ಮಂಗಳವಾರ ಶಿರೂರಿಗೆ ಆಗಮಿಸಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಳಿ ಬೆಳಂಬಾರದ ಹನುಮಂತ ಗೌಡ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ್ದು, ಈ ವೇಳೆ ಹನುಮಂತ ಗೌಡರನ್ನು ಗುರುತಿಸಿದ ವೀರೇಂದ್ರ ಹೆಗ್ಗಡೆ ಅವರು ನಾಟಿವೈದ್ಯ (Ayurveda) ಪದ್ಧತಿಯ ಬಗ್ಗೆ ಮಾಹಿತಿ ಪಡೆದರು.
ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡರನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಜಿಲ್ಲಾ ನಿರ್ದೇಶಕ ಮಹೇಶ್ ಎಂ.ಡಿ ಪರಿಚಯಿಸಲು ಹೊರಟಾಗ ವೀರೇಂದ್ರ ಹೆಗ್ಗಡೆಯವರು `ನೀವು ಪಾಶ್ವವಾಯು ಪೀಡಿತರಿಗೆ ಔಷಧಿ ನೀಡುವ ನಾಟಿ ವೈದ್ಯರಲ್ಲವೇ?’ ಎಂದು ಪ್ರಶ್ನಿಸಿದರು. `ನಿಮ್ಮ ಕುರಿತು ಬಹಳ ಕೇಳಿದ್ದೇನೆ. ಉತ್ತಮ ಕೆಲಸ ಮಾಡುತ್ತಿದ್ದೀರಿ. ಮಂಜುನಾಥ ನಿಮಗೆ ಒಳ್ಳೆಯದನ್ನು ಮಾಡಲಿ. ಹಲವರ ಪ್ರಾಣ ಕಾಪಾಡಿದ ಪುಣ್ಯ ನಿಮಗೆ ಬರುತ್ತದೆ’ ಎಂದು ಹರಸಿದರು.





Discussion about this post