ದಾಂಡೇಲಿಯ ಅಂಬೇವಾಡಿಯಲ್ಲಿರುವ ಡಾ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯ (Hostel students) ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದು, ಶಾಲೆಗೆ ಭೇಟಿ ನೀಡಿದ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಸತೀಶ ಪೂಜಾರಿ ಅಲ್ಲಿನ ವಿದ್ಯಾರ್ಥಿಗಳ ಅಳಲು ಆಲಿಸಿದರು.
ಈ ವೇಳೆ ಅಲ್ಲಿದ್ದ ಹಲವರು ವಸತಿ ಶಾಲೆಯ ಬಗ್ಗೆ ದೂರಿದರು. `ಮಕ್ಕಳಿಗೆ ಗುಣಮಟ್ಟದ ಊಟ ಉಪಹಾರವನ್ನು ನೀಡಬೇಕು. ಶೈಕ್ಷಣಿಕ ಹಿನ್ನಡೆ ಆಗದಂತೆ ಎಚ್ಚರಿಕೆವಹಿಸಬೇಕು’ ಎಂದು ಸಿಬ್ಬಂದಿಗೆ ಅವರು ಸೂಚಿಸಿದರು. ವಾರ್ಡನ್ ಸೇರಿದಂತೆ ಸಹಾಯಕ ಸಿಬ್ಬಂದಿ ಬಗ್ಗೆ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು.
ತಹಶೀಲ್ದಾರ್ ಶೈಲೇಶ ಪರಮಾನಂದ ಇತರರು ಇದ್ದರು.





Discussion about this post