6
  • Latest
A series of Yakshagana artistes who didn't make it to the mainstream

ಯಕ್ಷಶ್ರೀ: 78 ವರ್ಷದ ಭಟ್ಟರ ಕಲಾಸೇವೆಗೆ ಐದು ದಶಕ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಯಕ್ಷಶ್ರೀ: 78 ವರ್ಷದ ಭಟ್ಟರ ಕಲಾಸೇವೆಗೆ ಐದು ದಶಕ!

AchyutKumar by AchyutKumar
in ಲೇಖನ
A series of Yakshagana artistes who didn't make it to the mainstream

78 ವರ್ಷದ ಮೊಟ್ಟೆಗದ್ದೆಯ ನಾರಾಯಣ ವೆಂಕಟ್ರಮಣ ಭಟ್ಟರು 50 ವರ್ಷಕ್ಕೂ ಅಧಿಕ ಕಾಲದಿಂದ ಕಲಾ ಸೇವೆಯಲ್ಲಿದ್ದಾರೆ. ಈಗಲೂ ಅವರು ಉತ್ಸಾಹದಿಂದ ತಾಳಮದ್ಧಲೆಗಳಲ್ಲಿ ಅರ್ಥದಾರಿಗಳಾಗಿ ಭಾಗವಹಿಸುತ್ತಿದ್ದು, ಯುವ ಕಲಾವಿದರ ಪಾಲಿಗೆ ಮಾರ್ಗದರ್ಶಕರಾಗಿದ್ದಾರೆ.

ADVERTISEMENT

ಯಲ್ಲಾಪುರ ತಾಲೂಕಿನ ಮೊಟ್ಟೆಗದ್ದೆಯ ನಾರಾಯಣ ವೆಂಕಟ್ರಮಣ ಭಟ್ಟರ ಮುಖ್ಯವೃತ್ತಿ ಪೌರೋಹಿತ್ಯ. ಅದರ ಜೊತೆ ಕೃಷಿ ಕಾಯಕವನ್ನು ಅವರು ಬಿಟ್ಟಿಲ್ಲ. ಇದರೊಂದಿಗೆ ತಮ್ಮೊಳಗಿನ ಕಲಾವಿದನನ್ನು ಸಹ ಅವರು ಪೋಷಿಸಿಕೊಂಡು ಬಂದಿದ್ದಾರೆ. ಕರಡಿಪಾಲ ಶಾಲೆಯಲ್ಲಿ 4ನೇ ತರಗತಿವರೆಗೆ ಓದಿದ ನಂತರ ಕುಂಬಾರಕುಳಿ ನಾಗೇದ್ರ ಭಟ್ಟರಲ್ಲಿ ಕಾಲೋಚಿತ, ಅಪರ ಹಾಗೂ ಜ್ಯೋತಿಷ ಅಭ್ಯಾಸ ಮಾಡಿದ ಅವರು ಸಿದ್ದಾಪುರದ ನೆಲೆಮಾವು ಮಠದಲ್ಲಿ ಸೂರಿ ರಾಮಚಂದ್ರ ಶಾಸ್ತ್ರಿ ಹಾಗೂ ಸದಾಶಿವ ಶಾಸ್ತ್ರಿಗಳ ಬಳಿ ಸಂಸ್ಕೃತ ಪ್ರಥಮ, ಕಾವ್ಯ ಹಾಗೂ ಹಿಂದಿ ವ್ಯಾಸಂಗ ಮಾಡಿದ್ದಾರೆ.

ನಾರಾಯಣ ಭಟ್ಟರ ತಂದೆ ಯಕ್ಷಗಾನ ಅರ್ಥಧಾರಿಗಳಾಗಿದ್ದರು. ಅವರಿಂದ ಪ್ರೇರಣೆಗೆ ಒಳಗಾದ ಇವರು ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. ನೆಲೆಮಾವು ಪಾಠಶಾಲೆಯಲ್ಲಿದ್ದ ವೇಳೆ ಸ್ಥಳೀಯರಾದ ಸೂರಿ ಭಟ್ಟರು, ಅಧ್ಯಾಪಕರಾದ ಸದಾಶಿವ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಅರ್ಥಗಾರಿಕೆ ಆರಂಭಿಸಿದರು. ಊರಿಗೆ ಮರಳಿದ ಮೇಲೆ ಪೌರೋಹಿತ್ಯದೊಂದಿಗೆ ಅರ್ಥಗಾರಿಕೆ ಮುಂದುವರಿಸಿದರು. ಅವರಿಗೆ ತಂದೆ ವೆಂಕಟರಮಣ ಭಟ್ಟರು, ಬಾಲಿಗದ್ದೆ ತಿಮ್ಮಣ್ಣ ಭಟ್ಟ ದ್ವಯರು, ಸಣ್ಣಣ್ಣ ಭಾಗವತರು, ಜವಳೆಕೆರೆ ನರಸಿಂಹ ಭಟ್ಟ, ನಾರಾಯಣ ಭಟ್ಟ ವೈದಿಕರಮನೆ, ಶಿವರಾಮ ಭಟ್ಟ ಚಿನಗಾರ ಮೊದಲಾದವರ ಜೊತೆ ವೇದಿಕೆ ದೊರೆಯಿತು.

Advertisement. Scroll to continue reading.

ಕರಡಿಪಾಲ ಶಾಲೆಯಲ್ಲಿ ಸ್ಥಳೀಯ ಕಲಾವಿದರೇ ಸೇರಿ `ಯಕ್ಷಗಾನ ಮಂಡಳಿ ಮಾಗೋಡ’ ಎಂಬ ಹೆಸರಿನ ತಂಡ ಕಟ್ಟಿದ್ದರು. ಅದರಲ್ಲಿ ಇವರು ನಿರಂತರವಾಗಿ ತಾಳಮದ್ದಲೆ ಮಾಡುತ್ತಿದ್ದರು. ಅಲ್ಲಿ ಹತ್ತಾರು ವರ್ಷಗಳ ಕಾಲ ನಾರಾಯಣ ಭಟ್ಟರು ಅರ್ಥಧಾರಿಯಾಗಿ ಪಾಲ್ಗೊಂಡಿದ್ದಾರೆ. ಹೆಚ್ಚಾಗಿ ಮಾಗೋಡ, ನಂದೊಳ್ಳಿ ಸುತ್ತಮುತ್ತಲಿನ ತಾಳಮದ್ದಲೆಗಳಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ನಂದೊಳ್ಳಿ, ಚಂದಗುಳಿ, ಅಣಲಗಾರ, ಗುಂಡ್ಕಲ್ ಮೊದಲಾದ ಕಡೆ ಸನ್ಮಾನವನ್ನು ಸ್ವೀಕರಿಸಿದ್ದಾರೆ.

Advertisement. Scroll to continue reading.

ಕರ್ನಾಟಕ ಕಲಾ ಸನ್ನಿಧಿ

 

Previous Post

IAS ಓದಲು ಅಲ್ಪ ಸಂಖ್ಯಾತರಿಗೆ ತರಬೇತಿ

Next Post

ಅದೃಷ್ಟದ ಆಟದವರಿಗೆ ಅಪಾರ ನಷ್ಟ: ಒಂದೇ ದಿನ ಮೂರು ದಾಳಿ!

Next Post

ಅದೃಷ್ಟದ ಆಟದವರಿಗೆ ಅಪಾರ ನಷ್ಟ: ಒಂದೇ ದಿನ ಮೂರು ದಾಳಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ