಾರಿ ಮುಂತಾದವರೊಟ್ಟಿಗೆ ಏಳೆಂಟು ವರ್ಷಗಳ ಕಾಲ ಮದ್ದಳೆವಾದಕರಾಗಿ ತಿರುಗಾಟ ನಡೆಸಿದರು.

ಹೆಚ್ಚೆಚ್ಚು ಕಲಿಯಬೇಕು, ವಾದನವಿಭಾಗದಲ್ಲಿ ಮಹತ್ವದ ಸಾಧನೆ ಮಾಡಬೇಕೆಂಬ ಉತ್ಸಾಹದಲ್ಲಿರುವಾಗಲೇ ಅನಿರೀಕ್ಷಿತವಾಗಿ ಒದಗಿಬಂದ ಕೌಟುಂಬಿಕ ಸಮಸ್ಯೆಗಳಿಂದ ನುಣುಚಿಕೊಳ್ಳಲಾಗಲಿಲ್ಲ. ಹೀಗಾಗಿ ಮೇಳದ ತಿರುಗಾಟ ನಿಲ್ಲಿಸಿದರು. ಜೀವನಾಧಾರವಾದ ಕೃಷಿ ಕಾರ್ಯದೊಟ್ಟಿಗೆ ಹವ್ಯಾಸಿ ಕಲಾವಿದನಾಗಿ ಆಟ-ಕೂಟಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಕವಾಳೆ ಗಣಪತಿ ಭಾಗವತರ ಒಡನಾಟದಿಂದ ಮದ್ದಳೆ ವಾದನದ ಆಯಾಮಗಳನ್ನು ಅವರು ಅರಿತಿದ್ದಾರೆ.

ಮಳಗಿಮನೆ ಸುಬ್ರಾಯ ಹೆಗಡೆ ನೇತೃತ್ವದ ಆನಗೋಡ ಯಕ್ಷಗಾನ ಶಾಲೆಯಲ್ಲಿ ಮದ್ದಳೆ ಶಿಕ್ಷಕರಾಗಿ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ಸಜ್ಜನ, ನಿಸ್ವಾರ್ಥ ಕಲಾರಾಧಕ, ನೇರನಡೆನುಡಿಯ ನಾಗಪ್ಪಣ್ಣ ಪ್ರಸ್ತುತ ಆಸಕ್ತ ಯುವ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಾರೆ.

– ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ, ಯಲ್ಲಾಪುರ

ShareSendTweetShare
Previous Post

ಗೋವಾದಲ್ಲಿ ಕನ್ನಡ ಹೋರಾಟ: ಸ್ಥಗಿತವಾಗಿದ್ದ ಬಸ್ಸು ಮತ್ತೆ ಓಡಾಟ

Next Post

ಅಂಕೋಲಾ ಪುರಸಭೆ: ಅಧ್ಯಕ್ಷ ಹುದ್ದೆಗೆ ಪಕ್ಷೇತರರೇ ನಿರ್ಣಾಯಕರು!

Next Post

ಅಂಕೋಲಾ ಪುರಸಭೆ: ಅಧ್ಯಕ್ಷ ಹುದ್ದೆಗೆ ಪಕ್ಷೇತರರೇ ನಿರ್ಣಾಯಕರು!

Leopard/ ಜನವಸತಿ ಪ್ರದೇಶಕ್ಕೆ ನುಗ್ಗಿದ ವನ್ಯಜೀವಿ: ಬಾಲ ಅಲ್ಲಾಡಿಸಿ ಕಿರುಚಿದ ಕಾರಣ ಬದುಕಿತು ಬಡಜೀವ!

Leopard/ ಜನವಸತಿ ಪ್ರದೇಶಕ್ಕೆ ನುಗ್ಗಿದ ವನ್ಯಜೀವಿ: ಬಾಲ ಅಲ್ಲಾಡಿಸಿ ಕಿರುಚಿದ ಕಾರಣ ಬದುಕಿತು ಬಡಜೀವ!

Matka/ 1 ರೂಪಾಯಿಗೆ 80 ರೂಪಾಯಿ: ಮೈಕ್ ಹಿಡಿದು ಕೂಗುವುದು ಮಾತ್ರ ಬಾಕಿ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.