ಮೊನ್ನೆ ನಗರಸಭೆ ಚುನಾವಣೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಜಗಳವಾಡಿದ್ದ ಕಾಂಗ್ರೆಸ್ ಹಾಗೂ ಬಿಜೆಪಿಗರು ಶುಕ್ರವಾರ ಕಾರವಾರದ ( Karwar ) ಗಾಂಧಿ ಮಾರುಕಟ್ಟೆಯಲ್ಲಿನ ಮಣ್ಣು ತೆರವು ವಿಷಯವಾಗಿ ಕಚ್ಚಾಟ ನಡೆಸಿದ್ದಾರೆ. ನಗರಸಭೆಯ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಶುರುವಾದ ಮಾತಿನ ಚಕಮಕಿ ಈ ಎರಡು ಬಣದ ಬೆಂಬಲಿಗರ ನಡುವಿನ ದ್ವೇಷ ರಾಜಕಾರಣಕ್ಕೆ ಕಾರಣವಾಗಿದೆ.
ಕಾರವಾರ ( Karwar ) ನಗರದ ಗಾಂಧಿ ಮಾರುಕಟ್ಟೆಯಲ್ಲಿನ ಹಳೆಯದಾಗಿದ್ದ ಕಟ್ಟಡವನ್ನು 2020ರಲ್ಲಿ ತೆರವು ಮಾಡಲಾಗಿದ್ದು, ಅಲ್ಲಿನ ಮಣ್ಣನ್ನು ಬೇರೆ ಕಡೆ ಹಾಕಿರಲಿಲ್ಲ. ಇದರಿಂದ ಮಳೆಗಾಲದಲ್ಲಿ ಆ ಮಣ್ಣು ಇತರೆ ಅಂಗಡಿಗಳಿಗೆ ನುಗ್ಗುತ್ತಿತ್ತು. ಮಣ್ಣು ಗಟಾರ ತುಂಬುವುದರಿoದ ನೀರು ಹರಿಯುವಿಕೆಗೆ ಸಮಸ್ಯೆಯಾಗಿತ್ತು. ನಗರಸಭೆಯ ನೂತನ ಅಧ್ಯಕ್ಷರ ಆಯ್ಕೆ ನಂತರ ಮೊದಲ ಕೆಲಸವಾಗಿ ಮಣ್ಣು ಸ್ಥಳಾಂತರಕ್ಕೆ ಯೋಜನೆ ರೂಪಿಸಲಾಗಿದ್ದು, ಇದೇ ವಿಷಯ ಜಗಳಕ್ಕೆ ಕಾರಣವಾಗಿದೆ. ನಗರದ ಮದ್ಯಭಾಗದಲ್ಲಿ ನಡೆದ ಜಗಳ ನೋಡಲು ನೂರಾರು ಜನ ಆಗಮಿಸಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ನಗರಸಭೆಯಲ್ಲಿ ಯಾವುದೇ ಠರಾವು ಆಗದೇ ಮಣ್ಣು ಸ್ಥಳಾಂತರ ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು. ಸಾಕಷ್ಟು ವಾಗ್ವಾದದ ನಂತರವೂ ಈ ವಿಷಯ ಬಗೆಹರಿಯಲಿಲ್ಲ. ಹೀಗಾಗಿ ಅರ್ದಕ್ಕೆ ಮಣ್ಣು ತೆರವು ಕಾರ್ಯ ನಿಲ್ಲಿಸಲಾಯಿತು.





Discussion about this post