6
  • Latest
Yakshagana Artist Baskar bhat

ಯಕ್ಷಶ್ರೀ: ಗುರುವಿನಿಂದ ಕಲಿತ ವಿದ್ಯೆ ಶಿಷ್ಯರಿಗೆ ಧಾರೆ ಎರೆದ ಕಲಾವಿದ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಯಕ್ಷಶ್ರೀ: ಗುರುವಿನಿಂದ ಕಲಿತ ವಿದ್ಯೆ ಶಿಷ್ಯರಿಗೆ ಧಾರೆ ಎರೆದ ಕಲಾವಿದ!

AchyutKumar by AchyutKumar
September 2, 2024
in ಲೇಖನ
Yakshagana Artist Baskar bhat
advt advt advt
ADVERTISEMENT

ಯಕ್ಷಗಾನ ಭಾಗವತರಾದ ತಂದೆ – ಸಾಂಪ್ರದಾಯಿಕ ಹಾಡುಗಾರ್ತಿ ತಾಯಿ ಅವರಿಂದ ಬಲೆಗುಳಿಯ ಭಾಸ್ಕರ ಭಟ್ಟರಿಗೆ ಸಾಂಸ್ಕೃತಿಕ ಜಗತ್ತು ಪರಿಚಯವಾಯಿತು. ತಮ್ಮಲ್ಲಿನ ಪ್ರತಿಭೆಯನ್ನು ಬಳಸಿಕೊಂಡು ಅವರು ಕಲಾ ಆರಾಧನೆಯಲ್ಲಿ ತೊಡಗಿದರು. ವೃತ್ತಿಪರ ಕಲಾವಿದರಾಗಿ ಬೆಳೆಯಲು ಆಗದೇ ಇದ್ದರೂ ಹವ್ಯಾಸಿ ಕಲಾವಿದರಾಗಿ ಹೆಸರು ಮಾಡಿದರು.

ಬಲಿಗುಳಿಯ ನಾರಾಯಣ ಸುಬ್ರಾಯ ಭಟ್ಟ ಅವರು ಯಕ್ಷಗಾನ ಭಾಗವತರಾಗಿದ್ದರು. ಅವರ ಪತ್ನಿ ಗಾಯತ್ರಿ ಭಟ್ಟ ಅವರು ಸುಂದರವಾಗಿ ಹಾಡುತ್ತಿದ್ದರು. ಈ ಇಬ್ಬರ ಪುತ್ರರಾದ ಭಾಸ್ಕರ ಭಟ್ಟ ಅವರು ಬರಗದ್ದೆ ಶಾಲೆಯಲ್ಲಿ 3ನೇ ತರಗತಿಯವರೆಗೆ ಓದಿ ನಂತರ ಉತ್ತಮ ಕೃಷಿಕರಾದರು. ಜೊತೆಗೆ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ತಂದೆ-ತಾಯಿ ಅವರ ಪಾಲಿಗೆ ಮೊದಲ ಗುರು. ಅವರಿಂದಲೇ ಯಕ್ಷಗಾನದ ಕಡೆ ಆಸಕ್ತಿ ಮೂಡಿತು.

ADVERTISEMENT
ADVERTISEMENT

ಭಾಗವತಿಕೆಯ ಕಲಿಯುವ ಹಂಬಲದಿoದ 1978-79ನೇ ಸಾಲಿನಲ್ಲಿ ಕೋಟದಲ್ಲಿದ್ದ ಹಂಗಾರಕಟ್ಟೆ ಕಲಾ ಕೇಂದ್ರ ಭಾಸ್ಕರ ಭಟ್ಟರು ಸೇರಿದರು. ಅಲ್ಲಿ ನಾರಣಪ್ಪ ಉಪ್ಪೂರರಲ್ಲಿ ಎರಡು ವರ್ಷ ಭಾಗವತಿಕೆಯ ಅಭ್ಯಾಸ ಮಾಡಿದರು. ಆ ಅವಧಿಯಲ್ಲಿ ಉಪ್ಪೂರರು ತಾವು ಪ್ರಧಾನ ಭಾಗವತರಾಗಿದ್ದ ಅಮೃತೇಶ್ವರಿ ಮೇಳದ ಆಟಗಳಿಗೆ ಆಗಾಗ ಶಿಷ್ಯರನ್ನು ಕರೆದೊಯ್ಯುತ್ತಿದ್ದರು. ಅಲ್ಲಿ ಶಿಷ್ಯರಿಗೆ ಪದ್ಯ ಹೇಳಲು ಅವಕಾಶ ಮಾಡಿಕೊಡುತ್ತಿದ್ದರು. ತರಗತಿಯ ಕಲಿಕೆಯ ಜೊತೆಗೆ ಮೇಳದಲ್ಲಿ ಪ್ರಾಯೋಗಿಕ ಕಲಿಕೆಗೂ ಅವಕಾಶ ಸಿಕ್ಕಿತು.

Advertisement. Scroll to continue reading.

`ನಮ್ಮ ಪಾಲಿಗೆ ಉಪ್ಪೂರರು ಕೇವಲ ಯಕ್ಷಗಾನದ ಗುರುಗಳಲ್ಲ. ಆದರ್ಶ ಬದುಕಿಗೆ ಅಡಿಪಾಯ ಹಾಕಿಕೊಟ್ಟ ಮಹಾನ್ ವ್ಯಕ್ತಿ. ದೇವರೇ ಗುರುವಿನ ರೂಪದಲ್ಲಿ ಬಂದಿರುವ ಭಾವನೆ ನಮ್ಮಲ್ಲಿದೆ’ ಎಂದು ಭಾಸ್ಕರ ಭಟ್ಟರು ನೆನೆಯುತ್ತಾರೆ. ಅವರ ಮಾರ್ಗದರ್ಶನದಿಂದ ನೈತಿಕತೆಯ ವಿಷಯದಲ್ಲಿ ಯಾವ ರಾಜಿ ಇಲ್ಲದೇ ಸಾತ್ವಿಕ ಬದುಕು ಸಾಗಿಸುತ್ತಿದ್ದೇನೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು. ಇನ್ನೂ ಪ್ರಸಿದ್ಧ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ, ಕೆ.ಪಿ.ಹೆಗಡೆ ಮೊದಲಾದವರು ಈ ಕೇಂದ್ರದಲ್ಲಿ ಭಾಸ್ಕರ ಭಟ್ಟರ ಜೊತೆಗಾರರಾಗಿದ್ದರು. ಭಾಸ್ಕರ ಭಟ್ಟರ ಪಾಲಿಗೆ ಅವರ ಸ್ನೇಹ ಸದಾ ಸ್ಮರಣೀಯ.

Advertisement. Scroll to continue reading.

ಎರಡು ವರ್ಷಗಳ ಕಾಲ ಕೇಂದ್ರದಲ್ಲಿ ಅಭ್ಯಾಸ ಮಾಡಿದ ಅವರು ಮೇಳದ ತಿರುಗಾಟಕ್ಕೆ ಸಜ್ಜಾಗಿದ್ದರು. ಆದರೆ, ಮನೆಯಲ್ಲಿ ಭಾಸ್ಕರ ಭಟ್ಟರ ತಂದೆ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಮನೆಗೆ ಮರಳಿ ಕೃಷಿ ಜೀವನ ಅವರಿಗೆ ಅನಿವಾರ್ಯವಾಯಿತು. ಆದರೂ, ಕಲೆಯ ಮೇಲಿನ ಸೆಳೆತ ದೂರವಾಗಲಿಲ್ಲ. ಸ್ಥಳೀಯವಾಗಿ ಯಕ್ಷಗಾನ, ತಾಳಮದ್ದಲೆಗಳಲ್ಲಿ ಭಾಗವತರಾಗಿ ಭಾಗವಹಿಸಿದರು. ತನ್ನ ವಿದ್ಯೆಯನ್ನು ಆಸಕ್ತರಿಗೆ ಧಾರೆ ಎರೆದು ಯಕ್ಷಗುರುವಾದರು. ಬಿಸಗೋಡ, ಆನಗೋಡ, ಚವತ್ತಿ, ಹೆಗ್ಗೋಡು ಮುಂತಾದೆಡೆ ತರಗತಿಗಳನ್ನು ನಡೆಸಿದರು. ಅವರ ಅಧೀನದಲ್ಲಿ 60ಕ್ಕೂ ಅಧಿಕ ಮಂದಿ ಯಕ್ಷಗಾನ ಕಲಿತಿದ್ದಾರೆ.

`ಅಣಲಗಾರ ಕ್ಷೇತ್ರ ಮಹಾತ್ಮೆ’ ಎಂಬ ಪ್ರಸಂಗವನ್ನು ಅವರು ಬರೆದಿದ್ದಾರೆ. 38 ವರ್ಷಗಳ ಕಾಲ ಕಲಾ ಸೇವೆ ನಡೆಸಿದ ಭಾಸ್ಕರ ಭಟ್ಟ 8 ವರ್ಷದ ಹಿಂದೆ ಅನಾರೋಗ್ಯದ ಕಾರಣ ನಿವೃತ್ತಿ ಪಡೆದರು. ಆನಗೋಡ ಯಕ್ಷಗಾನ ಹಾಗೂ ಕಲಾ ಮಿತ್ರ ಮಂಡಳಿ ಟ್ರಸ್ಟಿನ ದಶಮಾನೋತ್ಸವದ ಸಂದರ್ಭದಲ್ಲಿ ಮೇರು ಕಲಾವಿದ ಗೋಡೆ ನಾರಾಯಣ ಹೆಗಡೆ ಅವರಿಂದ ಸನ್ಮಾನ ಸ್ವೀಕರಿಸಿದ ಕ್ಷಣವನ್ನು ಅವರು ಸದಾ ಸ್ಮರಿಸುತ್ತಾರೆ.

ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ

ShareSendTweetShare
ADVERTISEMENT
Previous Post

ಬಸ್ ಚಾಲಕನ ರಂಪಾಟ: ಬಿಜೆಪಿ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಮೇಲೆ ಹಲ್ಲೆ!

Next Post

ಆಗ ನನಗೂ ಪ್ರೀ.. ನಿನಗೂ ಪ್ರೀ.. ಆದರೆ ಈಗ ಶಾಸಕ – ಸಚಿವರ ಉಲ್ಟಾ ರಾಗ!

Next Post

ಆಗ ನನಗೂ ಪ್ರೀ.. ನಿನಗೂ ಪ್ರೀ.. ಆದರೆ ಈಗ ಶಾಸಕ - ಸಚಿವರ ಉಲ್ಟಾ ರಾಗ!

ನಿನ್ನೆಯೇ ಮುಗಿದೊಯ್ದು ತೆಂಗಿನಕಾಯಿ ದಿನ.. ಆದರೆನಂತೆ, ಅನುದಿನವೂ ಅನುಸರಿಸೋಣ ಈ ವಿಧಾನ!

ಆಪತ್ಕಾಲದ ಆರ್ಥಿಕ ನೆರವಿಗೆ ಸಹ್ಯಾದ್ರಿ ಕ್ಷೇಮನಿಧಿ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.