6
  • Latest
Young women who protested against TSS

ನಮ್ಮ ಭೂಮಿ ನಮ್ಮ ಹಕ್ಕು | ಜಮೀನಿಗಾಗಿ ಪ್ರತಿಭಟಿಸಿದವರಿಗೆ ಜೈಲು: ಇನ್ನೂ ಸಿಕ್ಕಿಲ್ಲ ಜಾಮೀನು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ನಮ್ಮ ಭೂಮಿ ನಮ್ಮ ಹಕ್ಕು | ಜಮೀನಿಗಾಗಿ ಪ್ರತಿಭಟಿಸಿದವರಿಗೆ ಜೈಲು: ಇನ್ನೂ ಸಿಕ್ಕಿಲ್ಲ ಜಾಮೀನು!

TSS ಎದುರು ಸುಂದರಿಯರ ರಂಪಾಟ

AchyutKumar by AchyutKumar
September 6, 2024
in ವಿಡಿಯೋ
Young women who protested against TSS
advt advt advt
ADVERTISEMENT

ಶಿರಸಿ: TSS ಸಂಸ್ಥೆ ಅಧ್ಯಕ್ಷರ ಕೊಠಡಿಗೆ ನುಗ್ಗಿ ಅಲ್ಲಿನ ಸಿಬ್ಬಂದಿ ನಿಂದಿಸಿದನ್ನು ಪ್ರಶ್ನಿಸಿದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಶಿರಸಿ ತಡಗುಣಿ ಸಮೀಪದ ಸಂತೆಮನೆಯ ಪವಿತ್ರಾ ಹರಿಹರ ಹೆಗಡೆ (33) ಹಾಗೂ ರಂಜಿತಾ ಹರಿಹರ ಹೆಗಡೆ (35) ತಮ್ಮ ಜಮೀನು ವಿಷಯವಾಗಿ ಟಿಎಸ್‌ಎಸ್ ಕಚೇರಿಗೆ ಆಗಮಿಸಿದ್ದರು. 2010ರಲ್ಲಿ TSS’ನಲ್ಲಿ ಅವರು ಸಾಲ ಪಡೆದಿದ್ದು ಅದನ್ನು ತೀರಿಸಿರಲಿಲ್ಲ. 5 ವರ್ಷದ ಹಿಂದೆ ಈ ಜಮೀನು ಹರಾಜಾಗಿದ್ದು, ಬಡ್ಡಿಸಹಿತ ಸಾಲದ ಮೊತ್ತ ಸಂಸ್ಥೆಗೆ ತಲುಪಿತ್ತು. ಆ ಜಮೀನನ್ನು ಬೇರೆಯವರು ಖರೀದಿಸಿದ್ದರು. ಆದರೆ, ಇದೀಗ ಬಂದ ಈ ಸಹೋದರಿಯರು `ತಮ್ಮ ಜಮೀನು ತಮಗೆ ಕೊಡಿ’ ಎಂದು ದುಂಬಾಲು ಬಿದ್ದಿದ್ದರು. ಸೆ 4ರ ಸಂಜೆ 5 ಗಂಟೆಗೆ ಟಿಎಸ್‌ಎಸ್ ಕಚೇರಿಗೆ ಆಗಮಿಸಿ ಜಮೀನಿಗಾಗಿ ಪಟ್ಟು ಹಿಡಿದಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಅಲ್ಲಿನ ಆಡಳಿತ ಮಂಡಳಿಯವರು ಹಿಂದಿನ ಪ್ರಕರಣಗಳ ಬಗ್ಗೆ ವಿವರಿಸಿ ಮಾಹಿತಿ ನೀಡಿದ್ದು, ಅದನ್ನು ಒಪ್ಪಿಕೊಳ್ಳಲು ಈ ಇಬ್ಬರು ಮಹಿಳೆಯರು ಸಿದ್ದರಿರಲಿಲ್ಲ. ಸಿಬ್ಬಂದಿ ವಿರುದ್ಧ ಕಿಡಿಕಾರಿ ಅವರನ್ನು ವೈಯಕ್ತಿಕವಾಗಿ ನಿಂದಿಸಿದ್ದರು. ಕೆಟ್ಟದಾಗಿ ಬೈದಿದ್ದರು. ಇಷ್ಟಲ್ಲದೇ ಸಿಬ್ಬಂದಿ ಮೇಲೆ ಹಲ್ಲೆಗೂ ಯತ್ನಿಸಿದರು. ಆಗ ಅದನ್ನು ತಡೆಯಲು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಕಚೇರಿ ಸಮಯ ಮುಗಿದರೂ ಅವರು ಮನೆಗೆ ಮರಳದೇ ರಾದ್ಧಾಂತ ನಡೆಸಿದ್ದು, ಸಂಸ್ಥೆ ಉಪ ವ್ಯವಸ್ಥಾಪಕ ಪ್ರಕಾಶ ಹೆಗಡೆ ಇಬ್ಬರ ವಿರುದ್ಧ ದೂರು ನೀಡಿದರು.

Advertisement. Scroll to continue reading.

ಆಗ ಅಲ್ಲಿಗೆ ಆಗಮಿಸಿದ ಮಹಿಳಾ ಪೊಲೀಸರ ಮೇಲೆ ಸಹ ಈ ಇಬ್ಬರು ಹಲ್ಲೆ ನಡೆಸಿದ್ದು, ಇದರಿಂದ ಸಿಟ್ಟಾದ ಪೊಲೀಸರು ಕೂಡಲೇ ಆ ಇಬ್ಬರನ್ನು ವಶಕ್ಕೆ ಪಡೆದರು. ಈ ಕುರಿತು ಪಿಎಸ್‌ಐ ರತ್ನಾ ಕುರಿ ಸಹ ಪ್ರತ್ಯೇಕ ದೂರು ನೀಡಿದ್ದು ಎರಡೂ ದೂರಿನ ಅಡಿ ಈ ಸಹೋದರಿಯರನ್ನು ಬಂಧಿಸಲಾಗಿದೆ. ನ್ಯಾಯಾಲಯ ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಪವಿತ್ರಾ ಹಾಗೂ ರಂಜನಾರ ರಂಪಾಟದ ವಿಡಿಯೋ ಇಲ್ಲಿ ನೋಡಿ…

ShareSendTweetShare
ADVERTISEMENT
Previous Post

ಕಂಪ್ಯುಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

Next Post

ಕುಂದರಗಿಯ ಕೂಸಿನಮನೆಗೆ ಬಂದ IAS ಅಧಿಕಾರಿ

Next Post

ಕುಂದರಗಿಯ ಕೂಸಿನಮನೆಗೆ ಬಂದ IAS ಅಧಿಕಾರಿ

ಚಿನ್ನ ಕದ್ದ ಹೋಂ ಗಾರ್ಡಗೆ ಜೈಲಿನಲ್ಲಿ ಹಬ್ಬದೂಟ!

ಜೂಜು ಅಡ್ಡೆ ಮೇಲೆ ದಾಳಿ ನಡೆಸಿದವರಿಗೆ ಸಿಕ್ಕಿದ್ದು ಸತ್ತ ಕೋಳಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.