`ವಾಟ್ಸಪ್-ಇಮೇಲ್ ನನಗೆ ಸಂಬoಧವಿಲ್ಲ. ಧಮ್ ಇದ್ದರೆ ಕೋರ್ಟ ಆದೇಶ ತನ್ನಿ’ ಎಂದು ಪುರಸಭೆ ಕಾರ್ಯಾಲಯದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ ಅಬ್ಬರಿಸಿದ್ದಾರೆ. ( Municipal elections )
ಕುಮಟಾ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ( Municipal elections ) ಬುಧವಾರ ಆಯ್ಕೆ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಮೀಸಲಾತಿ ವಿಷಯದಲ್ಲಿನ ಗೊಂದಲದಿoದಾಗಿ ಹೈಕೋರ್ಟ ಇದಕ್ಕೆ ತಡೆ ನೀಡಿದ್ದು, ಆದೇಶ ಪ್ರತಿಯನ್ನು ತಲುಪಿಸದೇ ಚುನಾವಣೆ ರದ್ದು ಮಾಡಿದ ಕಾರಣ ಶಾಸಕ ದಿನಕರ ಶೆಟ್ಟಿ ಜಿಲ್ಲಾಧಿಕಾರಿಗಳನ್ನು ಫೋನ್ ಮೂಲಕ ತರಾಟೆಗೆ ತೆಗೆದುಕೊಂಡರು. `ಬಾಕಿ ಎಲ್ಲಾ ಮಾತನಾಡುತ್ತಾರೆ. ಆದೇಶದ ಮೂಲ ಪ್ರತಿ ತಂದು ಕೊಡಲಾಗುವುದಿಲ್ಲವೇ? ಆದೇಶ ಪ್ರತಿ ಕೊಡದೇ ಇದ್ದರೆ ನಾನು ಇಲ್ಲಿಯೇ ಪ್ರತಿಭಟಿಸುತ್ತೇನೆ’ ಎಂದು ಪಟ್ಟು ಹಿಡಿದರು.
`S News ಡಿಜಿಟಲ್’
`ನಾವು ಕಾನೂನಿಗೆ ಗೌರವ ಕೊಡುತ್ತೇವೆ. ನಿಮ್ಮ ಆದೇಶ ಅಲ್ಲ. ಕೋರ್ಟಿನ ಆದೇಶವೇ ನಮಗೆ ಬೇಕು. ನಿಮ್ಮದು ಇಲ್ಲಿ ನಡೆಯುವುದಿಲ್ಲ. ಜನರಿಂದ ಆಯ್ಕೆಯಾದವರ ಮಾತಿಗೆ ಬೆಲೆ ಇಲ್ಲವೇ?’ ಎಂದು ಪ್ರಶ್ನಿಸಿದರು. `ಅಧಿಕಾರಿಗಳ ಮೂಲಕ ಆಡಳಿತ ನಡೆಸುವ ಉದ್ದೇಶದಿಂದ ಕಾಂಗ್ರೆಸ್ ಕಾರ್ಯಕರ್ತರು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಗೆ ತಡೆ ತಂದಿದ್ದು, ಮಂಗಳವಾರ ಸಂಜೆಯೇ ಈ ಬಗ್ಗೆ ಮಾಹಿತಿ ಇದ್ದರೂ ಸದಸ್ಯರಿಗೆ ತಿಳಿಸದೇ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ರೀತಿ ಘಟನೆ ಸಾಮಾನ್ಯವಾಗಿದೆ. ಮೀಸಲಾತಿ ವಿಷಯವಾಗಿ ತಡೆ ಬಂದಿದ್ದು, ಕುಮಟಾ ಪುರಸಭೆ ಅಭಿವೃದ್ಧಿ ಹಿನ್ನಡೆಗೆ ಕಾಂಗ್ರೆಸ್ ಕಾರಣ’ ಎಂದು ಬಿಜೆಪಿ ಮುಖಂಡ ಹೇಮಂತಕುಮಾರ ಗಾಂವ್ಕರ್ ಅವರು ದೂರಿದರು.
`ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಆದರೆ ಆಡಳಿತ ವೈಖರಿ ಬದಲಾಗುತ್ತದೆ. ಜನಪ್ರತಿನಿಧಿಗಳ ಮಾತು ಅಧಿಕಾರಿಗಳು ಕೇಳಬೇಕಾಗುತ್ತದೆ. ಜನ ಸಾಮಾನ್ಯರ ಕೆಲಸ ತ್ವರಿತ ಆಗುತ್ತದೆ. ಹೀಗಾಗಿ ಅದು ಆಗಬಾರದು ಎಂದು ಈ ರೀತಿ ಮಾಡಲಾಗಿದೆ. ಅಧಿಕಾರಿಗಳ ಆಡಳಿತ ನಡೆಸುವುದರಿಂದ ಜನಪ್ರತಿನಿಧಿಗಳಿಗೆ ಅನ್ಯಾಯವಾಗಿದೆ. ದಿನಕರ ಶೆಟ್ಟಿ ಅವರಿಗೆ ಹಿನ್ನಡೆ ಮಾಡಲು ಇಲ್ಲಿ ಕುತಂತ್ರ ನಡೆದಿದೆ’ ಎಂದು ಅವರ ಬೆಂಬಲಿಗರು ದೂರಿದರು.
ಶಾಸಕ ದಿನಕರ ಶೆಟ್ಟಿ ಫೋನಿನಲ್ಲಿ ಹೇಳಿದ್ದೇನು? ನಂತರ ನಡೆದದ್ದೇನು? ವಿಡಿಯೋ ಇಲ್ಲಿ ನೋಡಿ..





Discussion about this post