6
  • Latest
the ac office job promising

ಉದ್ಯೋಗವೂ ಇಲ್ಲ.. ಪರಿಹಾರವೂ ಸಿಕ್ಕಿಲ್ಲ.. ಅವರು ನೀಡಿದ ಭರವಸೆಗಳೆಲ್ಲವೂ ಬರೀ ಸುಳ್ಳು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಉದ್ಯೋಗವೂ ಇಲ್ಲ.. ಪರಿಹಾರವೂ ಸಿಕ್ಕಿಲ್ಲ.. ಅವರು ನೀಡಿದ ಭರವಸೆಗಳೆಲ್ಲವೂ ಬರೀ ಸುಳ್ಳು!

AchyutKumar by AchyutKumar
in ಸ್ಥಳೀಯ
the ac office job promising

ಶಿರೂರು ಗುಡ್ಡ ಕುಸಿತದಿಂದ ಕಣ್ಮರೆಯಾದ ಜಗನ್ನಾಥ ನಾಯ್ಕ ಅವರನ್ನು ಹುಡುಕಿಕೊಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಅವರ ಮಕ್ಕಳಿಗೆ ಪರಿಹಾರವೂ ಸಿಕ್ಕಿಲ್ಲ. ನೀಡಿದ ಭರವಸೆಯಂತೆ ಉದ್ಯೋಗವನ್ನು ಕೊಟ್ಟಿಲ್ಲ.

ADVERTISEMENT

ರಾಜ್ಯ ಸರ್ಕಾರ ಶಿರೂರು ದುರಂತದಲ್ಲಿ ಸಾವನಪ್ಪಿದವರಿಗೆ 5 ಲಕ್ಷ ರೂ ಹಾಗೂ ಕೇಂದ್ರ ಸರ್ಕಾರ 2 ಲಕ್ಷ ರೂ ಪರಿಹಾರ ಘೋಷಿಸಿದೆ. ಆದರೆ, ದುರಂತದಲ್ಲಿ ಕಣ್ಮರೆಯಾದವರ ಕುಟುಂಬಕ್ಕೆ ಈ ಪರಿಹಾರ ಸಿಗುತ್ತಿಲ್ಲ. ಕಣ್ಮರೆಯಾದವರ ದೇಹ ಸಿಕ್ಕದರೆ ಮಾತ್ರ ಅವರ ಕುಟುಂಬಕ್ಕೆ ಪರಿಹಾರ ಸಿಗಲಿದ್ದು, ದೇಹ ಹುಡುಕುವ ಪ್ರಯತ್ನ ಸಹ ನಡೆದಿಲ್ಲ. ಹೀಗಾಗಿ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಕುಟುಂಬದವರು ಅತಂತ್ರರಾಗಿದ್ದಾರೆ.

ಇನ್ನೂ ನಾಪತ್ತೆ ಆದವರ ಕುಟುಂಬಕ್ಕೆ ಸಹ ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದರು. ಆದರೆ, ಇದೀಗ ಆ ಕಾಯ್ದೆಯನ್ನು ಕೇಂದ್ರ ಸರ್ಕಾರ ಬದಲು ಮಾಡಬೇಕು ಎಂದು ಹೇಳುತ್ತಿದ್ದಾರೆ. ಕಣ್ಮರೆಯಾಗಿ 7 ವರ್ಷ ಕಳೆದರೆ ಮಾತ್ರ ಅವರ ಕುಟುಂಬಕ್ಕೆ ಪರಿಹಾರ ಸಿಗುತ್ತದೆ ಎಂಬುದು ಈಗಿನ ನಿಯಮ.

Advertisement. Scroll to continue reading.

ಜಗನ್ನಾಥ ನಾಯ್ಕ ಅವರ ಒಬ್ಬ ಹೆಣ್ಣು ಮಗಳಿಗೆ ಕುಮಟಾ ಎಸಿ ಕಚೇರಿಯಲ್ಲಿ ಉದ್ಯೋಗ ನೀಡುವುದಾಗಿ ಕುಮಟಾ ಉಪವಿಭಾಗಾಧಿಕಾರಿ ಭರವಸೆ ನೀಡಿದ್ದರು. ಕುಮಟಾ ವಿಭಾಗಾಧಿಕಾರಿ ಜಗನ್ನಾಥ ನಾಯ್ಕ ಅವರ ಮನೆಗೆ ತೆರಳಿ ಈ ಆಶ್ವಾಸನೆ ನೀಡಿದ್ದರು. ಆದರೆ, ಅದು ಈಡೇರಿಲ್ಲ.

Advertisement. Scroll to continue reading.

ಶಾಸಕ ಸತೀಶ್ ಸೈಲ್ ಸಹ ಜಗನ್ನಾಥ ನಾಯ್ಕ ಅವರ ಕುಟುಂಬದ ಒಬ್ಬರಿಗೆ ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರು. ಜೊತೆಗೆ ಕೆಡಿಸಿಸಿ ಬ್ಯಾಂಕಿನಲ್ಲಿ ಸಹ ಇನ್ನೊಬ್ಬರಿಗೆ ಉದ್ಯೋಗ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಅಲ್ಲಿ ಎಲ್ಲಿಯೂ ಅವರಿಗೆ ಉದ್ಯೋಗ ಸಿಕ್ಕಿಲ್ಲ. ದೊಡ್ಡ ದೊಡ್ಡ ಜನರು ಹೇಳಿದ ಭರವಸೆಗಳನ್ನು ನಂಬಿ ಸಮಾಧಾನಗೊಂಡಿದ್ದ ಜಗನ್ನಾಥ ನಾಯ್ಕರ ಪುತ್ರಿಯರಾದ ಪಲ್ಲವಿ ಮನಿಷಾ ಹಾಗೂ ಕೃತಿಕಾರಿಗೆ ಇದೀಗ ನಿರಾಸೆಯಾಗಿದೆ.

ಜು 16ರಂದು ಶಿರೂರು ಗುಡ್ಡ ಕುಸಿತದಲ್ಲಿ ಜಗನ್ನಾಥ ನಾಯ್ಕ ನಾಪತ್ತೆಯಾಗಿದ್ದರು. ತಮ್ಮ ಭಾವ ಲಕ್ಷ್ಮಣ ನಾಯ್ಕ ಅವರ ಚಹಾ ಅಂಗಡಿಗೆ ಅವರಿಗೆ ಸಹಾಯ ಮಾಡುವ ಸಲುವಾಗಿ ಜಗನ್ನಾಥ ನಾಯ್ಕ ಅಲ್ಲಿ ತೆರಳಿದ್ದರು. ಗುಡ್ಡ ಕುಸಿತದ ರಭಸಕ್ಕೆ ಅವರು ಬದುಕಿರುವ ಸಾಧ್ಯತೆಗಳಿಲ್ಲ. ಕಣ್ಮರೆಯಾದವರ ಶವ ಹುಡುಕಲು ಸಹ ಈವರೆಗೆ ಸಾಧ್ಯವಾಗಿಲ್ಲ.

 

Previous Post

ಸೂಕ್ತ ಚಿಕಿತ್ಸೆ-ಕಡ್ಡಾಯ ಲಸಿಕೆ: ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಸೂಚನೆ

Next Post

ದಂಪತಿ ಮೇಲೆ ಹಲ್ಲೆ ನಡೆಸಿದ ಗುತ್ತಿಗೆದಾರ!

Next Post

ದಂಪತಿ ಮೇಲೆ ಹಲ್ಲೆ ನಡೆಸಿದ ಗುತ್ತಿಗೆದಾರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ